ಕೃಷಿ ಸಾಲ ಮನ್ನಾದಿಂದ ಭಾರೀ ಸಮಸ್ಯೆ: ಕಾಂಗ್ರೆಸ್ಗೆ ರಘುರಾಮ ರಾಜನ್
Team Udayavani, Dec 14, 2018, 5:54 PM IST
ಹೊಸದಿಲ್ಲಿ : ಅಧಿಕಾರಕ್ಕೆ ಬಂದ 10 ದಿನಗಳ ಒಳಗೆ ರೈತರ ಸಾಲ ಮನ್ನಾ ಮಾಡುವ ಆಶ್ವಾಸನೆಯೊಂದಿಗೆ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ಗಢ ವಿಧಾನ ಸಭೆಯ 2018ರ ಚುನಾವಾಣೆಗಳನ್ನು ಗೆದ್ದು ಬಂದಿರುವ ಕಾಂಗ್ರೆಸ್ ಗೆ ಮಾಜಿ ಆರ್ಬಿಐ ಗವರ್ನರ್ ರಘುರಾಮ ರಾಜನ್ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.
‘ಸರಕಾರದ ಸಾಲ ಮನ್ನಾ ಕ್ರಮದಿಂದ ಲಾಭ ಪಡೆಯುವವರು ಬಡವರಲ್ಲ; ಬದಲು ಆಡಳಿತ ಯಂತ್ರದೊಂದಿಗೆ ಉತ್ತಮ ಸಂಪರ್ಕ ಇರುವವರು’ ಎಂದು ರಘುರಾಮ ರಾಜನ್ ಹೇಳಿದ್ದಾರೆ.
‘ಇನ್ನೊಂದು ವಿಷಯವೆಂದರೆ ಸಾಲ ಮನ್ನಾ ಕ್ರಮದಿಂದ ರಾಜ್ಯಗಳ ಹಣಕಾಸು ಸ್ಥಿತಿಗತಿಗೆ ಹಲವಾರು ಗಂಭೀರ ಸವಾಲುಗಳು ಎದುರಾಗುತ್ತವೆ’ ಎಂದು ರಾಜನ್ ಹೇಳಿದ್ದಾರೆ.