Water ಮಿತ ಬಳಕೆ: ಎಂಆರ್ಪಿಎಲ್ಗೆ ಇಂಧನ, ಪರಿಸರ ಪ್ರತಿಷ್ಠಾನದ ಪ್ರಶಸ್ತಿ
Team Udayavani, Sep 2, 2023, 11:26 PM IST
ಸುರತ್ಕಲ್: ನೀರಿನ ಮಿತವ್ಯಯ, ಸಮರ್ಪಕ ನಿರ್ವಹಣೆಗಾಗಿ ಇಂಧನ ಮತ್ತು ಪರಿಸರ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿಯನ್ನು ಎಂಆರ್ಪಿಎಲ್ ಕಂಪನಿಯು ಪಡೆದುಕೊಂಡಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ಹೌಸಿಂಗ್ ಆಂಡ್ ಅರ್ಬನ್ ಅಫೇರ್ಸ್ ಮಿನಿಸ್ಟ್ರಿಯ ಸಚಿವ ಕೌಶಲ್ ಕಿಶೋರ್ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕಂಪೆನಿಯ ಆಪರೇಷನ್ ವಿಭಾಗದ ವೆಂಕಟೇಶ್ ಎಂ ನಾಯಕ್, ಎಚ್ಎಸ್ಇ ವಿಭಾಗದ ಎಂಜಿನಿಯರ್ ಅರ್ಪಿತ್ ಗೌರ್,ಎಂಆರ್ಪಿಎಲ್ ತಂಡದ ಪರವಾಗಿ ಪ್ರಶಸ್ತಿಯನ್ನು ಪಡೆದರು.
ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ರಕ್ಷಣೆಗೆ ಕೊಡುಗೆ ನೀಡಲು ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರತಿ ಕೈಗಾರಿಕಾ ವಲಯಕ್ಕೆ ನೀಡಲಾಗುತ್ತಿದೆ.
ನೀರಿನ ಕೊರತೆಯ ಸವಾಲಿನ ಅವಧಿಯಲ್ಲಿ ಶುದ್ಧ ನೀರಿನ ಅವಲಂಬನೆಯನ್ನು ಕಡಿಮೆ ಮಾಡಲು 2023ರ ಎಪ್ರಿಲ್ನಿಂದ ಜೂನ್ವರೆಗಿನ ಬೇಸಗೆಯ ತಿಂಗಳುಗಳಲ್ಲಿ ಸಂಸ್ಕರಣಾಗಾರವು ನೀರಿನ ಸಂರಕ್ಷಣೆಯ ಪ್ರಯತ್ನಗಳನ್ನು ಕೈಗೊಂಡಿದೆ.
ಸಂಸ್ಕರಣಾಗಾರವು ತೆಗೆದುಕೊಂಡ ಕ್ರಮಗಳು ತನ್ನದೇ ಆದ ಸುಸ್ಥಿರತೆಗೆ ಕೊಡುಗೆ ನೀಡಿದ್ದು ಮಾತ್ರವಲ್ಲದೆ ಮಂಗಳೂರು ನಗರದ ನಿವಾಸಿಗಳಿಗೆ ತನ್ನದೇ ಅಣೆಕಟ್ಟು ನೀರು ಹರಿಸುವ ಮೂಲಕ ಪ್ರಯೋಜನವನ್ನು ನೀಡಿವೆ. ಸಂಸ್ಕರಿಸಿದ ನಗರದ ಒಳಚರಂಡಿ ನೀರು, ತನ್ನದೇ ಸಂಸ್ಕರಣ ಘಟಕವನ್ನು ಸಂಸ್ಥೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ