ಕೋಮುವಾದಿಗಳಲ್ಲ , ರಾಮವಾದಿಗಳು: ಕರಿಂಜೆ ಶ್ರೀ


Team Udayavani, Jan 10, 2018, 11:18 AM IST

10-19.jpg

ಬೆಳ್ತಂಗಡಿ: ಶಾಂತಿ, ಸಾಮರಸ್ಯದ ಮೂಲಕ ಸರ್ವಧರ್ಮೀಯರಿಗೆ ಬದುಕುವ ಅವಕಾಶ ಕಲ್ಪಿಸಿದ್ದು ಹಿಂದೂ ಧರ್ಮ. ಇದರ ಮೇಲೆ ದಬ್ಟಾಳಿಕೆ, ದಾಳಿ ನಡೆದರೆ ವಿಹಿಂಪ, ಬಜರಂಗ ದಳ ಸೂಕ್ತ ಉತ್ತರ ನೀಡಲಿವೆ. ನಾವು ಕೋಮುವಾದಿಗಳಲ್ಲ, ರಾಮವಾದಿಗಳು ಎಂದು ಮೂಡಬಿದಿರೆ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

ಮಂಗಳವಾರ ಗುರುವಾಯನಕೆರೆಯ ಪಿಲಿ ಚಾಮುಂಡಿಕಲ್ಲಿನಲ್ಲಿ ಬೆಳ್ತಂಗಡಿಯಿಂದ ಆಗಮಿಸಿದ ಪಾದಯಾತ್ರೆಯ ಸಮಾರೋಪ, ಸಾಮೂಹಿಕ ಪ್ರಾರ್ಥನೆ ಬಳಿಕ ಅವರು ಮಾತನಾಡಿದರು. ಮತೀಯ ಭಾವನೆಯನ್ನು ಕೆರಳಿಸುವುದು ಅಲ್ಪ ಸಂಖ್ಯಾಕರೇ ವಿನಾ ಹಿಂದೂಗಳಲ್ಲ. ಲವ್‌ ಜೆಹಾದ್‌, ಮತಾಂತರ, ಗೋಹತ್ಯೆ ಮಾಡುವ ಮಹಿಷಾ ಸುರನ ಸಂತತಿ ನಾಶವಾಗಲೇ ಬೇಕು. ಅದಕ್ಕೆ ಮಾತೆಯರು ದುರ್ಗೆಯರಾಗಬೇಕು ಎಂದು ಅವರು ಕರೆ ನೀಡಿದರು.

ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್‌ ಶೇಣವ ಮಾತ ನಾಡಿ, ದೇಶದ ಜನಸಂಖ್ಯೆಯಲ್ಲಿ ಶೇ.85 ಇರುವ ಹಿಂದೂಗಳು ಶೇ.14ರಷ್ಟಿರುವ ಇತರರ ವಿರುದ್ಧ ಹೋರಾಡಬೇಕಾಗಿ ಬಂದುದೇ ದುರ್ದೈವ. ನಾವು ಕೋಮುವಾದಿಗಳಲ್ಲ, ಸರ್ವಧರ್ಮ ಸಹಿಷ್ಣುಗಳು. ಆದರೆ ನಮ್ಮನ್ನು ಕೆಣಕಿದರೆ ಉತ್ತರ ಕೊಡಲೇಬೇಕಾಗುತ್ತದೆ ಎಂದರು.

ಬಜರಂಗ ದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌ ಮಾತನಾಡಿ, ಜೆಹಾದಿಗಳಿಗೆ ತಕ್ಕ ಉತ್ತರ ನೀಡಬೇಕು. ಹಿಂದೂ ಸಮಾಜ ಕೈಕಟ್ಟಿ ಕೂರಬಾರದು. ದೌರ್ಜನ್ಯದ ಮೂಲಕ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಬೇಡ ಎಂದರು. ಕ್ಷೇತ್ರ ಸಂರಕ್ಷಣ ಸಮಿತಿ ಕೋಶಾಧಿಕಾರಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ ವಿಷಯ ಪ್ರಸ್ತಾವನೆ ನಡೆಸಿ, ಇದೇ ರೀತಿ ಗಡಾಯಿಕಲ್ಲಿನ ನರಸಿಂಹ ಗಢದ ರಕ್ಷಣೆಗೂ ನಾವು ಸಿದ್ಧರಿದ್ದೇವೆ ಎಂದರು.

ಕಾಪಿನಡ್ಕ ವಸಂತ ಸಾಲಿಯಾನ್‌ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ಗೋರಕ್ಷಾ ಪ್ರಮುಖ್‌ ಮುರಳಿಕೃಷ್ಣ ಹಸಂತ್ತಡ್ಕ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯವಾಹೆ ವೇದಾವತಿ, ದೊಂಪದಬಲಿ ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ್‌, ಪಾಡ್ಯಾರುಬೀಡಿನ ಪ್ರವೀಣ್‌ ಕುಮಾರ್‌, ಅರಮಲೆಬೆಟ್ಟದ ಸುಕೇಶ್‌ ಕುಮಾರ್‌ ಜೈನ್‌ ಉಪಸ್ಥಿತರಿದ್ದರು. ಬಜರಂಗ ದಳ ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಸ್ವಾಗತಿಸಿದರು. ಸಮಿತಿಯ ಕಾರ್ಯ ದರ್ಶಿ, ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್‌ ವಂದಿಸಿದರು. ಉಮೇಶ್‌ ನಡ್ತಿಕಲ್ಲು ನಿರ್ವಹಿಸಿದರು.

ಬೇಲಿ ತೆರವು
ಪಿಲಿಚಾಮುಂಡಿಕಲ್ಲು ಎಂಬಲ್ಲಿ ದೊಂಪದಬಲಿ ನಡೆದ ಬಳಿಕ ಕಲ್ಲಿನ ಮೇಲೆ ತ್ಯಾಜ್ಯ ಇರಿಸಿ ಅಪವಿತ್ರ ಗೊಳಿಸಲಾಗಿತ್ತು. ರಕ್ಷಣೆಗೆ ಹಾಕಿದ ಬೇಲಿಯನ್ನು ಸ್ಥಳೀಯ ಸಮುದಾಯದವರ ಮನವಿಯ ಮೇರೆಗೆ ತಾಲೂಕು ಆಡಳಿತ ತೆರವು ಮಾಡಿತ್ತು. ಇದನ್ನು ಪ್ರತಿಭಟಿಸಿ ತಾಲೂಕು ಕಚೇರಿ ಬಳಿ 8 ದಿನ ಸರಣಿ ಧರಣಿ ನಡೆಸಲಾಗಿತ್ತು. 

ಪೊಲೀಸ್‌ ಭದ್ರತೆ
ವಿಶೇಷ ಬಂದೋಬಸ್ತ್ ಮಾಡಲಾಗಿತ್ತು. ಎಎಸ್‌ಪಿ 1, ಡಿವೈಎಸ್‌ಪಿ 1, ಸಿಪಿಐ 2, ಪಿಎಸ್‌ಐ 8, ಎ.ಎಸ್‌.ಐ 12, ಎಚ್‌ಸಿ/ಪಿಸಿ 112, ಹೋಂಗಾರ್ಡ್‌ 43 ಹಾಗೂ ಕೆ.ಎಸ್‌.ಆರ್‌.ಪಿ. 3 ತುಕಡಿ ನಿಯೋಜಿಸಲಾಗಿತ್ತು.

ಪಿಲಿಚಾಮುಂಡಿಕಲ್ಲಿಗೆ ಪಾದಯಾತ್ರೆ
ವಿ.ಹಿಂ.ಪ., ಬಜರಂಗ ದಳ, ಕ್ಷೇತ್ರ ಸಂರಕ್ಷಣಾ ಸಮಿತಿಯ ಮೂಲಕ ನಡೆದ ಪಾದಯಾತ್ರೆಗೆ ಹಿರಿಯ ನ್ಯಾಯವಾದಿ ಪ್ರತಾಪಸಿಂಹ ನಾಯಕ್‌ ಅವರು ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಅವರಿಗೆ ಭಗವಾಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು. ಬಿಜೆಪಿ ತಾ| ಅಧ್ಯಕ್ಷ ರಂಜನ್‌ ಗೌಡ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿಯ ವಿವಿಧ ಜನಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಚೆಂಡೆ, ನಾಸಿಕ್‌ ಬ್ಯಾಂಡ್‌ ಮೆರವಣಿಗೆಗೆ ಕಳೆ ನೀಡಿತು.

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Heart Attack; ಬೈಕ್‌ ಓಡಿಸುತ್ತಿರುವಾಗಲೇ ಹೃದಯಾಘಾತ; ಸಾವು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Puttur ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅಮಾನತು

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

Belthangady ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದೇಗುಲದ ಅರ್ಚಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.