ಶ್ರೀ ಮಣಿಕಂಠ ಸೇವಾ ಸಮಿತಿ : 16ನೇ ವಾರ್ಷಿಕಮಹಾಪೂಜೆ


Team Udayavani, Dec 6, 2017, 5:15 PM IST

05-Mum03b.jpg

ಮುಂಬಯಿ: ವಸಾಯಿ ಪರಿಸರದಲ್ಲಿರುವ ಶ್ರೀ ಮಣಿಕಂಠ ಸೇವಾ ಸಮಿತಿಯ 16ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾ ಪೂಜೆಯು ವಸಾಯಿ ಪಶ್ಚಿಮದ ಸಾಯಿನಗರ ಗ್ರೌಂಡ್‌ನ‌ಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ. 3ರಂದು ನೆರವೇರಿತು.

ಮೂಡಬಿದ್ರೆ ಶ್ರೀ ಮಣಿಕಂಠ ಕ್ಷೇತ್ರದ ರಮೇಶ್‌ ಶಾಂತಿ ಗುರುಸ್ವಾಮಿ ಮತ್ತು ಶಿವಾನಂದ ಶಾಂತಿ ಗುರುಸ್ವವಾಮಿ ಅವರ ದಿವ್ಯಹಸ್ತದಿಂದ ಮುಂಜಾನೆ 6.30 ರಿಂದ ಗಣಹೋಮ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಮಹಾ ಮಂಗಳಾರತಿಯು ಶ್ರದ್ಧಾಭಕ್ತಿಯಿಂದ  ನಡೆಯಿತು. ಶ್ರೀ ಅಯ್ಯಪ್ಪ ಸ್ವಾಮಿಯ ಬಲಭಾಗದಲ್ಲಿ ವಿನಾಯಕ ಹಾಗೂ ಹೂವಿನ ತೂಗುಯ್ನಾಲೆಯಲ್ಲಿ ಅಲಂಕರಿಸಲ್ಪಟ್ಟ ಭ್ರಮರಾಂಬಿಕೆ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಅಲಂಕೃತ ಮಂಟಪವು ಭಕ್ತಾದಿಗಳನ್ನು ಆಕರ್ಷಿಸಿತು. ಪೂರ್ವಾಹ್ನ 9 ರಿಂದ ಗಾಯನ ಪನ್ವೇಲ್‌ ಸುರೇಶ್‌ ಶೆಟ್ಟಿ ಮತ್ತು ಬಳಗದವರಿಂದ ಭಕ್ತಿ ಸಂಗೀತ ಭಜನ ಕಾರ್ಯಕ್ರಮ ನಡೆಯಿತು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ, ಸಮಾಜ ಸೇವಕ, ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರು ಮಾತನಾಡಿ, ವಸಾಯಿ ಪರಿಸರದಲ್ಲಿ ಸಮಿತಿಯ ವರ್ಷದಿಂದ ವರ್ಷಕ್ಕೆ ಧಾರ್ಮಿಕವಾಗಿ ಹೆಚ್ಚು ಪ್ರಸಿದ್ಧಿ ಪಡೆಯಲು ಪರಿಸರದ ಭಕ್ತಾದಿಗಳ ಶ್ರದ್ಧಾಭಕ್ತಿಯೆ ಕಾರಣ
ವಾಗಿದೆ. ಧಾರ್ಮಿಕ ಚಿಂತನೆಯನ್ನು ಬೆಳೆಸು
ತ್ತಿರುವ ಸಮಿತಿಯ  ಈ ಕಾರ್ಯಕ್ರಮವು ಮುಂದೆ
ಇನ್ನಷ್ಟು ವಿಶೇಷವಾಗಿ ಮೂಡಿ ಬಂದು ಭಕ್ತಾದಿ
ಗಳಿಗೆ ಅಯ್ಯಪ್ಪ ಸ್ವಾಮಿಯ ಅನುಗ್ರಹ ಲಭಿಸುವಂ
ತಾಗಲಿ ಎಂದು ನುಡಿದು ಶುಭ ಹಾರೈಸಿದರು.

ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ, ಹಿಂದೆ ಬೆರಳೆಣಿಕೆಯ ಸ್ವಾಮಿಗಳಿಂದ ಕಂಡು ಬರುತ್ತಿದ್ದ ಈ ಧಾರ್ಮಿಕ ಉತ್ಸವವು ಇಂದು ನೂರಾರು ಸ್ವಾಮಿಗಳಿಂದ ಕಂಗೊಳಿಸುತ್ತಿದೆ. ಸಮಿತಿಯು 16 ವರ್ಷಗಳಿಂದ ಮಹಾಪೂಜೆಯನ್ನು ಆಚರಿಸುತ್ತಿರುವುದು ಅಭಿಮಾನ ಸಂಗತಿಯಾಗಿದೆ. ಪ್ರತೀ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದಿಂದ ವಸಾಯಿಯ ವಿಶಾಲ ಸಾಯಿನಗರ ಗ್ರೌಂಡ್‌ನ‌ಲ್ಲಿ ಆಚರಿಸುತ್ತಿದ್ದೇವೆ. ಪರಿಸರದ ಹೊಟೇಲ್‌ ಉದ್ಯಮಿಗಳ ಹಾಗೂ ಸಂಘ-ಸಂಸ್ಥೆಗಳ ಕೊಡುಗೆ ಈ ಕಾರ್ಯಕ್ರಮದಲ್ಲಿ ವಿಶೇಷತೆಯಾಗಿದೆ. ದೇವರ ಅನುಗ್ರಹ, ಆಶೀರ್ವಾದ ಭಕ್ತರ ಮೇಲೆ ಸದಾಯಿರಲಿ ಎಂದು ಆಶಿಸಿದರು.

ಮಹಾಪ್ರಸಾದ ವಿತರಣೆಯ ಆನಂತರ ವೇದಿಕೆಯ ಎರಡೂ ಭಾಗದಲ್ಲಿ ಅನ್ನಸಂತರ್ಪಣೆ ನಡೆಯಿತು. ಸಮಿತಿಯ ಉಪಾಧ್ಯಕ್ಷ ಎಕ್ಕಾರು ದಿನೇಶ್‌ ಹೆಗ್ಡೆ, ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಹೇಮಂತ್‌ ಪಾರೇಖ್‌, ಪೂಜಾ ಸಮಿತಿಯ ಸಲಹೆಗಾರ ಉಮೇಶ್‌ ಕೋಟ್ಯಾನ್‌ ಹಾಗೂ ಸಲಹೆಗಾರರು, ಕಾರ್ಯಕಾರಿ ಸಮಿತಿಯ ಸದಸ್ಯರು, ಪರಿಸರದ ದಾನಿಗಳು, ಭಕ್ತರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಉಮೇಶ್‌ ಕಾಂತಾವರ ಗುರುಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.

ಸ್ಥಳೀಯ ಸಮಾಜ ಸೇವಕ ನಾಗರಾಜ ಶೆಟ್ಟಿ, ಅಶೋಕ್‌ ಶೆಟ್ಟಿ, ದೇವೇಂದ್ರ ಬುನ್ನನ್‌ ಹಾಗೂ ಸ್ಥಳೀಯ ವಿವಿಧ ಸಂಘ-ಸಂಸೆœಗಳ ಪದಾಧಿಕಾರಿಗಳು, ಸದಸ್ಯ, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಮೋಹನ್‌ದಾಸ್‌ ಎಂ. ಡಿ. ಮತ್ತು ಚಂದ್ರಶೇಖರ ಬಂಗೇರ ಅವರು ದೇವರ ಮಂಟಪವನ್ನು ಅಲಂಕರಿಸಿದ್ದು, ಭಕ್ತಾದಿಗಳನ್ನು ಆಕರ್ಷಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.

ಪ್ರತೀ ವರ್ಷ ಜರಗುತ್ತಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ವಸಾಯಿ ಪರಿಸರದ ಭಕ್ತರ ಸಹಕಾರ, ಕೊಡುಗೆ ಅಪಾರವಾಗಿದೆ. ಹೊಟೇಲ್‌ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಸಂಘ -ಸಂಸ್ಥೆಗಳ ಸಹಕಾರವನ್ನು ಮರೆಯುವಂತಿಲ್ಲ. ಎಲ್ಲರ ಒಮ್ಮತದ ಕೊಡುಗೆಯಿಂದ ಈ ಧಾರ್ಮಿಕ ಕಾ ರ್ಯಕ್ರಮವು ಶ್ರೀ ಅಯ್ಯಪ್ಪ ಸ್ವಾಮಿ  ನೆಲೆಯಲ್ಲಿ ಸಂಭ್ರಮಿಸುವಂತಾಗಿದೆ. ಸಮಿತಿಯ ಗುರುಸ್ವಾಮಿಗಳ ಒಗ್ಗಟ್ಟು ಕೂಡಾ ಈ ಯಶಸ್ಸಿಗೆ ಕಾರಣವಾಗಿದೆ. ಭವಿಷ್ಯದಲ್ಲೂ ನಾವೆ ಲ್ಲರೂ ಒಂದಾಗಿ ಈ ಧಾರ್ಮಿಕ ಉತ್ಸವ ವನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿ ಸೋಣ. ಅದಕ್ಕಾಗಿ ಭಕ್ತಾದಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಯಶೋಧರ ವಿ. ಕೋಟ್ಯಾನ್‌ ಅಧ್ಯಕ್ಷ  ಶ್ರೀ ಮಣಿಕಂಠ ಸೇವಾಸಮಿತಿ ವಸಾಯಿ.

ಚಿತ್ರ-ವರದಿ: ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.