ಗ್ರಾಮ ಮುಖ್ಯಸ್ಥೆಯನ್ನು ನೆಲದಲ್ಲಿ ಕೂರಿಸಿದ ರಾಜಸ್ಥಾನದ ಕೈ ಶಾಸಕಿ
Team Udayavani, Mar 20, 2019, 5:45 AM IST
ಜೋಧ್ಪುರ : ಗ್ರಾಮ ಸಭೆಯೊಂದರಲ್ಲಿ ಗ್ರಾಮ ಮುಖ್ಯಸ್ಥೆಯನ್ನು (ಮಹಿಳಾ ಸರಪಂಚ್ಳನ್ನು) ಕುರ್ಚಿಯಲ್ಲಿ ಕೂರಿಸುವ ಬದಲು ನೆಲದಲ್ಲಿ ಕೂರಿಸಿದುದಕ್ಕೆ ಕಾಂಗ್ರೆಸ್ ಶಾಸಕಿ ದಿವ್ಯಾ ಮಡೇರ್ನಾ ಕ್ಷಮೆ ಕೇಳಬೇಕು ಇಲ್ಲವೇ ನಮ್ಮ ಆಕ್ರೋಶವನ್ನು ಆಕೆ ಎದುರಿಸಬೇಕು ಎಂದು ರಾಜಸ್ಥಾನದ ಸರಪಂಚ್ ಸಂಘ ಎಚ್ಚರಿಕೆ ನೀಡಿದೆ.
ಕಳೆದ ಶನಿವಾರ ಜೋಧ್ಪುರ ಜಿಲ್ಲೆಯ ಓಸಿಯನ್ ಪ್ರದೇಶದಲ್ಲಿನ ಗ್ರಾಮ ಸಭೆಯೊಂದರಲ್ಲಿ ಖೇತಸಾರ್ ಗ್ರಾಮ ಮುಖ್ಯಸ್ಥೆಯನ್ನು ಶಾಸಕಿ ದಿವ್ಯಾ ಮಡೇರ್ನಾ ಅವರು ನೆಲದಲ್ಲಿ ಕೂರುವಂತೆ ಹೇಳಿ ಆಕೆಯನ್ನು ಅವಮಾನಿಸಿದ್ದರು ಎಂದು ರಾಜಸ್ಥಾನ ಸರಪಂಚ್ ಸಂಘ ಆರೋಪಿಸಿದೆ.
“ಶಾಸಕಿ ದಿವ್ಯಾ ಅವರು ತಾವು ಮಹಿಳಾ ಸರಪಂಚ್ಗೆ ಗೈದಿರುವ ಅವಮಾನಕ್ಕಾಗಿ ಕ್ಷಮೆ ಕೇಳಬೇಕು; ಇಲ್ಲದಿದ್ದರೆ ಆಕೆ ನಮ್ಮ ಆಕ್ರೋಶವನ್ನು ಎದುರಿಸಬೇಕಾದೀತು ಎಂದು ರಾಜಸ್ಥಾನ ಸರಪಂಚ್ ಸಂಘದ ಅಧ್ಯಕ್ಷ ಭಂವರ್ಲಾಲ್ ಹೇಳಿದ್ದಾರೆ.
ನಾನೊಬ್ಬ ಮಹಿಳೆಯಾಗಿ, ಅದೂ ಸರಪಂಚಳಾಗಿ, ನನ್ನ ವಿರುದ್ಧ ಒಬ್ಬ ಮಹಿಳಾ ಜನಪ್ರತಿನಿಧಿಯಿಂದ ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷಿಸಿರಲಿಲ್ಲ; ನನಗೆ ತುಂಬಾ ದುಃಖ, ನೋವು, ಅವಮಾನವಾಗಿದೆ’ ಎಂದು ಗ್ರಾಮ ಮುಖ್ಯಸ್ಥೆ ಚಂದು ದೇವಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಂದ್ರಾ- ವರ್ಲಿ ಸೀ ಲಿಂಕ್ಗೆ 25,000 ಟನ್ ಗರ್ಡರ್ ಅಳವಡಿಕೆ
Telangana: ಪಿಯು ಫಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ