ವಿವೇಚನೆಯ ಬೆಳಕಿನಲ್ಲಿ ಮುನ್ನಡೆಯೋಣ


Team Udayavani, Jan 7, 2021, 5:45 AM IST

ವಿವೇಚನೆಯ ಬೆಳಕಿನಲ್ಲಿ ಮುನ್ನಡೆಯೋಣ

ಉಪನಿಷತ್ತುಗಳು ಬೋಧಪ್ರದವಾದ, ಜೀವನೋತ್ಸಾಹವನ್ನು ತುಂಬುವ ಕಥೆಗಳ ಆಗರಗಳಾಗಿವೆ. ಇದು ಅಲ್ಲಿಂದ ಹೆಕ್ಕಿದ್ದು.
ಶೌನಕ ಮತ್ತು ಅಭಿಪ್ರತಾರಿ ಎಂಬಿಬ್ಬರು ಋಷಿಗಳಿದ್ದರು. ಅವರಿ ಬ್ಬರೂ ವಾಯು ದೇವರ ಆರಾಧಕರು. ಒಂದು ದಿನ ಇಬ್ಬರೂ ಯಜ್ಞ ಮುಗಿಸಿ ಮಧ್ಯಾಹ್ನದ ಭೋಜನಕ್ಕೆ ಕುಳಿತು ಕೊಳ್ಳುವಷ್ಟರಲ್ಲಿ ಬಾಗಿಲು ತಟ್ಟಿದ ಸದ್ದಾಯಿತು. ತೇಜಸ್ವಿಯಾದ ಒಬ್ಬ ಬಾಲ ಬ್ರಹ್ಮಚಾರಿ ಭಿಕ್ಷೆಗಾಗಿ ಅಲ್ಲಿ ನಿಂತಿದ್ದ. ಬ್ರಹ್ಮಚಾರಿಗಳು ಆಯಾ ದಿನದ ಆಹಾರವನ್ನು ಭಿಕ್ಷೆಯ ಮೂಲಕ ಸಂಗ್ರಹಿಸಿ ಉಣ್ಣುವುದು ಆ ಕಾಲದ ರೂಢಿ.

“ಈಗಲ್ಲ ಬಾಲಕನೇ, ನಾವು ಉಣ್ಣಲಿಕ್ಕೆ ಕುಳಿ ತಾಯಿತು. ಮುಂದಕ್ಕೆ ಹೋಗು’ ಎಂದ ಶೌನಕ. ಬಾಲಕನಿಗೆ ಇಂತಹ ಉತ್ತರ ಹೊಸದೇನಲ್ಲ. ದಿನವೂ ಭಿಕ್ಷೆಯತ್ತಿ ಉಣ್ಣುವವರು ಇಂತಹ ಮಾತುಗಳನ್ನೆಲ್ಲ ಕೇಳಲೇ ಬೇಕಾಗುತ್ತದೆ. ಹೀಗಾಗಿ ಐಹಿಕರ ಮನೆಗಳಿಂದ ಅಂಥ ಉತ್ತರ ಬಂದಿದ್ದರೆ ಅವನಿಗೆ ಅಚ್ಚರಿಯಾಗುತ್ತಿರಲಿಲ್ಲ. ಆದರೆ ಆಶ್ರಮದಲ್ಲಿಯೂ ಇಂಥ ನಿರಾಕರಣೆಯೇ ಎಂದುಕೊಂಡ ಬಾಲ ಬ್ರಹ್ಮಚಾರಿ. “ಮಹಿಮಾನ್ವಿತರೆ, ನೀವು ಯಾವ ದೇವರ ಆರಾಧಕರು ಎಂದು ಕೇಳಬಹುದೇ’ ಎಂದು ಪ್ರಶ್ನಿಸಿದ.

“ನಾವು ವಾಯು ದೇವರ ಉಪಾಸಕರು. ಆತ ಸರ್ವವ್ಯಾಪಿ, ಸರ್ವಾಂತರ್ಯಾಮಿ. ಪ್ರಾಣ ಎಂದೂ ಆತನನ್ನು ಕರೆಯುತ್ತಾರೆ’ ಎಂಬ ಉತ್ತರ ಒಳಗಿನಿಂದ ಬಂತು. “ಹಾಗಾದರೆ ಸಮಸ್ತ ಲೋಕ ಪ್ರಾಣ ದಿಂದಲೇ ರೂಪುಗೊಂಡದ್ದು ಮತ್ತು ಕೊನೆ ಯಾಗುವುದು ಕೂಡ ಅದರಲ್ಲೇ ಎಂಬುದು ನಿಮಗೆ ಗೊತ್ತಿರಬಹುದು…’ ಬ್ರಹ್ಮಚಾರಿ ಹೇಳಿದ.

“ನಿಜ, ಅದು ನಮಗೆ ತಿಳಿದಿದೆ. ನೀನು ಹೊಸದೇನನ್ನೂ ಹೇಳುತ್ತಿಲ್ಲ’ ಎಂದು ಋಷಿಗಳಿಬ್ಬರೂ ಉಣ್ಣಲು ಕುಳಿತಲ್ಲಿಂದಲೇ ಉತ್ತರಿಸಿದರು.
“ಹಾಗಾದರೆ ನೀವು ಇಂದಿನ ಆಹಾರವನ್ನು ಯಾರಿಗಾಗಿ ಅಡುಗೆ ಮಾಡಿದ್ದೀರಿ ಸ್ವಾಮೀ?’ ಎಂಬ ಪ್ರಶ್ನೆ ಬಾಲಕನಿಂದ ತೂರಿಬಂತು.
“ನಾವು ಉಪಾಸಿಸುವ ವಾಯು ಅಥವಾ ಪ್ರಾಣ ದೇವರಿಗಾಗಿಯೇ ತಾನೇ, ಇನ್ಯಾರಿಗೆ!’ ಋಷಿಗಳು ಹೇಳಿದರು.

“ಪ್ರಾಣವು ವಿಶ್ವವ್ಯಾಪಿಯಾದರೆ ಆ ವಿಶ್ವದ ಭಾಗವೇ ಆಗಿರುವ ನನ್ನಲ್ಲೂ ಪ್ರಾಣವೇ ಇದೆ. ನಿಮ್ಮ ಮುಂದೆ ನಿಂತ ಈ ಹಸಿದ ದೇಹದೊಳಗೆ ಮಿಡಿಯುತ್ತಿರುವುದೂ ಆ ಪ್ರಾಣವೇ ಆಗಿದೆ ಅಲ್ಲವೇ’ ಬಾಲಕ ಹೇಳಿದ.

“ಹೌದು, ನೀನು ನುಡಿಯುತ್ತಿರುವುದು ನಿಜ’ ಎಂದರು ಋಷಿಗಳು. ಬಾಲ ಬ್ರಹ್ಮಚಾರಿ ಮುಂದುವರಿಸಿ ಹೇಳಿದ, “ಮಾನ್ಯರೇ, ಹಾಗಾದರೆ ನನಗೆ ಆಹಾರವನ್ನು ನಿರಾಕರಿಸುವುದು ಎಂದರೆ ನೀವು ಯಾರನ್ನು ಉದ್ದೇಶಿಸಿ ಅದನ್ನು ತಯಾರಿಸಿದ್ದೀರೋ ಆ ಪ್ರಾಣ ದೇವರಿಗೇ ಆಹಾರವನ್ನು ನಿರಾಕರಿಸಿ ದಂತೆ ಅಲ್ಲವೇ?’.  ಋಷಿಗಳಿಗೆ ನಾಚಿಕೆಯಾಯಿತು. ಪ್ರಾಣ ದೇವರ ಉಪಾಸಕರಾಗಿದ್ದು ಕೊಂಡೂ ಇಂಥ ತಿಳಿವುಗೇಡಿತನವನ್ನು ಪ್ರದರ್ಶಿಸಿದ್ದಕ್ಕಾಗಿ ನಾಚಿಕೊಂಡರು. ಬಳಿಕ ಬಾಲ ಬ್ರಹ್ಮಚಾರಿಯನ್ನು ಒಳಕ್ಕೆ ಕರೆದು ತಮ್ಮ ಜತೆಗೆ ಕೂರಿಸಿಕೊಂಡು ಉಣಬಡಿಸಿದರು, ತಾವೂ ಉಂಡರು.

ಬೇಧಗಳು ಜಾತಿಯ ನೆಲೆಯಲ್ಲಿ, ಧರ್ಮ, ಅಂತಸ್ತು, ಅಧಿಕಾರ, ವರ್ಣ – ಹೀಗೆ ನೂರು ನಮೂನೆಗಳಲ್ಲಿ ಪ್ರದರ್ಶನವಾಗುತ್ತವೆ. ಲೋಕದ ವರ್ತನೆ ಅದು. ಆದರೆ ಎಲ್ಲರ ರಕ್ತದ ಬಣ್ಣವೂ ಕೆಂಪು. ಹಾಗೆಯೇ ಎಲ್ಲರ ದೇಹದೊಳಗೂ ಮಿಡಿಯುವ ಜೀವ ಅಬೇಧವಾದದ್ದು. ನಾವು ಕಲ್ಪಿಸುವ ಯಾವುದೇ ತರ-ತಮಗಳು ಅದಕ್ಕೆ ಅಂಟುವುದಿಲ್ಲ. ಅದು ಸೃಷ್ಟಿಮೂಲದ ಒಂದು ಭಾಗವಾಗಿದೆ; ದೇಹ ಅಳಿದ ಮೇಲೆ ಮೂಲವನ್ನು ಸೇರಿಕೊಳ್ಳುತ್ತದೆ.

(ಸಾರ ಸಂಗ್ರಹ)

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.