ಒಳಗೇನೂ ಇಲ್ಲದ ಬೀಜ; ಅದರಿಂದ ಮರ!


Team Udayavani, Mar 12, 2021, 6:30 AM IST

ಒಳಗೇನೂ ಇಲ್ಲದ ಬೀಜ; ಅದರಿಂದ ಮರ!

“ನಾನು ಯಾರು? ನನ್ನೊಳಗೆ ಇರುವುದು ಏನು?’ – ಎಳೆಯ ಬಾಲಕ ಶ್ವೇತಕೇತು ಅಪ್ಪನ ಮುಂದೆ ಎತ್ತಿದ ಪ್ರಶ್ನೆ ಇದು.

ನಾವು – ನೀವಾಗಿದ್ದರೆ ಏನೋ ಒಂದು ಹೇಳಿ ಸಾಗಹಾಕುತ್ತಿದ್ದೆವೇನೋ! ಆದರೆ ಅಪ್ಪ ಉದ್ಧಾಲಕರು ಬಹುದೊಡ್ಡ ಮುನಿ. ಬಾಲ್ಯದಲ್ಲಿ ಅವರ ಹೆಸರು ಆರುಣಿ. ಧೌಮ್ಯ ಋಷಿಗಳ ಶಿಷ್ಯರಾಗಿ ದ್ದವರು. ಆಗೊಂದು ದಿನ ಗದ್ದೆಯಿಂದ ನೀರು ಕೋಡಿ ಹರಿದು ಹೋಗುವುದನ್ನು ತಡೆಯುವಂತೆ ಗುರುಗಳು ನೀಡಿದ ಆದೇಶವನ್ನು ಪಾಲಿಸು ವುದಕ್ಕಾಗಿ ಬದುವಿಗೆ ಅಡ್ಡಲಾಗಿ ರಾತ್ರಿಯಿಡೀ ಮಲಗಿದ್ದವನು ಆರುಣಿ. ಗುರು ಆದೇಶ ಪರಿ ಪಾಲನೆಯ ಈ ಪರಾ ಕಾಷ್ಠೆಗಾಗಿ ಉದ್ಧಾಲಕ ಎಂಬ ನಾಮಧೇಯ ವನ್ನೂ ಜ್ಞಾನವನ್ನೂ ಅನುಗ್ರಹವಾಗಿ ಪಡೆದವರು. ಅವರ ಮಗ ಶ್ವೇತಕೇತು. ಬಾಲ್ಯದಿಂದಲೇ ಜ್ಞಾನದಾಹಿ. ಅವನು ಕೇಳಿದ್ದು ಅಷ್ಟೇ ಕಷ್ಟದ ಪ್ರಶ್ನೆ. ಬೇರಾರಾದರೂ ಆಗಿದ್ದರೆ ಉದ್ಧಾಲಕ ಮುನಿಗಳು ಸುಲಭವಾಗಿ ಉತ್ತರಿಸುತ್ತಿದ್ದರು; ಮಗು ಕೇಳಿದ್ದಕ್ಕೆ ಅವನಿಗರ್ಥವಾಗುವ ಹಾಗೆ ಉತ್ತರಿಸ ಬೇಕಲ್ಲ. ಹಾಗಾಗಿ ಒಂದು ಗೋಳಿಹಣ್ಣನ್ನು ತರುವಂತೆ ಹೇಳಿದರು. ಅವನು ಓಡಿ ಹೋಗಿ ತಂದ.

“ಹಣ್ಣನ್ನು ಕತ್ತರಿಸು, ಒಳಗೇನಿದೆ?’ ಉದ್ಧಾಲಕ ಮುನಿಗಳು ಪ್ರಶ್ನಿಸಿದರು. “ನೂರಾರು ಸಣ್ಣ ಸಣ್ಣ ಬೀಜಗಳಿವೆ ಅಪ್ಪಾ’ ಎಂಬುತ್ತರ ಬಂತು.

“ಈಗ ಒಂದು ಬೀಜವನ್ನು ಎತ್ತಿಕೋ. ಅದನ್ನೂ ಕತ್ತರಿಸು, ಅದರೊಳಗೆ ಏನಿದೆ’ ಎಂದರು ತಂದೆ. ಶ್ವೇತಕೇತು ಹಾಗೆಯೇ ಮಾಡಿ “ಏನೂ ಇಲ್ಲ, ಶೂನ್ಯ’ ಎಂದ.

“ಆ ಶೂನ್ಯದಿಂದಲೇ ಮೊಳಕೆ ಒಡೆದು, ಗಿಡವಾಗಿ, ದೊಡ್ಡ ಆಲದ ಮರ ಬೆಳೆಯುತ್ತದೆ. ಆದರೆ ಬೀಜದ ಮಧ್ಯಭಾಗದಲ್ಲಿ ಏನೂ ಇರುವುದಿಲ್ಲ, ಶೂನ್ಯ ಮಾತ್ರ. ನಿನ್ನ, ನನ್ನ ವಿಚಾರ ದಲ್ಲಿಯೂ ಇದೇ ನಿಜ. ಬೀಜದ ಒಳಗಿರುವ ಶೂನ್ಯವೇ ನಿನ್ನ ಒಳಗೂ ಇದೆ’ ಎಂದರು ಉದ್ಧಾಲಕರು.

ಶ್ವೇತಕೇತು ಆ ಪರಮ ಸತ್ಯವನ್ನು ದಿನಗಟ್ಟಲೆ ಧ್ಯಾನಿಸಿದ. ಆಗ ಮತ್ತೂಂದು ಪ್ರಶ್ನೆ ಉದ್ಭವಿಸಿತು. ಅಪ್ಪನೆದುರು ಬಂದು, “ನೀವಂದದ್ದನ್ನು ಧ್ಯಾನಿಸಿ ಅನು ಭವಿಸಿದೆ. ಆದರೂ ಕೆಲವು ವಿಚಾರಗಳು ಮಸುಕಾಗಿವೆ. ಶೂನ್ಯದಿಂದಲೇ ಎಲ್ಲವೂ ಅಸ್ತಿತ್ವಕ್ಕೆ ಬರುತ್ತವೆ ಎಂಬುದು ನಿಜ. ಆದರೆ ಈ ಶೂನ್ಯ ಮತ್ತು ಅಸ್ತಿತ್ವಗಳು ಪರಸ್ಪರ ತದ್ವಿರುದ್ಧ ಎಂಬಂತೆ ಇವೆಯಲ್ಲ; ಅವು ಒಂದನ್ನೊಂದು ಜತೆಗೂಡುವುದು ಹೇಗೆ?’ ಎಂದು ಕೇಳಿದ.

ಈಗ ಉದ್ಧಾಲಕರು ಒಂದು ಚಮಚ ಸಕ್ಕರೆ ಮತ್ತು ಒಂದು ಲೋಟ ನೀರು ತರಲು ಹೇಳಿ ದರು. ಶ್ವೇತಕೇತು ತಂದ. ಸಕ್ಕರೆಯನ್ನು ನೀರಿಗೆ ಹಾಕಿ ಕಲಸಲು ಹೇಳಿ ದರು.

“ಈಗ ಸಕ್ಕರೆಯನ್ನು ನೀರಿನಿಂದ ಬೇರ್ಪಡಿಸಲು ಸಾಧ್ಯ ವಿದೆಯೇ?’ ಎಂದು ಕೇಳಿದರು ಉದ್ಧಾಲಕರು. “ಇಲ್ಲ, ಸಕ್ಕರೆ ಪೂರ್ಣ ವಾಗಿ ನೀರಿನಲ್ಲಿ ಕರಗಿದೆ’ ಎಂದ ಶ್ವೇತಕೇತು.

“ಈಗ ನೀರಿನ ರುಚಿ ನೋಡು’ ಎಂದರು ತಂದೆ. ಬಾಲಕ “ಸಿಹಿಯಾಗಿದೆ’ ಎಂದು ನುಡಿದ.

“ಸಕ್ಕರೆ ಕಾಣಿಸುತ್ತಿಲ್ಲ ಎಂದರೆ ಅದು ಇಲ್ಲ ಎಂದರ್ಥವಲ್ಲ, ಯಾಕೆಂದರೆ ನೀರು ಸಿಹಿಯಾಗಿದೆ. ಶೂನ್ಯ ಮತ್ತು ಅಸ್ತಿತ್ವಗಳ ಕಥೆಯೂ ಹೀಗೆಯೇ. ಅವುಗಳ ಕೂಡ ಸಕ್ಕರೆ ಮತ್ತು ನೀರಿ ನಂತೆ ಒಂದರೊಳಗೆ ಇನ್ನೊಂದು ಅಭೇದವಾಗಿ ಬೆರೆತಿರುತ್ತವೆ. ಅವು ಗಳನ್ನು ಬೇರ್ಪಡಿ ಸಲಾಗದು…’ ಗುರು ಉದ್ಧಾಲಕರು ವಿವರಿಸಿದರು.

ಜೀವನ ಮತ್ತು ಮರಣ ಇದೇ ಅಸ್ತಿತ್ವ ಮತ್ತು ಶೂನ್ಯ. ಅವು ಒಂದನ್ನೊಂದು ಬಿಟ್ಟಿಲ್ಲ; ಜತೆ ಜತೆಯಾಗಿವೆ. ಇಲ್ಲಿ ಪ್ರತ್ಯೇಕಿಸುವುದು, ಬೇರ್ಪಡಿಸುವುದು ಎಂಬ ಪದಪ್ರಯೋಗವೂ ಸಮ್ಮತ ಎನಿಸುವುದಿಲ್ಲ; ಏಕೆಂದರೆ ಆ ಪದಗಳು ಎರಡಿವೆ ಎಂಬ ಅರ್ಥವನ್ನು ಕಲ್ಪಿಸುತ್ತವೆ. ನಿಜಕ್ಕೂ ಜೀವನ ಮತ್ತು ಮರಣ ಎರಡಲ್ಲ.

ಶ್ವೇತಕೇತುವಿಗೆ ಆಗ ಅರ್ಥವಾದ ಪರಮ ರಹಸ್ಯ ಛಾಂದೋಗ್ಯ ಉಪ ನಿಷತ್ತು ಆಗಿ ದಾಖಲಾಗಿದೆ; ನಮ್ಮ – ನಿಮ್ಮ ಅರಿವಿನ ಆಕರವಾಗಿದೆ.

( ಸಾರ ಸಂಗ್ರಹ)

ಟಾಪ್ ನ್ಯೂಸ್

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.