ಗಿಜಿಗುಡಬೇಕಿದ್ದ  ಮಲೆಯಲ್ಲಿ  ಭಕ್ತರೇ ಇಲ್ಲ


Team Udayavani, Jan 11, 2019, 3:59 AM IST

aluda-betta.jpg

ಶಬರಿಮಲೆ: ಮಕರ ಸಂಕ್ರಮಣ ಹತ್ತಿರ ಬರುತ್ತಿದ್ದಂತೆ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಭಕ್ತರ ಜಮಾವಣೆ ಆಗುತ್ತಿದ್ದ ಶಬರಿ ಮಲೆಯಲ್ಲಿ ಈ ವರ್ಷ ಭಕ್ತರ ಸಂಖ್ಯೆ ವಿಪರೀತ ಕುಸಿತ ಕಂಡಿದೆ. ವಾವರ ಮಸೀದಿ ಸುತ್ತಮುತ್ತ ನಡೆಯುತ್ತಿದ್ದ ಬೇಟೆ ತುಲ್ಲಾವನ್ನೇ ಗಮನಿಸುವುದಾದರೆ, ಈ ಹಿಂದಿನ ವರ್ಷಗಳಲ್ಲಿ ವಿಪರೀತ ದಟ್ಟಣೆ ಕಂಡುಬರುತ್ತಿತ್ತು. ಆದರೆ ಈ ಬಾರಿ ಬೆರಳೆಣಿಕೆಯ ಭಕ್ತರಿದ್ದಾರೆ.

“ಈ ಬಾರಿ ತುಂಬಾ ಆರಾಮವಾಗಿ ಬೇಟೆ ತುಲ್ಲಾ ನಡೆಸಿದ್ದೇವೆ’ ಎಂದು ಹಲವು ಭಕ್ತರು ತಿಳಿಸಿದ್ದಾರೆ. ಮುಂದೆ “ಮಲೆ ಚೌಟು’ವ (ಅಯ್ಯಪ್ಪ ಸ್ವಾಮಿ ನಡೆದುಕೊಂಡು ಹೋದ ದಾರಿ) ಕಾಡು ಹಾದಿಯ ಇಕ್ಕೆಲಗಳಲ್ಲಿ ನೂರಾರು ತಾತ್ಕಾಲಿಕ ಬೀರಿಗಳು ಎದುರಾಗುತ್ತವೆ. ಇಲ್ಲಿ ಆಹಾರ ಸೇವನೆ ಜತೆಗೆ ವಿಶ್ರಾಂತಿಗೂ ಅವಕಾಶವಿದೆ. ಕೇವಲ 14 ದಿನಗಳಲ್ಲಿ ಬೀರಿ (ಅಂಗಡಿ) ನಡೆಸುವ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಆದರೆ ಈ ವರ್ಷ ಬೀರಿಗಳೆಲ್ಲ ಬಿಕೋ ಎನ್ನುತ್ತಿವೆ. ವ್ಯಾಪಾರದ ಕೊರತೆ ಎದುರಿಸುತ್ತಿರುವ ವ್ಯಾಪಾರಿಗಳು, ಇರುವ ಭಕ್ತರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. “ಮಲೆ ಚೌಟು’ವನ್ನುತುಂಬಾ ಆರಾಮವಾಗಿ ನಡೆಸಲು ಸಾಧ್ಯವಾಗುತ್ತಿದೆ. ಒಂದಷ್ಟು ಭಕ್ತರು “ಮಲೆ ಚೌಟ’ದೆ ನೇರವಾಗಿ ಪಂಬಾಗೆ ಆಗಮಿಸಿ, ಇಲ್ಲಿಂದ ಮುಂದಿನ 8 ಕಿಲೋ ಮೀಟರ್‌ ಹಾದಿಯನ್ನು ಕ್ರಮಿಸುತ್ತಾರೆ. ಇಲ್ಲಿನ ನೀಲಿಮಲೆ, ಗಣೇಶ ಬೆಟ್ಟಗಳಲ್ಲೂ ಈಗ ಆರಾಮವಾಗಿ ನಡೆದುಕೊಂಡು ಹೋಗಬಹುದು. ಪ್ರತಿದಿನ ಶಬರಿಮಲೆಯಲ್ಲಿ ಅನ್ನದಾನ ನಡೆಯುತ್ತದೆ. ಅನ್ನ ಪ್ರಸಾದ ಸೇವಿಸಿದವರ ಸಂಖ್ಯೆಯನ್ನೇ ಗಮನಿಸುವುದಾದರೆ, ಇದರ ಸಂಖ್ಯೆ 1.5 ಲಕ್ಷ ಮೀರುವುದಿಲ್ಲ.

ಸರತಿ ಸಾಲಿಲ್ಲ
ಮಕರ ಸಂಕ್ರಮಣದ ಸಂದರ್ಭ ಭಾರೀ ಸರತಿ ಸಾಲು ಸಾಮಾನ್ಯ. ಕೆಲವು ವರ್ಷಗಳಲ್ಲಿ ನೀಲಿಮಲೆ ಬೆಟ್ಟದಿಂದಲೇ ಕ್ಯೂ ಇದ್ದ ಉದಾಹರಣೆಗಳೂ ಇವೆ. ಭಾರೀ ಸಂಖ್ಯೆಯ ಜನರನ್ನು ನಿಯಂತ್ರಿಸಲು ಒಂದೊಂದು ಕೊಠಡಿಗಳಾಗಿ ಮಾಡಿ, ಭಕ್ತರನ್ನು ಮುಂದೆ ಬಿಡಲಾಗುತ್ತದೆ. ಆದರೆ ಈ ವರ್ಷ ಕೊಠಡಿ ವಿಷಯ ಬಿಡಿ, 18 ಪಡಿ (ಮೆಟ್ಟಿಲು) ಗಳನ್ನು ಕೂಡ ಸುಲಲಿತ ವಾಗಿ ಏರಬಹುದು. ಒತ್ತಡಕ್ಕೆ ಒಳಗಾಗದ ಪೊಲೀಸರು ಮುಂದೆ ತಳ್ಳುವ ಕಾಯಕ ಮಾಡುವುದೇ ಇಲ್ಲ, ವಿನಯದಿಂದ ಪಡಿ ಹತ್ತಲು ಸಹಕರಿಸುತ್ತಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 60ರಷ್ಟು ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಮೊದಲೆಲ್ಲ ರಾತ್ರಿ ಪೂರ್ತಿ ಬೀರಿಗಳು ತೆರೆದಿರುತ್ತಿದ್ದವು. ಅಂದರೆ ರಾತ್ರಿಯಿಡೀ ದೊಡ್ಡ ಸಂಖ್ಯೆಯ ಭಕ್ತರು ನಡೆದು ಹೋಗುತ್ತಿದ್ದರು. ಆದರೆ ಈ ವರ್ಷ ಸರಿರಾತ್ರಿಯಲ್ಲಿ ಹಲವು ಅಂಗಡಿಗಳವರು ಬಾಗಿಲು ಮುಚ್ಚುವ ಪ್ರಸಂಗ ಎದುರಾಗಿದೆ.
ಧರ್ಮೇಶ್‌ ಅಲುದಾ, ವ್ಯಾಪಾರಿ

 ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.