ಮುಂಬಯಿ ವಿವಿ ಕನ್ನಡ ವಿಭಾಗ: ಸಾಹಿತ್ಯ ಸಂವಾದ ಕಾರ್ಯಕ್ರಮ


Team Udayavani, Feb 16, 2018, 4:21 PM IST

1502mum05.jpg

ಮುಂಬಯಿ: ನೆಲದ ಜನಪದದಲ್ಲಿ ಶ್ರೇಷ್ಠತೆಯಿದೆ. ಇವತ್ತು ನಾವು ಪ್ರೀತಿ ಗೌರವ ವನ್ನು ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಬರೆಯು ತ್ತಿದ್ದೇವೆ, ಆದರೆ ಬದುಕುತ್ತಿಲ್ಲ. ಬಾಂಧವ್ಯಕ್ಕೆ ಗೋಡೆಯನ್ನು ಕಟ್ಟಿಕೊಳ್ತಾ ಇದ್ದೇವೆ. ಆ ಪ್ರೀತಿ ಕಟ್ಟುವ ಕ್ಷೇತ್ರ ಅಂದರೆ ಅದು ಸಾಹಿತ್ಯ ಕ್ಷೇತ್ರ ಮಾತ್ರ. ರಾಜಕೀಯ ಮನಸನ್ನು ಕೆಡಿಸುತ್ತದೆ ಆದರೆ ಸಂಗೀತ ಮನಸ್ಸನ್ನು ಕಟ್ಟುತ್ತದೆ. ನಾವು ನೈಜತೆಯ ಕಾಲವನ್ನು ಮರೆಯುತ್ತಿದ್ದೇವೆ. ತಾಂತ್ರಿಕತೆಯನ್ನು ಅಳವಡಿಸುತ್ತಿದ್ದೇವೆ. ಎದೆಯಿಂದ ಎದೆಗೆ ಬರುವುದು ಜಾನಪದ ಸಂಸ್ಕೃತಿ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ| ಅಪ್ಪಗೆರೆ ತಿಮ್ಮರಾಜು ಅವರು ನುಡಿದರು.

ಇತ್ತೀಚೆಗೆ ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಜಾನಪದ ಎದೆಯ ಸಂಸ್ಕೃತಿ,  ನಾವು ಇಂದು ಸಂಸ್ಕೃತಿಯನ್ನು ತಲೆಯಿಂದ ತಲೆಗೆ ದಾಟಿಸುತ್ತಿದ್ದೇವೆ. ಇದು ಕಿವಿಯಿಂದ ಎದೆಗೆ, ಎದೆಯಿಂದ ಎದೆಗೆ ಆದಿಕಾಲದ ಸಂಸ್ಕೃತಿ ಅನಂತಕಾಲದ ಸಂಸ್ಕೃತಿಯಾಗಬೇಕು. ಮೂಲ ನಂಬಿಕೆಗಳು ಬೇಕು. ಮೂಢನಂಬಿಕೆಗಳು ಬೇಡ. ಪ್ರೀತಿ-ಗೌರವವನ್ನು ಕಟ್ಟಿದವರು ಜನಪದರು ಎಂಬುದಾಗಿ ಅನೇಕ ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಅವುಗಳ ಮಹತ್ವವನ್ನು ಕುರಿತು ತಿಳಿ ಹೇಳಿದರು.

ಉಪಯೋಗ ಪಡೆಯಲು ಕರೆ 
ಕನ್ನಡ ಸಾಹಿತ್ಯ ಪರಿಷತ್ತಿನ ಸಂಯೋಜನಾ ಧಿಕಾರಿಯಾಗಿರುವ ಬಿ. ಎಸ್‌. ಪರಡ್ಡಿ ಅವರು ಮಾತನಾಡಿ, ಸರಕಾರದ ವಿವಿಧ ಕಾರ್ಯಕ್ರಮಗಳ, ಯೋಜನೆಗಳ ವಿವಿಧ ಹಂತಗಳು, ಸೌಲಭ್ಯಗಳ ಕುರಿತು ತಿಳಿಸಿದರು. ಹೊರನಾಡ ಕನ್ನಡಿಗರಿಗೆ ಲಭ್ಯವಿರುವ ಸವಲತ್ತುಗಳ ಬಗ್ಗೆ ತಿಳಿಸುತ್ತಾ ಅದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಘಟಕ, ಕುವೆಂಪು  ಅವರ ಅಭಿಮಾನಿ ಕುವೆಂಪು ಪ್ರಕಾಶ್‌  ಅವರು ಮಾತನಾಡಿ, ವಿದೇಶದಲ್ಲಿ ನಮ್ಮ ಸಂಸ್ಕೃತಿಗೆ  ಹೆಚ್ಚು ಬೇಡಿಕೆ ಇದೆ. ಕನ್ನಡಿಗರಿಗೆ, ಕಲಾಸಕ್ತರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡುವ ಕಾರ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರತನಾಗಿದ್ದೇನೆ. ನಮ್ಮ ಸಂಸ್ಕೃತಿಯನ್ನು ವಿದೇಶದ ನೆಲದಲ್ಲಿ ಬಿತ್ತರಿಸಿ ಅವರಿಗೆ ನಮ್ಮ ಸಾಹಿತ್ಯ, ಕಲೆಯ ಮೇಲೆ ಪ್ರೀತಿ ಮೂಡಿಸುವ ಕಾರ್ಯವನ್ನು ಮಾಡುವುದು ನಮ್ಮ ಉದ್ದೇಶ ಎಂದು ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ,  ಹೊರನಾಡಾದ ಮುಂಬಯಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗೆ ಮುಂಬಯಿ ಮಹತ್ವದ ಕಾಣಿಕೆಯನ್ನು ಕೊಟ್ಟಿದೆ. ಮುಂಬಯಿ ಒಂದು ಸಾಂಸ್ಕೃತಿಕ ನಗರ. ಇಲ್ಲಿನದು ನಗರ ಜಾನಪದ. ವಲಸೆ ಬಂದ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ. ಕನ್ನಡ ವಿಭಾಗ ಕಳೆದ ನಾಲ್ಕು ದಶಕಗಳಿಂದ ವಿಭಾಗದಲ್ಲಿ ಕನ್ನಡ ಪ್ರಸಾರ ಪ್ರಚಾರದಲ್ಲಿ ನಿರತವಾಗಿದೆ. ಡಾ| ಅಪ್ಪಗೆರೆ ತಿಮ್ಮರಾಜು ಅವರಂತಹ ಅಪ್ಪಟ ಕಲಾವಿದರು ಸಂಘಟಕರು ವಿಭಾಗದ ಮೇಲಿನ ಪ್ರೀತಿಯಿಂದ ವಿಭಾಗಕ್ಕೆ ಭೇಟಿ ನೀಡಿರುವುದು ಸಂತೋಷದ ಸಂಗತಿ ಎಂದು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಪರಿಚಾರಿಕೆಗೈದ ಮೇರಿ ಪಿಂಟೊ ಅವರನ್ನು ಡಾ| ಅಪ್ಪಗೆರೆ ತಿಮ್ಮರಾಜು ಅವರು ಸಮಸ್ತ ಕನ್ನಡಿಗರ ಪರವಾಗಿ ಗೌರವಿಸಿದರು. ವಿಭಾಗದ ಸಹಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 

ವಿಭಾಗದ ಸಂಶೋಧನ ಸಹಾಯಕರಾದ ಶಿವರಾಜ್‌ ಎಂ. ಜಿ, ನಳಿನಾ ಪ್ರಸಾದ್‌, ದಿನಕರ ನಂದಿ ಚಂದನ್‌, ಸುರೇಖಾ ಶೆಟ್ಟಿ, ಅಮೃತಾ ಶೆಟ್ಟಿ, ಸುಧೀರ್‌ ದೇವಾಡಿಗ, ಗಣಪತಿ ಮೊಗವೀರ, ಅನಿತಾ ಪೂಜಾರಿ, ಉದಯ ಶೆಟ್ಟಿ, ಲಕ್ಷಿ¾à ಪೂಜಾರಿ, ಜಯಕರ್‌ ಪಾಲನ್‌ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.