ಉಡುಪಿ: ಸರಳ ಸಪ್ತೋತ್ಸವ ಶುಭಾರಂಭ
Team Udayavani, Jan 10, 2022, 8:05 AM IST
ಉಡುಪಿ: ಸರಕಾರದ ಕೋವಿಡ್ ಶಿಷ್ಟಾಚಾರದಂತೆ ಸರಳವಾಗಿ ಸೀಮಿತ ಭಕ್ತರ ಸಮ್ಮುಖ ಶ್ರೀಕೃಷ್ಣಮಠದಲ್ಲಿ ರವಿವಾರ ಅದಮಾರು ಮಠ ಪರ್ಯಾಯದ ಕೊನೆಯ ವಾರ್ಷಿಕ ಸಪ್ತೋತ್ಸವವು ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಸ್ಥ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಭಾರಂಭಗೊಂಡಿತು.
ಈ ಬಾರಿ ಪರ್ಯಾಯ ಮಠದಿಂದ ವಾಡಿಕೆಯ ಉತ್ಸವವಲ್ಲದೆ, ಎಂಟು ಸೇವಾಕರ್ತರ ಉತ್ಸವಗಳಿವೆ. ಇವರಲ್ಲಿ ಮೂವರು ಕರ್ಫ್ಯೂ ಕಾರಣದಿಂದ ಬರಲಿಲ್ಲ. ಇವರ ಬದಲು ಮಠದ ವ್ಯವಸ್ಥಾಪಕರೇ ಸೇವೆಯನ್ನು ನಡೆಸುತ್ತಿದ್ದಾರೆ.
ರಥೋತ್ಸವಕ್ಕೆ ಮೊದಲು ತೆಪ್ಪೋತ್ಸವ ನಡೆಯಿತು.
ತೆಪ್ಪವನ್ನು ವಿಶ್ವಾರ್ಪಣಂ ಬ್ಯಾಕ್ಗ್ರೌಂಡ್ನಿಂದ ಅಲಂಕರಿಸಲಾಗಿತ್ತು. ಆ ಬಳಿಕ ಗರುಡ ರಥ ಮತ್ತು ಮಹಾಪೂಜೆ ರಥಗಳ ಉತ್ಸವ ನಡೆಯಿತು. ಗರುಡ ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದು ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಯನ್ನು ಇರಿಸಿ ಪೂಜಿಸಲಾಯಿತು. ಎರಡೂ ರಥ ಗಳಗಾಲಿ ಶಿಥಿಲವಾಗಿದ್ದು ಗಾಲಿಯನ್ನು ಹೊಸತಾಗಿ ರಚಿಸಲಾಗಿದೆ.
ವರ್ಷದ 6 ತಿಂಗಳೂ ರಥೋತ್ಸವ ನಡೆಯುವುದರಿಂದ ಗಾಲಿಗಳ ರಕ್ಷಣೆಗಾಗಿ ಸೋಲ್ ಅಳವಡಿಸಲಾಗಿದೆ. ದುರಸ್ತಿ ಗೊಳಿಸಿದ ರಥದಲ್ಲಿ ಮೊದಲ ಬಾರಿ ಉತ್ಸವ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ