Uttarakhand: ಲಗ್ನವಾದ ಒಂದೇ ವರ್ಷದಲ್ಲಿ ವಿಚ್ಛೇದನಕ್ಕೆ ಅವಕಾಶ ಇಲ್ಲ: ಸಮಾನ ಸಂಹಿತೆ

60 ದಿನಗಳಲ್ಲಿ ವಿವಾಹ ನೋಂದಣಿ ಕಡ್ಡಾಯ- ಉಯಿಲು ಇಲ್ಲದ ಆಸ್ತಿ ಮಕ್ಕಳಿಗೆ ಸಮಾನ ಹಂಚಿಕೆ

Team Udayavani, Feb 6, 2024, 11:58 PM IST

ucc

ಡೆಹ್ರಾಡೂನ್‌: “ಉತ್ತರಾಖಂಡದಲ್ಲಿ ಮದುವೆಯಾದ 60 ದಿನಗಳಲ್ಲಿ ಅದನ್ನು ನೋಂದಣಿ ಮಾಡಿಸಬೇಕು. ಜತೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕವೂ ಕ್ರಮ ಬದ್ಧ ಗೊಳಿಸಬಹುದು.’

ಇದು ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಅವರು ಮಂಗಳವಾರ ಮಂಡಿಸಿದ ಸಮಾನ ನಾಗರಿಕ ಸಂಹಿತೆಯಲ್ಲಿನ ಪ್ರಧಾನ ಅಂಶಗಳಲ್ಲೊಂದು.

ಮದುವೆಯನ್ನು ವಿವಿಧ ಧಾರ್ಮಿಕ ನಂಬಿಕೆ ಗಳು, ಆಚರಣೆಗಳ ಮೂಲಕ ವಿಧಿಬದ್ಧಗೊಳಿಸ ಬಹುದು. 1909ರ ಆನಂದ್‌ ವಿವಾಹ ಕಾಯ್ದೆ, 1954ರ ವಿಶೇಷ ವಿವಾಹ ಕಾಯ್ದೆ, 1937ರ ಆರ್ಯ ವಿವಾಹ ಕಾಯ್ದೆಯ ಮೂಲ ಕವೂ ವಿಧಿಬದ್ಧಗೊಳಿಸಬಹುದು ಎಂದಿದ್ದಾರೆ.

“2010, ಮಾ.26ರ ನಂತರ ನಡೆದ ಎಲ್ಲ ಮದುವೆಗಳನ್ನೂ 6 ತಿಂಗಳೊಳಗೆ ನೋಂದಣಿ ಮಾಡಿಸಬೇಕು’ ಎಂದು ಹೇಳಿದ್ದಾರೆ. ಒಂದು ವೇಳೆ ನೋಂದಣಿ ಮಾಡಿಸದಿದ್ದರೆ 20000 ರೂ. ದಂಡ ಪಾವತಿಸಬೇಕಾಗುತ್ತದೆ. ಹಾಗಂತ ವಿವಾಹ ವನ್ನು ಅಸಿಂಧು ಎಂದು ಘೋಷಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ವಿಧೇಯಕದಲ್ಲಿನ ಮತ್ತೂಂದು ಮಹತ್ವದ ಅಂಶವೆಂದರೆ ಮದುವೆ ವೇಳೆ ಸಂಗಾತಿಗಳಿಗೆ ಇನ್ನೊಬ್ಬ ಸಂಗಾತಿಯಿಲ್ಲದ ಪಕ್ಷದಲ್ಲಿ, ಮದುವೆಯನ್ನು ವಿಧಿಬದ್ಧ ಎಂದು ಪ್ರಕಟಿಸಬಹುದು.

ವಯೋಮಿತಿ ನಿಗದಿ: ಮದುವೆಯಾಗಲು ಪುರುಷನಿಗೆ 21 ವರ್ಷ, ಮಹಿಳೆಗೆ 18 ವರ್ಷ ಪೂರ್ಣವಾಗಿರಲೇಬೇಕು ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ. ಮದುವೆ ವೇಳೆ ಇಬ್ಬರೂ, ಯಾವುದೇ ಮಾನಸಿಕ ಕಾರಣಗಳಿಂದ ಸೂಕ್ತ ರೀತಿಯಲ್ಲಿ ಒಪ್ಪಿಗೆ ನೀಡಲು ಅಸಮರ್ಥರಾಗಿ ರಬಾರದು. ಒಂದು ವೇಳೆ ಇಬ್ಬರೂ ಸಮ್ಮತ ರೀತಿಯಲ್ಲಿ ಒಪ್ಪಿಗೆ ನೀಡಿದರೂ, ಮದುವೆಗೆ ಅಡ್ಡಿಯಾಗುವಂತಹ ಯಾವುದೇ ಮಾನಸಿಕ ಅಥವಾ ಅದನ್ನು ಹೋಲುವಂತಹ ಸಮಸ್ಯೆ ಹೊಂದಿರಬಾರದು ಎಂದು ಸರ್ಕಾರ ತಿಳಿಸಿದೆ.

ವರ್ಷದೊಳಗಿಲ್ಲ ವಿಚ್ಛೇದನ: ಕೆಲವೊಂದು ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ವಿವಾಹವಾದ ಒಂದೇ ವರ್ಷದಲ್ಲಿ ವಿಚ್ಛೇದನಕ್ಕೆ ಅವಕಾಶ ಇಲ್ಲ ಎಂದು ಸಿಎಂ ಧಾಮಿ ಹೇಳಿದರು. ಸಂಗಾತಿಗಳಲ್ಲಿ ಒಬ್ಬರು ತಾವು ಅಶ್ಲೀಲ ಕೃತ್ಯಗಳಿಗೆ ಬಲಿಯಾಗಿದ್ದರೆ, ಮಾನಸಿಕ, ದೈಹಿಕ ಹಿಂಸೆಗೆ ತುತ್ತಾಗಿದ್ದರೆ, ಅನಗತ್ಯವಾಗಿ ದೂರ ತಳ್ಳಲ್ಪಟ್ಟಿದ್ದರೆ ನ್ಯಾಯಾಲಯದ ಕದ ತಟ್ಟಬಹುದು. ಧಾರ್ಮಿಕ ಮತಾಂತರಗೊಳಗಾದರೆ, ಸಂಗಾತಿ ಮಾನಸಿಕ ಅಸ್ವಾಸ್ಥ್ಯ ಹೊಂದಿದ್ದರೆ, ಲೈಂಗಿಕ ರೋಗಗಳನ್ನು ಹೊಂದಿದ್ದರೂ ದೂರಾಗಬಹುದು.
ಪಿತ್ರಾರ್ಜಿತ ಆಸ್ತಿ ಹಂಚಿಕೆ: ನೋಂದಾಯಿತ ವಿಲ್‌ ಬರೆಯದೇ ವ್ಯಕ್ತಿಯೊಬ್ಬ ಮೃತಪಟ್ಟರೆ, ಆತ ಕುಟುಂಬ ಸದಸ್ಯರಿಗೆ ಸಮಾನವಾಗಿ ಆಸ್ತಿ ಹಂಚಿಕೆ ಯಾ ಗುತ್ತದೆ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಆತನಿಗೆ ನೇರ ಕುಟುಂಬ ಸದಸ್ಯರು ಇಲ್ಲದ ಪಕ್ಷದಲ್ಲಿ, ಆತನ ತಂದೆಯ ಕಡೆಯ ಸಮೀಪದ ರಕ್ತಸಂಬಂಧಿಗಳಿಗೆ ಆಸ್ತಿ ಹಂಚಿಕೆಯಾಗುತ್ತದೆ. ಅವರೂ ಇಲ್ಲವಾದರೆ, ದೂರಸಂಬಂಧಿಗಳಿಗೆ ಪಾಲು ಕೇಳುವ ಅಧಿಕಾರವಿರುತ್ತದೆ. ಆಸ್ತಿಯಲ್ಲಿ ಹೆಣ್ಣು ಮಕ್ಕಳು, ಗಂಡು ಮಕ್ಕಳಿಗೆ ಸಮಾನವಾದ ಅಧಿಕಾರವಿಕರುತ್ತದೆ. ಹಿಂದೂ ಅವಿಭಕ್ತ ಕುಟುಂಬಕ್ಕೆ ಈ ನಿಯಮ ಅನ್ವಯವಾಗುತ್ತದೆ

ವಿವಾಹಕ್ಕೆ ಏನೇನು ಕಾನೂನುಗಳು?
-60 ದಿನಗಳೊಳಗೆ ನೋಂದಣಿ ಕಡ್ಡಾಯ.
-2010, ಮಾ.26ರ ನಂತರ ನಡೆದ ಎಲ್ಲ ಮದುವೆಗಳನ್ನೂ 6 ತಿಂಗಳೊಳಗೆ ನೋಂದಣಿ
-ಮದುವೆಯಾಗಲು ಪುರುಷನಿಗೆ 21 ವರ್ಷ, ಮಹಿಳೆಗೆ 18 ವರ್ಷ ಮುಗಿದಿರಲೇಬೇಕು.
-ಇಬ್ಬರೂ, ಮಾನಸಿಕ ಕಾರಣಗಳಿಂದ ಸೂಕ್ತ ರೀತಿ ಯಲ್ಲಿ ಒಪ್ಪಿಗೆ ನೀಡಲು ಅಸಮರ್ಥರಾಗಿರಬಾರದು.

ವಿಚ್ಛೇದನ ನಿಯಮಗಳು
-ಮಹಿಳೆಯರಿಗೆ ವಿಚ್ಛೇದನ ಕೇಳಲು ವಿಶೇಷ ಹಕ್ಕು
-ಧಾರ್ಮಿಕ ಮತಾಂತರ, ಸಂಗಾತಿ ಮಾನಸಿಕ ಅಸ್ವಾಸ್ಥ ಹೊಂದಿದ್ದರೆ ವಿಚ್ಛೇದನ
-ಸಂಗಾತಿ ಅನಗತ್ಯವಾಗಿ ದೂರವಾಗಿದ್ದರೆ ಸಾಧ್ಯ

ಪಿತ್ರಾರ್ಜಿತ ಆಸ್ತಿ ಹಂಚಿಕೆ
-ನೋಂದಾಯಿತ ವಿಲ್‌ ಬರೆಯದೇ ವ್ಯಕ್ತಿ ಮೃತಪಟ್ಟರೆ, ಕುಟುಂಬಸ್ಥರಿಗೆ ಸಮಾನ ಆಸ್ತಿ ಹಂಚಿಕೆ
-ಸಮೀಪದ ಸಂಬಂಧಿಗಳು ಇಲ್ಲದಿದ್ದರೆ ದೂರಸಂಬಂಧಿಗಳಿಗೆ ಆಸ್ತಿಯಲ್ಲಿ ಪಾಲು
-ಹೆಣ್ಣು ಮಕ್ಕಳು, ಗಂಡು ಮಕ್ಕಳಿಗೆ ಸಮಾನವಾದ ಅಧಿಕಾರ

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಬಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಬಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.