ರಾಮಾಯಣ ಅಧ್ಯಯನ: ಏಳು ಪ್ರಬಂಧ ಮಂಡನೆ


Team Udayavani, Sep 9, 2018, 12:04 PM IST

gul-3.jpg

ಕಲಬುರಗಿ: ನಗರದ ಬ್ರಹ್ಮಪುರ ಉತ್ತರಾದಿ ಮಠದಂಗಳದಲ್ಲಿ ನಡೆದ ರಾಷ್ಟ್ರೀಯ ವೈಚಾರಿಕ ವಿದ್ವದೊಷ್ಠಿಯಲ್ಲಿ ರಾಮಾಯಣ ಅಧ್ಯಯನಸ್ಯ ಸಾರ್ವಕಾಲಿಕತ್ವ ವಿಷಯವಾಗಿ ಉತ್ತರಾದಿ ಮಠದ ಸತ್ಯಾತ್ಮತೀರ್ಥರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ವಿದ್ವಾಂಸರ ಚಿಂತನ ಮಂಥನ ತ್ರೇತಾಯುಗದ ರಾಮಾಯಣ ಇಂದಿಗೂ ಸಾಮಾಜಿಕ ಸಮಸ್ಯೆ ನಿವಾರಣೆಗೆ ಅದ್ಹೇಗೆ ರಾಮಬಾಣ ಆಗುತ್ತದೆ ಎನ್ನುವ ವಿಷಯದ ಕುರಿತು ಚರ್ಚೆಗಳಿಗೆ ವೇದಿಕೆಯಾಯ್ತು.

ಶ್ರೀ ಸತ್ಯಪ್ರಮೋದತೀರ್ಥ ಜನ್ಮಶತಮಾನೋತ್ಸವ ಸಮಿತಿ, ದಿ. ಪಂ. ವಾದಿರಾಜಾಚಾರ್ಯ ಅಗ್ನಿಹೋತ್ರಿ ಜನ್ಮಶತಮಾನೋತ್ಸವ ಸಮಿತಿ, ನೂತನ ವಿದ್ಯಾಲಯ ಪದವಿ ವಿದ್ಯಾಲಯ, ಸ್ಥಳೀಯ ಕಲಬುರಗಿ ಚಾತುರ್ಮಾಸ್ಯ ಸಮಿತಿ ಸಹಯೋಗದಲ್ಲಿ ನಡೆದ ವಿದ್ವದೊಷ್ಠಿಯಲ್ಲಿ ಪಾಲ್ಗೊಂಡಿದ್ದ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ವಿದ್ವಾಂಸರಿಂದ ಏಳು ಸಂಶೋಧನಾತ್ಮಕ ಪ್ರಬಂಧಗಳ ಮಂಡನೆಯಾದವು.

ರಾಮಾಯಣ ಇಂದಿಗೂ ಸಾಮಾಜಿಕ ಸಮಸ್ಯೆಗಳಿಗೆ ಅದ್ಹೇಗೆ ಸ್ಪಂದಿಸುತ್ತದೆ, ಸಮಸ್ಯೆಗಳ ನಿರ್ಮೂಲನೆಗೆ ಹೇಗೆ ರಾಮಾಯಣ ನೆರವಾಗುತ್ತದೆ ಎಂಬ ಚಿಂತನೆ ಗೋಷ್ಠಿ ನಡೆಯಿತು.

ಗೋಷ್ಠಿಯ ಸಾನ್ನಿಧ್ಯ ವಹಿಸಿದ್ದ ಉತ್ತರಾದಿ ಮಠಾಧಿಧೀಶ ಸತ್ಯಾತ್ಮತೀರ್ಥರು ರಾಮಾಯಣದ ಸೀತಾ- ರಾಮರು ಯಾವ ರೀತಿ ಆದರ್ಶ ತೋರಿಸಿಕೊಟ್ಟಿದ್ದಾರೆ ಎನ್ನುವುದನ್ನು ವಿವರಿಸುತ್ತ ಸಮಾಜದ ಉತ್ತಮ ಬದುಕಿಗೆ ರಾಮಾಯಣ
ದಿಕ್ಸೂಚಿಯಾಗಿದೆ. ಇದು ಭಗವಂತನ ಮಹಾ ಕಾರುಣ್ಯವೇ ಸರಿ ಎಂದು ವಿವರಿಸಿದರು.

ಶ್ರೀಪಾದಂಗಳವರು ರಾಮಾಯಣ ಗೋಷ್ಠಿಯಲ್ಲಿ ನೀಡಿದ ಪ್ರವಚನ, ಹಲವಾರು ಮಹತ್ವದ ವಿವರಣೆಗಳು, ದೃಷ್ಟಾಂತಗಳನ್ನು ಕೇಳಿದ ಪಂಡಿತ ಸಮೂಹ ಸಾಹಿತ್ಯಿಕ ಹಿನ್ನೆಲೆಯಲ್ಲಿ ಬಾಣಭಟ್ಟನ ವಾಗ್ಝರಿಯನ್ನೇ ನೆನಪಿಸುವಂತೆ
ಗುರುಗಳು ವಿವರಣೆ ನೀಡಿದರು ಎಂದು ತಮ್ಮ ಅನುಭವ ಹಂಚಿಕೊಂಡರು.

ಸಂಸ್ಕೃತದಲ್ಲೇ ನಡೆದ ರಾಮಾಯಣದ ಈ ಗೋಷ್ಠಿಯಲ್ಲಿ ಮಧ್ಯದಲ್ಲಿ ಕನ್ನಡಕ್ಕೂ ಅವಕಾಶ ದೊರಕಿತ್ತು. ಶೃಂಗೇರಿಯ
ರಾಜೀವಗಾಂಧಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಡಾ| ವೆಂಕಟರಮಣ ಭಟ್‌, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಡಾ| ಉಡುಪ ರಮೇಶ, ಪ್ರಾಧ್ಯಾಪಕರಾದ ಡಾ| ರಾಮಕೃಷ್ಣ ಉಡುಪ, ವಿಜಯಪುರದ ಕಾಖಂಡಕಿ ಕೃಷ್ಣ ಜೋಷಿ, ಕಲಬುರಗಿ ಎನ್‌ವಿ ಪದವಿ ವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ| ಗುರುಮದ್ವಾಚಾರ್ಯ ನವಲಿ, ಡಾ| ಹಣಮಂತಾಚಾರ್ಯ ಸರಡಗಿ ರಾಮಾಯಣ ಅಧ್ಯಯನದ ಸಾರ್ವಕಾಲಿಕ ಪ್ರಸ್ತುತತೆ ವಿಷಯವಾಗಿ ಸಂಶೋಧನಾತ್ಮಕ ಪ್ರಬಂಧಗಳನ್ನು ಗೋಷ್ಠಿಯಲ್ಲಿ ಶ್ರೀಗಳ ಸಮ್ಮುಖದಲ್ಲಿ ಮಂಡಿಸಿದರು.

2 ದಿನಗಳ ರಾಷ್ಟ್ರೀಯ ವಿದ್ವದ್ಗೋಷ್ಠಿಯ ಉಪ ಸಂಯೋಜಕರಾದ ಡಾ| ಹಣಮಂತಾಚಾರ್ಯ ಸರಡಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೋಷ್ಠಿಯ ಸಂಯೋಜಕ ಡಾ| ಗುರು ಮಧ್ವಾಚಾರ್ಯ ನವಲಿ ವಂದಿಸಿದರು. 

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.