ಆರ್ಬಿಐ ಗವರ್ನರನ್ನು ರಕ್ಷಿಸಿದ ಮನಮೋಹನ್
Team Udayavani, Jan 19, 2017, 8:12 AM IST
ಕಾಂಗ್ರೆಸ್ನ ಸದಸ್ಯರು ಆರ್ಬಿಐ ಮುಖ್ಯಸ್ಥ ಊರ್ಜಿತ್ ಪಟೇಲ್ ಅವರಿಗೆ ಹಲವಾರು ಕಠಿನ ಪ್ರಶ್ನೆಗಳನ್ನೇ ಕೇಳಿದರು. ಅದರಲ್ಲೂ ದಿಗ್ವಿಜಯ್ ಸಿಂಗ್ ಅವರಂತೂ, “ಕ್ಯಾಶ್ ವಿತ್ಡ್ರಾವಲ್ ಮೇಲೆ ಹೇರಲಾಗಿರುವ ಮಿತಿಯನ್ನು ವಾಪಸ್ ತೆಗೆದುಕೊಂಡರೆ ದೇಶದಲ್ಲಿ ದೊಂಬಿ ಉಂಟಾಗುತ್ತದೆಯೇ’ ಎಂಬ ಪ್ರಶ್ನೆ ಕೇಳಿದರು. ಈ ಕೂಡಲೇ ಆರ್ಬಿಐ ಮುಖ್ಯಸ್ಥರ ನೆರವಿಗೆ ಬಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, “ಆರ್ಬಿಐನ ಹಿತಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬೇಡಿ’ ಎಂದು ಹೇಳಿದರು. ಸದಸ್ಯರ ಇನ್ನೂ ಹಲವು ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಬೇಡಿ ಎಂದರು.