ಕುಗ್ಗಿದ ಏರೋ ಇಂಡಿಯಾ ಉತ್ಸಾಹ
Team Udayavani, Feb 20, 2019, 6:28 AM IST
ಬೆಂಗಳೂರು: ಬೆಂಗಳೂರಿನ ಏರೋ ಇಂಡಿಯಾ ಶೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ವಿಮಾನ ದುರಂತವು ವೈಮಾನಿಕ ಪ್ರದರ್ಶನ ತಂಡಗಳ ಉತ್ಸಾಹವನ್ನೇ ಉಡುಗಿಸಿದೆ. ವೈಮಾನಿಕ ಪ್ರದರ್ಶನಕ್ಕಾಗಿ ದೇಶ-ವಿದೇಶಗಳಿಂದ ವಿಮಾನಗಳು ಈಗಾಗಲೇ ಯಲಹಂಕ ವಾಯುನೆಲೆಯಲ್ಲಿ ಬಂದಿಳಿದಿವೆ.
ಆಯಾ ವಿಮಾನಗಳ ಪೈಲಟ್ಗಳೂ ಸಜ್ಜಾಗಿದ್ದಾರೆ. ಕಳೆದ ಕೆಲ ದಿನಗಳಿಂದ ನಡೆಸಿದ ಯಶಸ್ವಿ ತಾಲೀಮುಗಳ ಮೂಲಕ ಪ್ರದರ್ಶನಕ್ಕೆ ಸಿದ್ಧ ಎಂಬುದನ್ನೂ ತೋರಿಸಿದ್ದಾರೆ. ಇನ್ನೇನು ಅಧಿಕೃತ ಪ್ರದರ್ಶನ ನಡೆಯಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ.
ಇದರಿಂದ ಸೂರ್ಯಕಿರಣ ಹೊರಗುಳಿಯುವುದು ಮಾತ್ರವಲ್ಲ; ಉಳಿದ ತಂಡಗಳ ಮಾನಸಿಕ ಸ್ಥೈರ್ಯವನ್ನೂ ಕುಗ್ಗಿಸುವಂತೆ ಮಾಡಿದೆ. ಈ ಬಾರಿ ಸುಮಾರು 30 ವೈಮಾನಿಕ ಪ್ರದರ್ಶನಗಳು ನಡೆಯಲಿವೆ. ಅದರಲ್ಲಿ ಸೂರ್ಯಕಿರಣ ಕೂಡ ಒಂದಾಗಿತ್ತು. ಈಗ ಅದರಲ್ಲಿ ಎರಡು ವಿಮಾನಗಳು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಒಬ್ಬ ಪೈಲಟ್ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಇಂತಹ ಸಾಹಸ ಪ್ರದರ್ಶನಗಳಲ್ಲಿ ಪ್ರಾಣ ಪಣಕ್ಕಿಟ್ಟು ಅಖಾಡಕ್ಕಿಳಿಯುವುದರಿಂದ ಇದು ಸಾಮಾನ್ಯ ಎಂಬಂತೆ ಕಂಡರೂ, ಆ ತಂಡದ ಸಹೋದ್ಯೋಗಿಗಳಲ್ಲಿ ಸಹಜವಾಗಿ ಶೋಕ ಮಡುಗಟ್ಟುವಂತೆ ಮಾಡಿದೆ. ಅದೇ ರೀತಿ, ಉಳಿದ ಪೈಲಟ್ಗಳನ್ನು ಮಾನಸಿಕವಾಗಿ ಕುಗ್ಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ