ಪುಣೆ ತುಳುಕೂಟ ಯುವ ವಿಭಾಗ: ಪರಿಸರ ದಿನಾಚರಣೆ, ಸೈಕಲ್ ರ್ಯಾಲಿ
Team Udayavani, Jun 20, 2018, 2:02 PM IST
ಪುಣೆ: ಪುಣೆ ತುಳು ಕೂಟದ ಯುವ ವಿಭಾಗದ ವತಿ ಯಿಂದ ಜೂ. 17ರಂದು ಅಪರಾಹ್ನ ಪರಿಸರ ದಿನಾಚರಣೆಯ ಅಂಗವಾಗಿ ಸಸ್ಯ ಬೆಳೆಸಿ ಪರಿಸರ ಉಳಿಸಿ ಎನ್ನುವ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೈಕಲ್ ರ್ಯಾಲಿಯನ್ನು ಆಯೋಜಿಸಲಾಯಿತು.
ನಗರದ ಜೆ. ಎಂ. ರೋಡ್ನಲ್ಲಿರುವ ಛತ್ರಪತಿ ಸಂಭಾಜಿ ಗಾರ್ಡನ್ನಿಂದ ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಅವರು ರ್ಯಾಲಿಗೆ ಚಾಲನೆ ನೀಡಿದರು. ಪರಿಸರ ಸಂರಕ್ಷಣೆ, ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ಮುಕ್ತ ಪುಣೆ ಇವುಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಟ್ರಾಫಿಕ್ ಪೊಲೀಸರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಸಾಥ್ ನೀಡಿದರು.
ಛತ್ರಪತಿ ಸಂಭಾಜಿ ಗಾರ್ಡನ್ನಿಂದ ಆರಂಭಗೊಂಡ ರ್ಯಾಲಿಯು ಫರ್ಗುಸನ್ ಕಾಲೇಜ್ ರೋಡ್ನಿಂದ ಯುನಿವರ್ಸಿಟಿ ಮಾರ್ಗವಾಗಿ ಜಂಗ್ಲಿ ಮಹಾರಾಜ್ ರೋಡ್ ಮೂಲಕ ಸಾಗಿತು. ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್ ಪಿ. ಶೆಟ್ಟಿ ಅವರ ನೇತೃತ್ವದಲ್ಲಿ ರ್ಯಾಲಿಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶ್ಯಾಮ್ ಸುವರ್ಣ, ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಪುರುಷೋತ್ತಮ್ ಶೆಟ್ಟಿ, ಸದಾಶಿವ್ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರೇಮಾ ಶೆಟ್ಟಿ, ದೇವಕಿ ಶೆಟ್ಟಿ, ಸವಿತಾ ಶೆಟ್ಟಿ, ನೂತನ್ ಸುವರ್ಣ, ವಿನಯಾ ಪೂಜಾರಿ, ಪ್ರಕಾಶ್ ಪೂಜಾರಿ, ಯುವ ವಿಭಾಗದ ಅಭಿಜಿತ್ ಶೆಟ್ಟಿ, ಸುಮಿತ್ ಶೆಟ್ಟಿ, ಭಾಗೆÂಷ್ ಶೆಟ್ಟಿ, ಆಕಾಶ್ ಶೆಟ್ಟಿ, ಪ್ರತೀಕ್ ಶೆಟ್ಟಿ, ಸುಜಯ್ ಶೆಟ್ಟಿ, ವಿನೀತ್ ಪೂಜಾರಿ, ರತನ್ ಸಾಲ್ಯಾನ್, ರಾಜೇಂದ್ರ ಕೋಟ್ಯಾನ್, ರವಿರಾಜ್ ಶೆಟ್ಟಿ, ಮಹೇಶ್ ನಾಯ್ಕ, ನಿತಿನ್ ಶೆಟ್ಟಿ, ಶ್ರುತಿ ಶೆಟ್ಟಿ, ಪೂಜಾ ಶೆಟ್ಟಿ, ದಿಶಾ ಶೆಟ್ಟಿ, ದೀûಾ ಶೆಟ್ಟಿ, ಮಲ್ಲಿಕಾ ಕುಲಾಲ್, ಸರಿತಾ ಶೆಟ್ಟಿ, ಅಪೂರ್ವಾ ಶೆಟ್ಟಿ, ಸುಶೀಲ್ ಶೆಟ್ಟಿ, ಸುಚೇತ್ ಶೆಟ್ಟಿ, ಪ್ರಾಣೇಶ್ ಶೆಟ್ಟಿ ಮತ್ತು ಆಕಾಶ್ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ