ಇಲ್ಲಿ “ಅಂಕಲ್’,”ಮಾಮಾ’ಮಧ್ಯವರ್ತಿಗಳಿಲ್ಲ: ಮೋದಿ
Team Udayavani, Dec 17, 2018, 6:00 AM IST
ರಾಯ್ಬರೇಲಿ:”“ರಫೇಲ್ ಯುದ್ಧ ವಿಮಾನ ಖರೀದಿ ಡೀಲ್ನಲ್ಲಿ ಯಾವುದೇ “ಅಂಕಲ್’, “ಮಾಮಾ’ ಇರದಿರುವುದೇ ಕಾಂಗ್ರೆಸ್ಗೆ ನನ್ನ ಮೇಲೆ ಸಿಟ್ಟುಬರಲು ಕಾರಣ” ಎಂದು ಪ್ರಧಾನಿ ನರೇಂದ್ರ ಮೋದಿ ನೇರವಾಗಿಯೇ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡದಲ್ಲಿ ಬಿಜೆಪಿಗೆ ಸೋಲಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ವಿರುದ್ಧ ಈ ಪ್ರಮಾಣದ ದಾಳಿ ನಡೆಸಿದ್ದಾರೆ.
ಸೋನಿಯಾ ಅವರ ಕ್ಷೇತ್ರವಾದ ರಾಯ್ಬರೇಲಿಯಲ್ಲಿ ಭಾನುವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “”ಈ ಹಿಂದೆ ರಕ್ಷಣಾ ಇಲಾಖೆಯ ಡೀಲ್ಗಳಲ್ಲಿ ಮಧ್ಯವರ್ತಿಗಳಾಗಿ ಕ್ವಟ್ರೋಚಿ ಮಾಮಾ ಅಥವಾ ಕ್ರಿಶ್ಚಿಯನ್ ಮೈಕೆಲ್ನಂಥ ಮಧ್ಯವರ್ತಿಗಳು ಇರುತ್ತಿದ್ದರು. ಆದರೆ, ನಾವು ಈ ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಖರೀದಿ ಮಾಡುತ್ತಿದ್ದೇವೆ. ಈ ಪಾರದರ್ಶಕತೆಯಿಂತಾಗಿ ಸಿಟ್ಟು ಗೊಂಡಿರುವ ಕಾಂಗ್ರೆಸ್ ಸುಳ್ಳುಗಳನ್ನು ಹೇಳಿಕೊಂಡು ತಿರುಗಾಡುತ್ತಿದೆ” ಎಂದು ಆರೋಪಿಸಿದರು.
ರಕ್ಷಣಾ ವಲಯ ಬಲಪಡಿಸಲಿಲ್ಲ: ಸುಮಾರು 50 ನಿಮಿಷ ಗಳ ಕಾಲ ಭಾಷಣ ಮಾಡಿದ ಮೋದಿ ಅವರು, ಇದರಲ್ಲಿ 30 ನಿಮಿಷಗಳ ಸಮಯವನ್ನು ರಫೇಲ್ ಡೀಲ್ ಕುರಿತಂತೆ ಮಾತ ನಾಡಲು ಬಳಸಿಕೊಂಡರು. ಈ ಹಿಂದಿನಿಂದಲೂ ಕಾಂಗ್ರೆಸ್ಗೆ ದೇಶದ ರಕ್ಷಣಾ ವಲಯ ಬಲಾಡ್ಯವಾಗುವುದು ಬೇಕಾಗಿರಲಿಲ್ಲ. ಕಾರ್ಗಿಲ್ ಯುದ್ಧದ ನಂತರ ದೇಶದ ವಾಯ ಪಡೆಗೆ ಆಧುನಿಕ ಯುದ್ಧ ವಿಮಾನಗಳು ಬೇಕಿದ್ದವು. ಆದರೆ, ಮುಂದಿನ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಯಾವ ಕಾರಣ ಕ್ಕಾಗಿ ಅಥವಾ ಯಾರ ಒತ್ತಡದಿಂದಾಗಿ ಹಿಂದಿನ ಸರ್ಕಾರ ವಾಯು ಪಡೆಯನ್ನು ಬಲಿಷ್ಠಗೊಳಿಸಲಿಲ್ಲ ಎಂದೂ ಪ್ರಶ್ನೆ ಮಾಡಿದರು.
ಇದೀಗ ಪಾರದರ್ಶಕವಾಗಿ ನಡೆದಿರುವ ಖರೀದಿ ಬಗ್ಗೆ ಸುಳ್ಳುಗಳ ಬಿತ್ತರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆ ದೇಶದ ರಕ್ಷಣಾ ಇಲಾಖೆ ಬಲಗೊಳ್ಳುವುದು ಬೇಕಾ ಗಿಯೇ ಇಲ್ಲ. ಇವರ ಪ್ರಕಾರ ರಕ್ಷಣಾ ಇಲಾಖೆ, ರಕ್ಷಣಾ ಸಚಿ ವರು, ರಕ್ಷಣಾ ಇಲಾಖೆಯ ಅಧಿಕಾರಿಗಳು, ಭಾರತೀಯ ವಾಯು ಸೇನೆ, ಫ್ರಾನ್ಸ್ ಸರ್ಕಾರಗಳೂ ಸುಳ್ಳು ಹೇಳುತ್ತವೆ. ಇದೀಗ ಸುಪ್ರೀಂಕೋರ್ಟ್ ಕೂಡ ಸುಳ್ಳು ಹೇಳುತ್ತಿದೆ ಎಂದು ವಾದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ನವರು ಸುಪ್ರೀಂಕೋರ್ಟ್ ವಿರುದ್ಧ ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಜನ ನೋಡುತ್ತಿದ್ದಾರೆ ಎಂದೂ ಹೇಳಿದರು.
ಬೋಫೋರ್ಸ್ ವೇಳೆಯಲ್ಲಿ ಕ್ವಟ್ರೋಚಿ ಎಂಬ ಮಧ್ಯವರ್ತಿ ಮತ್ತು ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಖರೀದಿ ವೇಳೆ ಕ್ರಿಶ್ಚಿಯನ್ ಮೈಕೆಲ್ ಎಂಬ ಮಧ್ಯವರ್ತಿ ಡೀಲ್ ಮಾಡಿ ಕೊಟ್ಟಿದ್ದ. ಇದೀಗ ನಾವು ಮೈಕೆಲ್ನನ್ನು ಭಾರತಕ್ಕೆ ಕರೆತಂದಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ತಿರುಗೇಟು
ಇಂದು(ಡಿ.16) ಬಾಂಗ್ಲಾದೇಶ ಸ್ವಾತಂತ್ರ್ಯ ಸಮರದ ವಿಜಯೋತ್ಸವ ದಿನವಾಗಿದ್ದು, ಪ್ರಧಾನಿ ಮೋದಿ ಅವರು ಇಂದಿರಾ ಗಾಂಧಿಯನ್ನು ನೆನಪಿಸಿಕೊಳ್ಳಬೇಕಿತ್ತು. ಆದರೆ, ಅವರ ಕ್ಷೇತ್ರವಾಗಿದ್ದ ರಾಯ್ಬರೇಲಿಗೆ ಹೋಗಿ ಇಂದಿರಾ ಗಾಂಧಿ ವಿರುದ್ಧ ಬೈಯ್ಯುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಮಾತ ನಾಡಿದ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ, ಮೋದಿ ಅವರು ಇಂದಿರಾ ಗಾಂಧಿಯವರತೆಗಳು ತ್ತಿದ್ದಂತೆ ಜನ ಸಾರ್ವಜನಿಕ ಸಭೆ ಬಿಟ್ಟು ಎದ್ದು ಹೋದರು ಎಂದಿದ್ದಾರೆ.
ಹಲವು ಯೋಜನೆಗಳಿಗೆ ಶಿಲಾನ್ಯಾಸ,ಚಾಲನೆ
ರಾಯ್ಬರೇಲಿ ಭೇಟಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಬಹುಕೋಟಿ ಮೌಲ್ಯದ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿದರು. ರಾಯ್ಬರೇ ಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿಯನ್ನು ಪರಿಶೀಲನೆ ನಡೆಸಿ, ಕೋಚ್ ಫ್ಯಾಕ್ಟರಿಯ 900ನೇ ಕೋಚ್ ಮತ್ತು ಹಮ್ಸಫರ್ ರೇಕ್ಗೆ ಹಸಿರು ನಿಶಾನೆ ತೋರಿದರು. ಪ್ರಯಾಗ್ರಾಜ್ಗೆ ತೆರಳಿ 2019ರ ಕುಂಭಮೇಳದ ನಿಯಂ ತ್ರಣಾ ಕೇಂದ್ರಕ್ಕೂ ಚಾಲನೆ ನೀಡಿದರು. ಅಲ್ಲದೆ, ಇಲ್ಲಿ ಬಮೌÅಲಿ ಏರ್ಪೋರ್ಟ್ ಸಿವಿಲ್ ಟರ್ಮಿನಲ್ ಅನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿ ರುವ ಕ್ರಮಗಳ ಬಗ್ಗೆಯೂ ಮಾತನಾಡಿದರು. ಬಳಿಕ ಪ್ರಯಾಗ್ರಾಜ್ನ ಸಂಗಮ್ನಲ್ಲಿ ಗಂಗಾಪೂಜೆಯನ್ನೂ ನೆರವೇರಿಸಿದರು.