ಕಾಸರಗೋಡಿನ ನಾಲ್ವರು ಐಸಿಸ್ ಉಗ್ರರ ಸಾವು
Team Udayavani, Mar 31, 2018, 6:00 AM IST
ಕಾಸರಗೋಡು: ಐಸಿಸ್ಗೆ ಸೇರ್ಪಡೆಗೊಂಡ ಕಾಸರಗೋಡಿನ ನಾಲ್ವರು ಅಫ್ಘಾನಿಸ್ಥಾನದಲ್ಲಿ ಅಮೆರಿಕ ಸೇನೆಯ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ. ಕಾಸರಗೋಡು ಪಡನ್ನದ ನಿವಾಸಿಗಳಾದ ಶಿಹಾಬ್, ಪತ್ನಿ ಅಜ್ಮಲಾ, ಅವರ ಮಗು ಮತ್ತು ತೃಕ್ಕರಿಪುರದ ಮುಹಮ್ಮದ್ ಮನ್ಸಾದ್ ಮೃತಪಟ್ಟವರು ಎಂದು ವರದಿಯಾಗಿದೆ. ನಂಗರ ಹಾರ್ ಪ್ರದೇಶದ ಐಸಿಸ್ ಶಿಬಿರದ ಮೇಲೆ ಅಮೆರಿಕದ ವಾಯುಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ಇವರು ಸಾವಿಗೀಡಾಗಿದ್ದಾರೆ. ಕೇರಳದಿಂದ ನಾಪತ್ತೆಯಾಗಿದ್ದ ಇವರು ಅಫ್ಘಾನ್ ತಲುಪಿದ್ದರು.
ಕೇರಳದಿಂದ 22 ಮಂದಿ ಐಸಿಸ್ ಸೇರ್ಪಡೆಯಾಗಿದ್ದಾರೆಂದು ಪೊಲೀಸ್ ವರದಿ ಮಾಡಿತ್ತು. ಕೇರಳದಲ್ಲಿ ಐಸಿಸ್ ಚಟುವಟಿಕೆ ನೇತೃತ್ವ ವಹಿಸಿದ್ದ ಶಜೀರ್ ಮಂಗಲಶೆರಿ ಸಹಿತ 14 ಮಂದಿ ಕಳೆದ ವರ್ಷ ಸಿರಿಯಾದಲ್ಲಿ ಸೇನೆ ಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವಿಗೀಡಾಗಿದ್ದರು ಎಂದು ರಹಸ್ಯ ತನಿಖಾ ವಿಭಾಗ ಖಚಿತಪಡಿಸಿತ್ತು. ಕಾಸರಗೋಡಿನ ನಿವಾಸಿಗಳನ್ನು ಐಸಿಸ್ ಕೇಂದ್ರಕ್ಕೆ ತಲುಪಿಸಲು ನೆರವಾದ ಪ್ರಕರಣದಲ್ಲಿ ಬಿಹಾರ್ ನಿವಾಸಿ ಯಾಸ್ಮಿನ್ ಅಹಮ್ಮದ್ಗೆ ಎನ್ಐಎ ನ್ಯಾಯಾಲಯ ಏಳು ವರ್ಷ ಸಜೆ ವಿಧಿಸಿತ್ತು. 2016ರ ಜು.30ರಂದು ಪುತ್ರನೊಂದಿಗೆ ವಿದೇಶಕ್ಕೆ ಪಲಾಯನಗೈಯಲು ಯತ್ನಿಸುತ್ತಿದ್ದಾಗ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾಸ್ಮಿನ್ಳನ್ನು ಬಂಧಿಸಲಾಗಿತ್ತು.
ಕಾಸರಗೋಡು ನಿವಾಸಿಗಳಾದ 15 ಮಂದಿ ಯನ್ನು ಭಯೋತ್ಪಾದಕ ಸಂಘಟನೆಯಾದ ಐಸಿಸ್ಗೆ ಸೇರ್ಪಡೆಗೊಳಿಸಲು ವಿದೇಶಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಯಾಸ್ಮಿನ್ ವಿರುದ್ಧ ಕೇಸು ದಾಖಲಿಸಲಾಗಿತ್ತು. ನಿಗೂಢ ರೀತಿಯಲ್ಲಿ ಕಾಸರಗೋಡಿನ ತೃಕ್ಕರಿಪುರದಿಂದ ನಾಪತ್ತೆಯಾಗಿದ್ದವರಲ್ಲಿದ್ದ ಅಬ್ದುಲ್ ರಶೀದ್ ಅಬ್ದುಲ್ಲನೊಂದಿಗೆ ಯಾಸ್ಮಿನ್ ನಿಕಟ ಸಂಪರ್ಕ ವಿತ್ತೆಂದು ತನಿಖೆಯಿಂದ ತಿಳಿದು ಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ