ಕೊಲೆ ಬೆದರಿಕೆ ಹಾಕಿದವರು ಯಾರೆಂದು ಗೊತ್ತಿದೆ
Team Udayavani, Jan 26, 2020, 3:07 AM IST
ಬೆಂಗಳೂರು: “ನನಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಸುದ್ದಿ ಹಬ್ಬಿದೆ. ಹಾಗೇನಾದರೂ ಬೆದರಿಕೆ ಇದ್ದರೆ ಅದು ಬಿಜೆಪಿಯ ಅಂಗಸಂಸ್ಥೆಗಳಿಂದಲೇ ಇರಬಹುದು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ, “ಮಾಜಿ ಮುಖ್ಯಮಂತ್ರಿಯಾಗಿ ಜನರಿಗೆ ಹತ್ತಿರದಲ್ಲಿ ಸಿಗುವವನು ನಾನು. ಭದ್ರತೆಯವರನ್ನು ದೂರ ಇಟ್ಟು ಜನರ ಮಧ್ಯೆ ಇದ್ದೇನೆ. ನನ್ನ ಮೇಲೆ ಸಣ್ಣ ದಬ್ಟಾಳಿಕೆ ನಡೆದರೂ ಅವರು ಸುಟ್ಟು ಭಸ್ಮ ಆಗೋಗ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾನೂ ಸೇರಿ ರಾಜ್ಯದ ಕೆಲವು ಮಠಾಧೀಶರು, ಪ್ರಗತಿಪರ ವ್ಯಕ್ತಿಗಳ ಹತ್ಯೆಗೆ ಬೆದರಿಕೆ ಹಾಕಿರುವುದು ಗಮನಕ್ಕೆ ಬಂದಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ. ಬಿಜೆಪಿಯ ಅಂಗಸಂಸ್ಥೆಗಳಲ್ಲಿನ ಕೆಲವು ವ್ಯಕ್ತಿಗಳು ಇವತ್ತು ಬೇರೆ ಸಮಾಜದ ಭಯೋತ್ಪಾದಕ ಚಟುವಟಿಕೆ ಬಗ್ಗೆ ಮಾತನಾಡುತ್ತಾರೆ. ಆದರೆ, ಅವರಲ್ಲೇ ಕೆಲವರು ಭಯ ಹುಟ್ಟಿಸುವ ಚಟುವಟಿಕೆ ನಡೆಸುತ್ತಾರೆ.
ಅದನ್ನು ಅತ್ಯಂತ ಜಾಗರೂಕತೆಯಿಂದ ನಡೆಸುತ್ತಾರೆ. ಮಹಾತ್ಮಗಾಂಧಿ ಅವರನ್ನು ಹತ್ಯೆ ಮಾಡಿದವರಿಗೆ ನಾನು ಯಾವ ಲೆಕ್ಕ?’ ಎಂದರು. ಮಂಗಳೂರು ಘಟನೆಯ ಸತ್ಯಾಂಶ ಹೇಳಿದ ನಂತರ ನನ್ನ ಬಗ್ಗೆ ಪಾಕಿಸ್ತಾನ ಪರವಾಗಿ ಮಾತನಾಡುವವನು ಎಂದು ಹೇಳುತ್ತಿದ್ದಾರೆ. ಆದರೆ, ನನ್ನ ಕರ್ಮಭೂಮಿ ಕರ್ನಾಟಕ. ಪಾಕಿಸ್ತಾನದ ಬಗ್ಗೆ ಪ್ರತಿದಿನ ಭಜನೆ ಮಾಡುವವರು ಬಿಜೆಪಿಯವರು ಎಂದು ಆರೋಪಿಸಿದರು.
ರಾಜ್ಯದ ಪಾಲು ಎಲ್ಲಿ?: ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ನಮ್ಮ ಪಾಲಿನಲ್ಲಿ 17 ಸಾವಿರ ಕೋಟಿ ರೂ.ಕಡಿತ ಆಗುತ್ತಿದೆ. ಕೇಂದ್ರ ಸರ್ಕಾರದ ಆದಾಯ ಸಂಗ್ರಹ 3.50 ರಿಂದ 4 ಲಕ್ಷ ಕೋಟಿ ರೂ.ಕಡಿಮೆ ಆಗುತ್ತಿದೆ ಎಂಬ ವರದಿಗಳು ಇವೆ. ಈಗಲಾದರೂ ಬಿಜೆಪಿಯವರು ಹಿಡನ್ ಅಜೆಂಡಾ ಪಕ್ಕದಲ್ಲಿಟ್ಟು, ದೇಶದ ಜನರ ಸಮಸ್ಯೆ ಬಗೆಹರಿಸಲು ಗಮನ ಕೊಡಬೇಕು ಎಂದು ಹೇಳಿದರು.
ಟ್ವಿಟ್ಟಿಗರು-ನೆಟ್ಟಿಗರ ವಿರುದ್ಧ ಎಚ್ಡಿಕೆ “ಜಾತಿ ‘ ಅಸ್ತ್ರ: ಸಿಎಎ, ಎನ್ಆರ್ಸಿ ವಿರುದ್ಧದ ಹೋರಾಟ ಹಾಗೂ ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಅವಮಾನಿಸುತ್ತಿರುವವರ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಡಿಮಿಡಿ ಗೊಂಡಿದ್ದು, “ಜಾತಿ’ ಅಸ್ತ್ರ ಪ್ರಯೋಗಿಸಿದ್ದಾರೆ.
ಟ್ವೀಟ್ 1: ಕರ್ನಾಟಕದಲ್ಲಿ ಒಕ್ಕಲಿಗ ನಾಯ ಕತ್ವದ ವಿರುದ್ಧ ಹಿಂದಿ ನಿಂದಲೂ ದೌರ್ಜನ್ಯ ರಾಜ ಕಾರಣ ಇದ್ದದ್ದೇ. ಮೂದ ಲಿಸುವುದು, ಸಲ್ಲದ ಆರೋಪ ಮಾಡುವುದು ಈ ಹಿಂದೆ ನಡೆದ ತಂತ್ರಗಳು. ಆದರೆ, ಈಗಿನ ಕೊಲ್ಲುವ ಸಂಚು ಹಾಗೂ ಪಾಕಿಸ್ತಾನಿ ಪ್ರಯೋಗ ಒಕ್ಕಲಿಗ ರಾಜಕಾರಣದ ವಿರುದ್ಧ ನಡೆಯುತ್ತಿರುವ ಮತ್ತೂಂದು ಬಗೆಯ ದೌರ್ಜನ್ಯ.
ಟ್ವೀಟ್ 2: ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇವೇಗೌಡರ ಮೇಲೆ ಹಲ್ಲೆ ಪ್ರಯತ್ನಗಳು ನಡೆದಿವೆ. ಅವರಿಗೆ ಅಧಿಕಾರ ವಂಚಿಸಲು ಯತ್ನಿಸಿದ್ದನ್ನು ಸಮಾಜ ನೋಡಿದೆ. ಈಗ ಈ ಶಕ್ತಿಗಳು ನನ್ನ ವಿರುದ್ಧ ನಿಂತಿವೆ. ಇದಕ್ಕೆ ಬೆದರುವ ವ್ಯಕ್ತಿ ನಾನಲ್ಲ.
ಟ್ವೀಟ್ 3: ನನ್ನನ್ನು ಅವಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ, ನಿಮ್ಮ ಜೀನ್ಗಳು ಪಾಕಿಸ್ತಾನ ದಲ್ಲಿರಬಹುದು ಅಥವಾ ಜರ್ಮನಿಯ ನಾಜಿಗಳಲ್ಲಿ ರಬಹುದು. ನನ್ನ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲು ಯತ್ನಿಸುತ್ತಿರು ವವರು ನವ ಉಗ್ರರು. ಅವಮಾನಿಸಲು ಯತ್ನಿಸು ತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು.
ತುಕಡೆ, ತುಕಡೆ ಪಾರ್ಟಿ ಮುಗಿಸುತ್ತೇವೆ ಎಂದಿರುವ ಅಮಿತ್ ಶಾ ಅವರೇ, ನಿಮ್ಮದೂ ಮೊದಲು ತುಕಡೆ ಪಾರ್ಟಿ ಆಗಿತ್ತು ಎಂಬುದನ್ನು ತಿಳಿದುಕೊಳ್ಳಿ. ವಾಜಪೇಯಿ, ಅಡ್ವಾಣಿ ಕಟ್ಟಿದ ಪಕ್ಷದಿಂದ ಹಿರಿಯರನ್ನು ಬದಿಗೆ ಸರಿಸಿ, ಹಿಂದೂ, ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದೀರಿ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ