Uchila: ಬೈಕ್ ಢಿಕ್ಕಿ; ಸವಾರ ಗಂಭೀರ
Team Udayavani, Nov 3, 2023, 12:45 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಬಡಾ ಗ್ರಾಮ ಉಚ್ಚಿಲದ ಮಸೀದಿ ಬಳಿ ಬೈಕ್ ಢಿಕ್ಕಿ ಹೊಡೆದು ಸ್ಕೂಟಿ ಸವಾರ ದೇವರಾಜ್ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಸ್ಕೂಟಿ ಸಹಿತ ರಸ್ತೆಗೆ ಬಿದ್ದ ದೇವರಾಜ್ ಮುಖಕ್ಕೆ ಹಾಗೂ ಬಲಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಬೈಕ್ ಸವಾರ ಶಾಹಿದ್ ಹಾಗೂ ಸಹ ಸವಾರ ಎನೋಲ್ಸೆರಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.