ಐಪಿಎಲ್‌: ಗುಜರಾತ್‌ ಟೈಟಾನ್ಸ್‌ ಪ್ಲೇ ಆಫ್ ಗೆ


Team Udayavani, May 11, 2022, 1:41 AM IST

ಐಪಿಎಲ್‌: ಗುಜರಾತ್‌ ಟೈಟಾನ್ಸ್‌ ಪ್ಲೇ ಆಫ್ ಗೆ

ಪುಣೆ: ಐಪಿಎಲ್‌ ಅಂಕಪಟ್ಟಿಯ ಅಗ್ರ ಎರಡು ಸ್ಥಾನಗಳಲ್ಲಿರುವ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ನಡುವಣ ಮಂಗಳವಾರದ ಮುಖಾಮುಖಿಯಲ್ಲಿ ಲಕ್ನೋ ತಂಡವು ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ 62 ರನ್ನುಗಳಿಂದ ಸೋಲನ್ನು ಕಂಡಿದೆ.

ಅಮೋಘ ಬೌಲಿಂಗ್‌ ದಾಳಿ ಸಂಘಟಿಸಿದ ಗುಜರಾತ್‌ ತಂಡವು ಲಕ್ನೋ ಆಟಗಾರರನ್ನು ಕಟ್ಟಿಹಾಕಲು ಯಶಸ್ವಿಯಾಯಿತು. ರಶೀದ್‌ ಖಾನ್‌ ಸಹಿತ ಯಶ್‌ ದಯಾಳ್‌ ಮತ್ತು ಸಾಯಿ ಕಿಶೋರ್‌ ಅವರ ದಾಳಿಗೆ ತತ್ತರಿಸಿದ ಲಕ್ನೋ ತಂಡವು 13.5 ಓವರ್‌ಗಳಲ್ಲಿ ಕೇವಲ 82 ರನ್ನಿಗೆ ಆಲೌಟಾಯಿತು. ಈ ಮೊದಲು ಶುಭಮನ್‌ ಗಿಲ್‌ ಅವರ ಅಜೇಯ 63 ರನ್‌ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡವು 4 ವಿಕೆಟಿಗೆ 144 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು.

ಅಗ್ರಸ್ಥಾನದಲ್ಲಿ ಗುಜರಾತ್‌
ಈ ಗೆಲುವಿನಿಂದ ಗುಜರಾತ್‌ ಟೈಟಾನ್ಸ್‌ ತಂಡವು ಆಡಿದ 12 ಪಂದ್ಯಗಳಿಂದ 9ರಲ್ಲಿ ಜಯ ಸಾಧಿಸಿ 18 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿತಲ್ಲದೇ ಪ್ಲೇ ಆಫ್ಗೆ ಅಧಿಕೃತವಾಗಿ ತೇರ್ಗಡೆಗೊಂಡಿತು. ಲಕ್ನೋ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕ್ವಿಂಟನ್‌ ಡಿ ಕಾಕ್‌, ನಾಯಕ ರಾಹುಲ್‌, ಕೃಣಾಲ್‌ ಪಾಂಡ್ಯ, ಆಯುಷ್‌ ಬದೋನಿ, ಕರಣ್‌ ಶರ್ಮ ಬ್ಯಾಟಿಂಗ್‌ನಲ್ಲಿ ಘೋರ ವೈಫ‌ಲ್ಯ ಅನುಭವಿಸಿದರು. ಕಾಕ್‌, ದೀಪಕ್‌ ಹೂಡಾ ಮತ್ತು ಆವೇಶ್‌ ಖಾನ್‌ ಮಾತ್ರ ಎರಡಂಕೆಯ ಮೊತ್ತ ಗಳಿಸಿದರು. 27 ರನ್‌ ಗಳಿಸಿದ ಹೂಡಾ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.
ಮಾರಕ ದಾಳಿ ಸಂಘಟಿಸಿದ ರಶೀದ್‌ ಖಾನ್‌ ತನ್ನ ನಾಲ್ಕು ಓವರ್‌ಗಳ ದಾಳಿಯಲ್ಲಿ 24 ರನ್ನಿಗೆ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಯಶ್‌ ದಯಾಳ್‌ ಮತ್ತು ಸಾಯಿ ಕಿಶೋರ್‌ ತಲಾ ಎರಡು ವಿಕೆಟ್‌ ಉರುಳಿಸಿದರು.

ಈ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಳ್ಳುವ ಹಾರ್ದಿಕ್‌ ಪಾಂಡ್ಯ ಯೋಜನೆ ಕ್ಲಿಕ್‌ ಆಗಲಿಲ್ಲ. ಪುಣೆಯ “ಎಂಸಿಎ ಸ್ಟೇಡಿಯಂ’ ಟ್ರ್ಯಾಕ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದಂತೆ ಕಂಡುಬಂತು. ಲಕ್ನೋ ಬೌಲರ್ ಆರಂಭದಿಂದಲೇ ಬಲವಾದ ಪ್ರಹಾರವಿಕ್ಕಿದರು. ವೃದ್ಧಿಮಾನ್‌ ಸಾಹಾ ಐದೇ ರನ್‌ ಮಾಡಿ ಮೊಹ್ಸಿನ್‌ ಖಾನ್‌ ಮೋಡಿಗೆ ಸಿಲುಕಿದರು. ತಂಡಕ್ಕೆ ಮರಳಿದ ಮ್ಯಾಥ್ಯೂ ವೇಡ್‌ ಕೂಡ ಅವಕಾಶ ವ್ಯರ್ಥಗೊಳಿಸಿದರು. ಅವರದು ಹತ್ತೇ ರನ್‌ ಗಳಿಕೆ. ನಾಯಕ ಹಾರ್ದಿಕ್‌ ಪಾಂಡ್ಯ ಆಟ 11 ರನ್ನಿಗೆ ಮುಗಿಯಿತು. ಎರಡೂ ವಿಕೆಟ್‌ ಆವೇಶ್‌ ಖಾನ್‌ ಪಾಲಾಯಿತು. ಇಬ್ಬರೂ ಕೀಪರ್‌ ಡಿ ಕಾಕ್‌ಗೆ ಕ್ಯಾಚಿತ್ತರು.

ಪವರ್‌ ಪ್ಲೇಯಲ್ಲಿ 2ಕ್ಕೆ 35 ರನ್‌ ಗಳಿಸಿ ಪರದಾಡಿದ ಗುಜರಾತ್‌, 10 ಓವರ್‌ ಮುಕ್ತಾಯಕ್ಕೆ 3ಕ್ಕೆ 59 ರನ್‌ ಗಳಿಸಿತ್ತು. ಆಗ ಆರಂಭಕಾರ ಶುಭಮನ್‌ ಗಿಲ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದರು. ಜತೆಯಲ್ಲಿದ್ದವರು ಡೇವಿಡ್‌ ಮಿಲ್ಲರ್‌. ಇವರಿಬ್ಬರು ಸೇರಿಕೊಂಡು 16ನೇ ಓವರ್‌ ತನಕ ಜತೆಯಾಟ ಮುಂದುವರಿಸಿದರು. ಆದರೆ ಈ ಅವಧಿಯಲ್ಲಿ ವಿಶೇಷ ಬ್ಯಾಟಿಂಗ್‌ ಅಬ್ಬರವೇನೂ ಕಂಡುಬರಲಿಲ್ಲ. .

ಈ ಜೋಡಿಯನ್ನು ಬೇರ್ಪಡಿಸಿದವರು ಜೇಸನ್‌ ಹೋಲ್ಡರ್‌. 24 ಎಸೆತಗಳಿಂದ 26 ರನ್‌ ಮಾಡಿದ ಮಿಲ್ಲರ್‌ ಪೆವಿಲಿಯನ್‌ ಸೇರಿಕೊಂಡರು. ಇದರಲ್ಲಿ ಒಂದು ಫೋರ್‌ ಹಾಗೂ ಗುಜರಾತ್‌ ಸರದಿಯ ಏಕೈಕ ಸಿಕ್ಸರ್‌ ಸೇರಿತ್ತು. ಈ ನಡುವೆ ಗಿಲ್‌ ಅರ್ಧ ಶತಕ ಸಂಭ್ರಮದೊಂದಿಗೆ ಮುಂದುವರಿದರು.

 

ಸ್ಕೋರ್‌ ಪಟ್ಟಿ
ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಆವೇಶ್‌ ಬಿ ಮೊಹ್ಸಿನ್‌ 5
ಶುಭಮನ್‌ ಗಿಲ್‌ ಔಟಾಗದೆ 63
ಮ್ಯಾಥ್ಯೂ ವೇಡ್‌ ಸಿ ಡಿ ಕಾಕ್‌ ಬಿ ಆವೇಶ್‌ 10
ಹಾರ್ದಿಕ್‌ ಪಾಂಡ್ಯ ಸಿ ಡಿ ಕಾಕ್‌ ಬಿ ಆವೇಶ್‌ 11
ಡೇವಿಡ್‌ ಮಿಲ್ಲರ್‌ ಸಿ ಬದೋನಿ ಬಿ ಹೋಲ್ಡರ್‌ 26
ರಾಹುಲ್‌ ತೆವಾಟಿಯ ಔಟಾಗದೆ 22
ಇತರ 7
ಒಟ್ಟು (4 ವಿಕೆಟಿಗೆ) 144
ವಿಕೆಟ್‌ ಪತನ: 1-8, 2-24, 3-51, 4-103.
ಬೌಲಿಂಗ್‌: ಮೊಹ್ಸಿನ್‌ ಖಾನ್‌ 4-0-18-1
ದುಷ್ಮಂತ ಚಮೀರ 4-0-34-0
ಆವೇಶ್‌ ಖಾನ್‌ 4-0-26-2
ಕೃಣಾಲ್‌ ಪಾಂಡ್ಯ 4-0-24-0
ಜೇಸನ್‌ ಹೋಲ್ಡರ್‌ 4-0-41-1

ಲಕ್ನೋ ಸೂಪರ್‌ ಜೈಂಟ್ಸ್‌
ಕ್ವಿಂಟನ್‌ ಡಿ ಕಾಕ್‌ ಸಿ ಸಾಯಿ ಬಿ ದಯಾಳ್‌ 11
ಕೆಎಲ್‌ ರಾಹುಲ್‌ ಸಿ ಸಾಹಾ ಬಿ ಶಮಿ 8
ದೀಪಕ್‌ ಹೂಡಾ ಸಿ ಶಮಿ ಬಿ ರಶೀದ್‌ 27
ಕರಣ್‌ ಶರ್ಮ ಸಿ ಮಿಲ್ಲರ್‌ ಬಿ ದಯಾಳ್‌ 4
ಕೃಣಾಲ್‌ ಪಾಂಡ್ಯ ಸ್ಟಂಪ್ಡ್ ಸಾಹಾ ಬಿ ರಶೀದ್‌ 5
ಆಯುಷ್‌ ಬದೋನಿ ಸ್ಟಂಪ್ಡ್ ಸಾಹಾ ಬಿ ಸಾಯಿ 8
ಮಾರ್ಕಸ್‌ ಸ್ಟೋಯಿನಿಸ್‌ ರನೌಟ್‌ 2
ಜೇಸನ್‌ ಹೋಲ್ಡರ್‌ ಸಿ ರಶೀದ್‌ ಬಿ ಸಾಯಿ 1
ದುಷ್ಮಂತ ಚಮೀರ ಔಟಾಗದೆ 0
ಆವೇಶ್‌ ಖಾನ್‌ ಸಿ ಸಾಹಾ ಬಿ ರಶೀದ್‌ 12
ಇತರ: 3
ಒಟ್ಟು (13.5 ಓವರ್‌ಗಳಲ್ಲಿ ಆಲೌಟ್‌) 82
ವಿಕೆಟ್‌ ಪತನ: 1-19, 2-24, 3-33, 4-45, 5-61, 6-65, 7-67, 8-70, 9-70
ಬೌಲಿಂಗ್‌: ಮೊಹಮ್ಮದ್‌ ಶಮಿ 3-0-5-1
ಹಾರ್ದಿಕ್‌ ಪಾಂಡ್ಯ 1-0-8-0
ಯಶ್‌ ದಯಾಳ್‌ 2-0-24-2
ಅಲ್ಜಾರಿ ಜೋಸೆಫ್ 2-0-14-0
ರಶೀದ್‌ ಖಾನ್‌ 3.5-0-24-4
ಸಾಯಿ ಕಿಶೋರ್‌ 2-0-7-2
ಪಂದ್ಯಶ್ರೇಷ್ಠ: ಶುಭಮನ್‌ ಗಿಲ್‌

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.