ಬಹ್ರೈನ್ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ: ಜಯಮಾಲಾ ಉದ್ಘಾಟನೆ
Team Udayavani, Oct 3, 2018, 12:46 PM IST
ಬೆಂಗಳೂರು: ಬಹ್ರೈನ್ನಲ್ಲಿ ಅ.5ರಿಂದ 6ರ ವರೆಗೆ ಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅ.5ರಂದು ಬಹ್ರೈನ್ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭವನ್ನು ಸಚಿವೆ ಜಯಮಾಲಾ ಅವರು ಉದ್ಘಾಟಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ|ಮನು ಬಳಿಗಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. “ಗಲ್ಫ್ ಕನ್ನಡಿಗರ ಸ್ಥಿತಿಗತಿ’, “ವಿಶ್ವಭಾರತಿಗೆ ಕನ್ನಡದಾರತಿ’, “ಜಾಗತೀಕರಣ ಮತ್ತು ಭಾಷಾ ಬಿಕ್ಕಟ್ಟು’, “ವಲಸೆ ಕನ್ನಡಿಗರು’, “ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಮತ್ತು ಸಾಂಸ್ಕೃತಿಕ ಹಬ್ಬ’ ಸಹಿತ ಹಲವು ವಿಚಾರಗೋಷ್ಠಿಗಳು ನಡೆಯಲಿವೆ. ಅಲ್ಲದೆ ಹಿರಿಯ ಸಾಹಿತಿಗಳೊಂದಿಗೆ ಸಂವಾದ, ಕವಿಗೋಷ್ಠಿಗಳು ಜರುಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಪ್ರಕಟನೆ ತಿಳಿಸಿದೆ.