ವರ್ಷದಿಂದ ಕಾಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
Team Udayavani, Dec 28, 2018, 2:45 PM IST
ಮೂಡಿಗೆರೆ: ತಾಲೂಕಿನ ಬಾಳೆಗದ್ದೆ ಗ್ರಾಮದ ಮಾದೇಗೌಡರ ತೋಟದಲ್ಲಿ ಕಳೆದೊಂದು ವರ್ಷದಿಂದ ಕಾರ್ಮಿಕರಿಗೆ ಭಯ ಹುಟ್ಟಿಸಿತ್ತಿದ್ದ ಕಾಳಿಂಗ ಸರ್ಪವನ್ನು ಗುರುವಾರ ಸೆರೆ ಹಿಡಿಯಲಾಯಿತು. ಮಾದೇಗೌಡರ ತೋಟದಲ್ಲಿ ಸುಮಾರು 15 ಅಡಿ ಉದ್ದದ ಪೊರೆಯಿರುವ ಕಾಳಿಂಗ ಸರ್ಪ ಕಾರ್ಮಿಕರಿಗೆ ಹಾಗೂ ತೋಟದ ಮಾಲೀಕರಿಗೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಕಾರ್ಮಿಕರು ಆತಂಕದಲ್ಲೇ ಕೆಲಸ ಮಾಡುವಂತೆ ಆಗಿತ್ತು.
ಗುರುವಾರ ಬೆಳಗ್ಗೆ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗುವ ಸಮಯದಲ್ಲಿ ಹಾವು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಕಾರ್ಮಿಕರು ಕೂಡಲೇ ಮಾದೇಗೌಡರ ಮನೆಗೆ ಓಡಿಬಂದಿದ್ದಾರೆ. ಮಾದೇಗೌಡರು ಹ್ಯಾಂಡ್ಪೋಸ್ಟ್ನ ಉರಗತಜ್ಞ ಸ್ನೇಕ್ ಅಹಮದ್ ಅವರನ್ನು ಕರೆಸಿದ್ದಾರೆ. ಅಹಮದ್ ಅವರು ಎರಡು ಗಂಟೆಗಳ ಕಾಲ ಪ್ರಯತ್ನ ಪಟ್ಟು ಕಾಳಿಂಗ ಸರ್ಪ ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಹಾವಿನ ಪೊರೆ ಕಳಚಿ ಚಾರ್ಮಾಡಿ ಘಾಟಿಯ ಕಾಡಿಗೆ ಬಿಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ