ಬೆಂಗಳೂರು ಕೇಂದ್ರದಲ್ಲಿ ಪಕ್ಷೇತರರಾಗಿ ರೈ ಸ್ಪರ್ಧೆ
Team Udayavani, Jan 19, 2019, 6:11 AM IST
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ (ಸೆಂಟ್ರಲ್) ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ನಟ ಪ್ರಕಾಶ ರೈ ತಿಳಿಸಿದ್ದಾರೆ. ಹಾಗೇ ಚುನಾವಣೆ ನಂತರ ರಾಷ್ಟ್ರಮಟ್ಟದ ಮಹಾಘಟಬಂಧನ್ ಜತೆ ಕೈ ಜೋಡಿಸುವುದಾಗಿಯೂ ಘೋಷಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ವಿದ್ಯಾಭ್ಯಾಸ ಪೂರೈಸಿ ರಂಗಭೂಮಿ ಹಾಗೂ ಸಿನಿಮಾ ಪಯಣ ಆರಂಭಿಸಿದ್ದು ಕೂಡ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿಯೇ. ನನ್ನ ಬೇರು ಇಲ್ಲಿದೆ. ಕುಟುಂಬದವರು, ಆಪ್ತರು ಮತ್ತು ಗೆಳೆಯರು ಇಲ್ಲೇ ನೆಲೆಸಿದ್ದಾರೆ. ಹೀಗಾಗಿ ಸ್ಪರ್ಧೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ,’ ಎಂದು ಹೇಳಿದರು.
ಜನರ ಪ್ರಣಾಳಿಕೆ ತಯಾರಿಸುವೆ: “ನನ್ನ ತಂಡದ ಸದಸ್ಯರು 20 ದಿನಗಳ ಕಾಲ ಬೆಂಗಳೂರು ಕೇಂದ್ರದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದಾರೆ. ನಾನು ಚುನಾವಣೆ ಪ್ರಣಾಳಿಕೆ ಬದಲಿಗೆ ಜನರ ಪ್ರಣಾಳಿಕೆ ತಯಾರಿಸುವೆ,’ ಎಂದು ಹೇಳಿದ ಪ್ರಕಾಶ್ ರೈ, “ಇಷ್ಟು ದಿನ “ಜಸ್ಟ್ ಆಸ್ಕಿಂಗ್’ ಎಂದು ಪ್ರಶ್ನೆಗಳನ್ನು ಕೇಳಿದ್ದಾಯಿತು. ಈಗ ನಾನು ಉತ್ತರ ನೀಡುವ ಸರದಿ. ಇನ್ನೂ ಮುಂದೆ ಏನಿದ್ದರೂ “ಜಸ್ಟ್ ಆನ್ಸರಿಂಗ್’. ಜ.20ರಿಂದ ಚುನಾವಣಾ ಪ್ರಚಾರ ಆರಂಭಿಸಲಾಗುವುದು,’ ಎಂದು ಮಾಹಿತಿ ನೀಡಿದರು.
ಸಂಸತ್ತಿನಲ್ಲಿ ಜನರ ಧ್ವನಿಯಾಗಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕೋಮುವಾದದ ವಿರುದ್ಧ ಯಾರೇ ಹೋರಾಡಿದರೂ ನನ್ನ ಬೆಂಬಲವಿದೆ. ಈ ನಿಟ್ಟಿನಲ್ಲಿ ಮಹಾಘಟಬಂಧನ್ ಜತೆ ಕೈಜೋಡಿಸಲಿದ್ದೇನೆ.
-ಪ್ರಕಾಶ್ ರೈ, ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ