ಸ್ವಲ್ಪವೂ ಕರಗದ ಪ್ಲಾಸ್ಟಿಕ್‌ ಜೀವಕ್ಕೆ ಮಾರಕ: ಕಾಡದೇ ವರ


Team Udayavani, Jun 7, 2018, 5:06 PM IST

7-june-22.jpg

ಧಾರವಾಡ: ಪ್ಲಾಸ್ಟಿಕ್‌ ಸಂಶೋಧನೆಯಾದಾಗಿನಿಂದ ಹಿಡಿದು ಈವರೆಗೂ ಉತ್ಪಾದಿಸಿರುವ ಲಕ್ಷ ಲಕ್ಷ ಟನ್‌ ಪ್ಲಾಸ್ಟಿಕ್‌ನಲ್ಲಿ ಒಂದಂಗುಲ ಕೂಡ ಮರಳಿ ಜೈವಿಕವಾಗಿ ಕರಗಿಲ್ಲ ಎಂದು ಕವಿವಿ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಗಿರೀಶ ಕಾಡದೇವರ ಕಳವಳ ವ್ಯಕ್ತಪಡಿಸಿದರು.

ಹಳ್ಳಿಗೇರಿಯ ನೇಚರ್‌ ಫಸ್ಟ್‌ ಇಕೋವಿಲೇಜ್‌ ಹಾಗೂ ನೇಚರ್‌ ರಿಸರ್ಚ್‌ ಸೆಂಟರ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಪ್ಲಾಸ್ಟಿಕ್‌ ಮುಕ್ತಿಗೆ ನಮ್ಮ ಯುಕ್ತಿ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ನಮ್ಮ ಪ್ರತಿನಿತ್ಯದ ಪ್ರಾರಂಭ ಪ್ಲಾಸ್ಟಿಕ್‌ನಿಂದ ಮಾಡಿದ ಬ್ರಶ್‌, ಸ್ನಾನದ ಬಕೆಟ್‌, ಊಟದ ಡಬ್ಬಿ, ಬಾಟಲ್‌ ನೀರು ಹೀಗೆ ಎಲ್ಲಕ್ಕೂ ಪ್ಲಾಸ್ಟಿಕ್‌ ಆವರಿಸಿಕೊಂಡು ಬಿಟ್ಟಿದೆ. ಪ್ಲಾಸ್ಟಿಕ್‌ನ್ನು ಜೈವಿಕವಾಗಿ ಕರಗಿಸುವ ಸಂಶೋಧನೆಯಾಗುವವರೆಗೂ ಈಗಿರುವ ಪ್ಲಾಸ್ಟಿಕ್‌ನ್ನು ಕಡಿಮೆ ಬಳಕೆ ಮತ್ತು ಮರುಬಳಕೆ ಮಾಡಬೇಕು. ಅದರಲ್ಲೂ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಹಾಗೂ ಪ್ಲಾಸ್ಟಿಕ್‌ ನೀರಿನ ಬಾಟಲ್‌ ಬಳಕೆ ಸಂಪೂರ್ಣ ಕಡಿಮೆಯಾಗಬೇಕು ಎಂದರು.

ಪರಿಸರವಾದಿ ಮುಕುಂದ ಮೈಗೂರ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಬಂತೆಂದರೆ ಬಹಳಷ್ಟು ವನಮಹೋತ್ಸವ ಕಾರ್ಯಕ್ರಮಗಳು ಜರಗುತ್ತವೆ. ಆದರೆ, ಅವುಗಳಲ್ಲಿ ಬಹಳಷ್ಟು ಮಹೋತ್ಸವಗಳು ವನಮಹೋತ್ಸವವಾಗುತ್ತವೆ. ಆ ದಿನ ತೋರಿದ ಪರಿಸರ ಕಾಳಜಿ ಮರುದಿನ ದಿನ ಇರುವುದಿಲ್ಲ. ಹಚ್ಚಿದ ಗಿಡಗಳು ಬೆಳೆದು ನಿಲ್ಲುವವರೆಗೆ ಜೋಪಾನ ಮಾಡಿದಲ್ಲಿ ಮಾತ್ರ ಇದು ನಿಜವಾದ ಪರಿಸರ ಕಾಳಜಿಯಾಗುವುದು ಎಂದರು.

ಶಿರಸಿಯ ಉಮಾಪತಿ ಭಟ್ಟ ಮಾತನಾಡಿ, ಕಾಡಿನ ಮರಗಳು ಮತ್ತು ಔಷ ಧೀಯ ಸಸ್ಯಗಳು ನಮ್ಮ ಹಿಂದಿನ ಸಂಪ್ರದಾಯದಿಂದಲೂ ಎಲ್ಲ ಆರೋಗ್ಯ ಸಮಸ್ಯಗಳಿಗೆ ಚಿಕತ್ಸೆಯ ಮೂಲವಾಗಿದ್ದವು. ಆದರೆ, ಇತ್ತೀಚಿನ ಅಲೋಪತಿ ಮೆಡಿಸಿನ್‌ ಬಂದಾಗಿನಿಂದ ನಾವೆಲ್ಲ ನಮ್ಮ ಸಾಂಪ್ರದಾಯಿಕ ಚಿಕತ್ಸೆಗಳನ್ನು ತ್ಯಜಿಸಿ ಬಿಟ್ಟಿದ್ದೇವೆ ಎಂದರು.

ಅಧ್ಯಕ್ಷತೆವಿಹಿಸಿದ್ದ ಇಕೋ ವಿಲೇಜಿನ ಸಂಸ್ಥಾಪಕ ಪಿ.ವಿ. ಹಿರೇಮಠ ಮಾತನಾಡಿ, ಕಳೆದ ಬಾರಿ ರಾಜ್ಯಾದ್ಯಂತ ವಾಡಿಕೆಗಿಂತ ಅರ್ಧಕ್ಕೂ ಕಡಿಮೆಯಷ್ಟು ಮಳೆಯಾಗಿದೆ. ಆದರೆ ಈ ಬಾರಿ ಮಳೆ ಚೆನ್ನಾಗಿ ಆಗುವ ನಿರೀಕ್ಷೆ ಇದ್ದು, ಈ ಬಾರಿ ಹನಿ ನೀರನ್ನೂ ನಾವು ಇಂಗಿಸುವ ಕೆಲಸ ಮಾಡಬೇಕಾಗಿದೆ ಎಂದರು.

ನೇಚರ್‌ ರಿಸರ್ಚ್‌ ಸೆಂಟರ್‌ನ ಚಂದ್ರಶೇಖರ ಬೈರಪ್ಪನವರ, ಡಾ|ಧಿಧೀರಜ ವೀರನಗೌಡರ, ಆರ್‌ .ಜಿ ತಿಮ್ಮಾಪೂರ, ವೀರಣ್ಣ ಪತ್ತಾರ ಇದ್ದರು. ಹರ್ಷವರ್ಧನ್‌ ಶೀಲವಂತ ಸ್ವಾಗತಿಸಿದರು. ಪ್ರಕಾಶ ಗೌಡರ ಪ್ರಾಸ್ತಾವಿಕ ಮಾತನಾಡಿದರು. ಪೂರ್ತಿ ಶರ್ಮಾ ನಿರೂಪಿಸಿದರು. ಅನೀಲ ಅಳ್ಳೊಳ್ಳಿ ವಂದಿಸಿದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.