ಲೈಟ್ ಫಿಶ್ಶಿಂಗ್ ಪೂರ್ಣ ನಿಷೇಧಿಸಲು ಆಗ್ರಹ
Team Udayavani, Jan 4, 2018, 3:09 PM IST
ಕಾರವಾರ: ಸಮುದ್ರದಲ್ಲಿ ರಾತ್ರಿ ವೇಳೆ ಲೈಟ್ ಫಿಶ್ಶಿಂಗ್ ಮಾಡುತ್ತಿರುವುದರಿಂದ ಮೀನಿನ ಸಂತತಿಯೇ ನಾಶವಾಗಲಿದೆ. ಲೈಟ್ ಫಿಶ್ಶಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮುದಗಾ ಮತ್ತು ಕುಮಟಾ ಭಾಗದ ನಾಡದೋಣಿ ಮೀನುಗಾರರು ಜಿಲ್ಲಾಡಳಿತಕ್ಕೆ ಬುಧುವಾರ ಲಿಖೀತ ಮನವಿ ನೀಡಿದರು.
ಲಕ್ಷ್ಮೀಕಾಂತ ಡಿ. ಬೊಬ್ರೇಕರ್, ಸುನೀಲ ಆರ್. ಮಾಜಾಳಿಕರ್, ದೇವಾನಂದ ಬೊಬ್ರೇಕರ್, ಅಶೋಕ ಕೋಡಾರಕರ್, ರಾಮಾ ಬಿ. ದುಗೇಕರ್ ಮುಂತಾದವರ ನೇತೃತ್ವದಲ್ಲಿ ನೂರಾರು ಮೀನುಗಾರರು ಜಿಲ್ಲಾ ಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಮತ್ತು ಅನೇಕ ರಾಜ್ಯಗಳು ರಾತ್ರಿ ವೇಳೆ ಲೈಟ್ ಫಿಶ್ಶಿಂಗ್ ನಿಷೇಧ ಹೇರಿವೆ. ಮೀನು ಸಂತತಿಯನ್ನು
ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಉತ್ತರ ಕನ್ನಡದಲ್ಲಿ ರಾತ್ರಿ ವೇಳೆ ಬುಲ್ ಟ್ರಾಲ್ ಬಳಸಿ ಮೀನುಗಾರಿಕೆ ನಡೆದಿದೆ. ಬೆಳಕು ಬಿಟ್ಟು ಸಮುದ್ರದಲ್ಲಿ ಮೀನು ಬೇಟೆ ಮಾಡುವುದರಿಂದ ಬೆಳಕಿಗೆ ಸಣ್ಣ ಸಣ್ಣ ಮೀನು ಮರಿ ಸಹಿತ ಎಲ್ಲ ಮೀನುಗಳು ಬಲೆಗೆ ಬೀಳುತ್ತವೆ. ಇದರಿಂದಾಗಿ ಮೀನಿನ ಸಂತತಿ ಬಹುಬೇಗ ನಾಶವಾಗಲಿದೆ. ನಾಡದೋಣಿ ಮೀನುಗಾರರಿಗೆ ಈ ಹಿಂದೆ ಸಿಗುತ್ತಿದ್ದ ಸಣ್ಣ ಮೀನುಗಳು ಸಿಗುತ್ತಿಲ್ಲ. ತಿಪ್ಪೆ, ಬಣಗು, ಸಮುದಾಳೆ, ಜಾಲಿ ಮೀನುಗಳು ಬಲೆಗೆ ಬೀಳುತ್ತಿಲ್ಲ. ಈ ಸಂತತಿ ವಿನಾಶದ ಅಂಚಿನಲ್ಲಿವೆ.
ಮತ್ಸ ಬೇಟೆ ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿದೆ ಎಂದು ನಾಡದೋಣಿ ಮೀನುಗಾರರು ಆರೋಪಿಸಿದರು. ಹಾಗಾಗಿ ಜಿಲ್ಲಾಡಳಿತ ಬೆಳಕಿನ ಮತ್ಸ ಬೇಟೆ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಲಿಖೀತ ಮನವಿ ಸಲ್ಲಿಸಲಾಯಿತು. ಮದುಗಾ ಗ್ರಾಮದ ನಾಡದೋಣಿ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ
ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?