ಪಿಂಚಣಿ ದುಪ್ಪಟ್ಟು ಮಾಡಲು ಯೋಜನೆ?
Team Udayavani, Jan 26, 2019, 12:30 AM IST
ನವದೆಹಲಿ: ದೇಶದ 60 ಲಕ್ಷ ಪಿಂಚಣಿದಾರರ ಮಾಸಿಕ ಪಿಂಚಣಿಯನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಸುಮಾರು 40 ಲಕ್ಷ ಪಿಂಚಣಿದಾರರು ಮಾಸಿಕ ರೂ. 1500 ಕ್ಕಿಂತ ಕಡಿಮೆ ಮೊತ್ತ ಪಡೆಯುತ್ತಿದ್ದಾರೆ. ಹೀಗಾಗಿ ಈ ಮೊತ್ತವನ್ನು 3 ಸಾವಿರಕ್ಕೆ ಏರಿಕೆ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರದ ಕಾರ್ಮಿಕ ಸಂಘಟನೆಗಳು ಹಿಂದಿನಿಂದಲೂ ಆಗ್ರಹಿಸುತ್ತಿದ್ದವು. ಇದನ್ನು 2013ರಲ್ಲಿ ಕೋಶಿಯಾರಿ ಸಮಿತಿ ಕೂಡ ಶಿಫಾರಸು ಮಾಡಿತ್ತು. ಇನ್ನೊಂದೆಡೆ ಪಿಂಚಣಿದಾರರ ಸಮಿತಿಯೊಂದು ಮಾಸಿಕ 7500 ರೂ. ಪಿಂಚಣಿ ಒದಗಿಸಬೇಕೆಂದೂ ಆಗ್ರಹಿಸಿದೆ.
ಒಂದು ವೇಳೆ 3000 ರೂ. ಮಾಸಿಕ ಪಿಂಚಣಿ ನಿಗದಿಸಿದರೆ, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುವರಿ 3 ಸಾವಿರ ಕೋಟಿ ರೂ. ಹೊರೆಯಾಗಲಿದೆ. ಇನ್ನೊಂದೆಡೆ ಪಿಂಚಣಿ ಹೆಚ್ಚಳದ ಜೊತೆಗೆ ಭವಿಷ್ಯ ನಿಧಿ ಹಿಂಪಡೆತದ ಪ್ರಮಾಣವನ್ನು ಇಳಿಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು