ಯೋಧನಿಗೆ ಬೀಳ್ಕೊಡುಗೆ
Team Udayavani, Dec 30, 2017, 4:42 PM IST
ಬೆಳ್ತಂಗಡಿ: ದೇಶ ಕಾಯಲು ಅಸ್ಸಾಂಗೆ ಹೊರಟ ಯೋಧನಿಗೆ ಇಂದಬೆಟ್ಟಿನ ಯುವಕರು ಸ್ಫೂರ್ತಿ ತುಂಬಿ ಆತ್ಮೀಯವಾಗಿ ಬೀಳ್ಕೊಟ್ಟರು.ಕಲ್ಲಾಜೆ ಇಂದಬೆಟ್ಟು ನವಭಾರತ ಗೆಳೆಯರ ಬಳಗದ ಸದಸ್ಯ ಯತೀಶ್ ಅವರು ದೇಶ ರಕ್ಷಣೆಗಾಗಿ, ಭಾರತದ ಸೇನೆಗೆ ಸೇರ್ಪಡೆಯಾಗಿದ್ದಾರೆ. ಕಲ್ಲಾಜೆ ಇಂದಬೆಟ್ಟು ನವಭಾರತ ಗೆಳೆಯರ ಬಳಗ ದೇಶದ ಸೇವೆಗೆ ಹೊರಟಿರುವ ತಮ್ಮ ಸೆ„ನಿಕ ನಿಗೆ ಶುಭ ಹಾರೈಸಿದ್ದಾರೆ.
ಗಡಿ ರಕ್ಷಣೆಗಾಗಿ ತೆರಳುವ ಯೋಧನಿಗೆ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಅಭಿನಂದನೆ ಸಲ್ಲಿಸಿದರು. ನವಭಾರತ್ ಗೆಳೆಯರ ಬಳಗ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಸಂದೀಪ್ ಆಳಕ್ಕೆ, ಹಿರಿಯರಾದ ವಸಂತ ಗೌಡ ಕಲ್ಲಾಜೆ, ಆನಂದ ಅಡೀಲು, ರಮೇಶ್ ಕಿಂಡಾಜೆ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು