ಆಧಾರ್‌ ಸಾಫ್ಟ್ ವೇರ್‌ ಹ್ಯಾಕ್‌; ಖಾಸಗಿ ಡೇಟಾ ಭದ್ರತೆ ರಾಜಿ: ವರದಿ


Team Udayavani, Sep 11, 2018, 7:08 PM IST

aadhar-hacked-700.jpg

ಹೊಸದಿಲ್ಲಿ : ಆಧಾರ್‌ ಸಾಫ್ಟ್  ವೇರ್‌ ಭದ್ರತೆಯಲ್ಲಿ ಗಂಭೀರ ಲೋಪಗಳು ಪತ್ತೆಯಾಗಿದ್ದು ಆಧಾರ್‌ ಸಾಫ್ಟ್ ವೇರ್‌ ಹ್ಯಾಕ್‌ ಮಾಡುವ ಮೂಲಕ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಕುಳಿತುಕೊಂಡು ಯಾರೂ ಅನಧಿಕೃತ ಆಧಾರ್‌ ನೋಂದಾವಣೆ ಆಪರೇಟರ್‌ಗಳಾಗಿ ಕೆಲಸ ಮಾಡಬಹುದಾಗಿದೆ ಎಂದು ಹಫ್ ಪೋಸ್ಟ್‌ ಸುದ್ದಿ ವೆಬ್‌ ಸೈಟ್‌ ನಡೆಸಿರುವ ತನಿಖಾ ವರದಿ ತಿಳಿಸಿದೆ. 

‘ಹೊಸ ಬಳಕೆದಾರರನ್ನು ನೋಂದಾಯಿಸುವುದಕ್ಕೆ ಬಳಸಲ್ಪಡುವ ಆಧಾರ್‌ ಸಾಫ್ಟ್  ವೇರ್‌ ಅನ್ನು ಹ್ಯಾಕ್‌ ಮಾಡಲು ಸಾಧ್ಯವಿದೆ. ಅದರಲ್ಲಿನ ಭದ್ರತಾ ಅಂಶಗಳಿರುವ  ನಿರ್ಣಾಯಕ ‘ಪ್ಯಾಚ್‌’ ನಿಷ್ಕ್ರಿಯಗೊಳಿಸುವ ಮೂಲಕ ಜಗತ್ತಿನಲ್ಲಿ ಎಲ್ಲೇ ಕುಳಿತುಕೊಂಡು ಯಾರೂ ಕೂಡ ಆಧಾರ್‌ ನೋಂದಾವಣೆ ಮಾಡಬಹುದಾಗಿದೆ ಎಂಬುದನ್ನು ಹಫ್ ಪೋಸ್ಟ್‌ ತನ್ನ ತನಿಖೆಯಿಂದ ಬಹಿರಂಗಪಡಿಸಿದೆ. 

ಸುಮಾರು ಮೂರು ತಿಂಗಳ ಕಾಲ ಹಫ್ ಪೋಸ್ಟ್‌ ನಡೆಸಿರುವ ಕೂಲಂಕಷ ತನಿಖೆಯಲ್ಲಿ ಆಧಾರ್‌ ಸಾಫ್ಟ್ ವೇರ್‌ ನ ಈ ನಿರ್ಣಾಯಕ ಪ್ಯಾಚ್‌ ಹ್ಯಾಕ್‌ ಮಾಡಿದಲ್ಲಿ  ಭದ್ರತಾ ಅಂಶಗಳನ್ನು ಬೈಪಾಸ್‌ ಮಾಡಬಹುದಾಗಿದ್ದು  ತತ್‌ಪರಿಣಾಮವಾಗಿ ಜಗತ್ತಿನಲ್ಲಿ ಎಲ್ಲೇ ಕುಳಿತುಕೊಂಡು ಯಾರಿಗೂ ಆಧಾರ್‌ ನಂಬರ್‌ ಕೊಡಬಹುದಾಗಿದೆ ಎಂಬುದನ್ನು ಪತ್ತೆ ಹಚ್ಚಿದೆ. 

ಆಧಾರ್‌ ಸಾಫ್ಟ್ ವೇರ್‌ ನ ಈ ನಿರ್ಣಾಯಕ ಪ್ಯಾಚ್‌ ತಲುಪುವಿಕೆಯನ್ನು ತಾನು ಪಡೆದಿದ್ದು  ಹಲವಾರು ಪರಿಣತರ ಮೂಲಕ ಇದನ್ನು ತಾನು ಪರಿಶೀಲಿಸಿದ್ದೇನೆ ಎಂದು ಹಫ್ ಪೋಸ್ಟ್‌ ಹೇಳಿದೆ. 

ಆಧಾರ್‌ ಸಾಫ್ಟ್ ವೇರ್‌ ನ ಈ ನಿರ್ಣಾಯಕ ಪ್ಯಾಚ್‌ ತಲುಪುವ ಮೂಲಕ ಅನಧಿಕೃತ ಜನರು ಕೂಡ ಆಧಾರ್‌ ನೋಂದಾವಣೆ ಮಾಡಬಹುದಾಗಿದೆ. ಏಕೆಂದರೆ ಆಧಾರ್‌ ಸಾಫ್ಟ್ ವೇರ್‌ನ ಈ ನಿರ್ಣಾಯಕ ಪ್ಯಾಚ್‌ ಹ್ಯಾಕ್‌ ಮಾಡಿದರೆ ಅದು ಆಧಾರ್‌ ನೋಂದಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಭದ್ರತಾ ದಾಖಲೆಗಳನ್ನು ಕೇಳುವುದಿಲ್ಲ ಎಂದು ಹಫ್ ಪೋಸ್ಟ್‌ ಹೇಳಿದೆ. ಪ್ರಕೃತ ಅಧಿಕೃತ ಆಧಾರ್‌ ಸಾಫ್ಟ್ ವೇರ್‌ ಎನ್‌ರೋಲ್‌ಮೆಂಟ್‌ ಆಪರೇಟರ್‌ ಗಳು ಇರುವ ತಾಣಗಳನ್ನು  ಗುರುತಿಸುವುದಕ್ಕೆ ಅವಕಾಶವಿದೆ. 

ಆಧಾರ್‌ ಸಾಫ್ಟ್ ವೇರ್‌ ಹ್ಯಾಕ್‌ ಮಾಡುವ ಮೂಲಕ ಅನಧಿಕೃತರಿಗೆ, ಎನ್‌ರೋಲ್‌ಮೆಂಟ್‌ ಆಪರೇಟರ್‌ ಗಳಾಗಿ ಲಾಗಿನ್‌ ಆಗುವುದಕ್ಕೆ ಸಾಧ್ಯವಿರುತ್ತದೆ ಎಂದು ಹಫ್ಪೋಸ್ಟ್‌ ಹೇಳಿದೆ. 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.