ಜತೆಗೂಡಿಯೇ ಸ್ಪರ್ಧೆ: ಶಾ
Team Udayavani, Jul 13, 2018, 6:00 AM IST
ಪಟ್ನಾ: ಬಿಜೆಪಿ ಮತ್ತು ಜೆಡಿಯು ನಡುವೆ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಸಂಬಂಧ ಜೆಡಿಯು ಮತ್ತು ಬಿಜೆಪಿ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಮಾತುಗಳ ನಡುವೆಯೇ ಅಮಿತ್ ಶಾ ಅವರು, ಪಟ್ನಾಗೆ ಬಂದಿದ್ದು, ಜೆಡಿಯು ಅಧ್ಯಕ್ಷ ನಿತೀಶ್ಕುಮಾರ್ ಜತೆ ಗುರುವಾರ ಬೆಳಗ್ಗೆ ಉಪಾಹಾರವನ್ನೂ ಸವಿದಿದ್ದಾರೆ. ಬಳಿಕ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಶಾ, ಜೆಡಿಯು ಮತ್ತು ಬಿಜೆಪಿ ಬೇರೆ ಬೇರೆಯಾಗುತ್ತವೆ ಎಂಬ ಮಾತುಗಳನ್ನೂ ತಳ್ಳಿಹಾಕಿದ್ದಾರೆ. ವಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿದ ಶಾ ಅವರು, ನಾವು ಬೇರೆಯಾಗುತ್ತೇವೆ ಎಂಬುದನ್ನು ಈ ತತ್ಕ್ಷಣದಿಂದಲೇ ಮರೆತುಬಿಡಿ. ನಾವು ಜತೆಯಾಗಿದ್ದೇವೆ, ಲೋಕಸಭೆ ಚುನಾವಣೆಯಲ್ಲೂ ಒಟ್ಟಿಗೇ ಸ್ಪರ್ಧಿಸುತ್ತೇವೆ, ಎಲ್ಲಾ 40 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದಿದ್ದಾರೆ.