ಸರ್ಕಾರಿ ಆಸ್ಪತ್ರೆ ಬಗ್ಗೆ ನಿಂಗೇನ್ ಗೊತ್ತು?ವರ್ತೂರ್ ಗೆ ರಮೇಶ್ ಕುಮಾರ
Team Udayavani, Jul 1, 2017, 5:03 PM IST
ಕೋಲಾರ: ಡೆಂಗ್ಯು ಬಂದರೆ ನಿಮ್ಮ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸ್ಬೇಡಿ. ರೋಗಿಗಳನ್ನು ನೇರ ಬೆಂಗಳೂರಿಗೆ ಕರೆದುಕೊಂಡು ಹೋಗಿ. ಇಲ್ಲದಿದ್ದರೆ ಮೂರು ದಿನದಲ್ಲಿ ಡೆಡ್ ಬಾಡಿ ತಗೊಂಡು ಹೋಗ್ಬೇಕು ಎಂದು ಶಾಸಕ ವರ್ತೂರು ಪ್ರಕಾಶ್ ಸಭೆಯೊಂದರಲ್ಲಿ ಗಂಭೀರವಾಗಿ ಆರೋಪಿಸಿದ್ದು, ಇದಕ್ಕೆ ಆರೋಗ್ಯ ಸಚಿವ ಕೆಆರ್ ರಮೇಶ್ ಕುಮಾರ್ ಅವರು ಸಭೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಕೋಲಾರದಲ್ಲಿ ನಡೆದಿದೆ.
ಪತ್ರಿಕಾ ದಿನಾಚರಣೆಯ ಭಾಷಣದ ವೇಳೆ ಮಾತನಾಡುತ್ತಿದ್ದ ವರ್ತೂರು ಪ್ರಕಾಶ್ ಸರ್ಕಾರಿ ಆಸ್ಪತ್ರೆ ಬಗ್ಗೆ ದೂರಿದ್ದರು. ಆಗ ವೇದಿಕೆಯಲ್ಲೇ ಇದ್ದ ಸಚಿವ ರಮೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಆಸ್ಪತ್ರೆ ಬಗ್ಗೆ ನಿಂಗೇನ್ ಗೊತ್ತು? ಸರ್ಕಾರಿ ಆಸ್ಪತ್ರೆ ಸ್ಥಿತಿ ಬಗ್ಗೆ ಗೊತ್ತಾ? ಒಟ್ಟಾರೆ ಬಾಯಿಗೆ ಬಂದಂತೆ ಮಾತನಾಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ದಿನದ 24ಗಂಟೆಯೂ ಸೇವೆ ಇದೆ. ನಿನ್ನ ಬಳಿ ದುಡ್ಡಿದ್ದರೆ ಯಾವ ಆಸ್ಪತ್ರೆಗೆ ಬೇಕಾದರು ಕರೆದುಕೊಂಡು ಹೋಗಬಹುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್