ನಾರಾವಿಯಲ್ಲಿ  ಜರ್ಮನ್‌ ಮಾದರಿ ಬಸ್‌ ನಿಲ್ದಾಣ


Team Udayavani, Jan 22, 2018, 11:15 AM IST

22-19.jpg

ಬೆಳ್ತಂಗಡಿ: ತಾಲೂಕಿನ ನಾರಾವಿಯಲ್ಲಿ  ಜರ್ಮನ್‌ ಮಾದರಿಯ ಸರ್ವಸೌಲಭ್ಯಗಳುಳ್ಳ ಬಸ್‌ ನಿಲ್ದಾಣ ರವಿವಾರ ಲೋಕಾರ್ಪಣೆಯಾಗಿದ್ದು, ಇಂತಹ ಅತ್ಯಾಧುನಿಕ ಬಸ್‌ನಿಲ್ದಾಣ ಪ್ರಾಯಃ ರಾಜ್ಯದಲ್ಲಿಯೇ ಮೊತ್ತ ಮೊದಲನೆಯದು. ನಾರಾವಿಯ ರಾಮೆರೆಗುತ್ತು ಕುಟುಂಬದ ನಿರಂಜನ ಅಜ್ರಿ ಅವರು ತನ್ನ ತಂದೆ ಎನ್‌. ಮಂಜಪ್ಪ ಅತಿಕಾರಿ ಹಾಗೂ ತಾಯಿ ಬಿ. ಮಿತ್ರಾವತಿ ಅವರ ನೆನಪಿನಲ್ಲಿ 12 ಲಕ್ಷ  ರೂ. ವೆಚ್ಚದಲ್ಲಿ ಈ ತಂಗುದಾಣವನ್ನು ನಿರ್ಮಿಸಿದ್ದಾರೆ. 

ವಿದೇಶಗಳಲ್ಲಿ ಕಾಣಸಿಗುವ ಬಸ್‌ ನಿಲ್ದಾಣಗಳಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ಇದರ ವೈಶಿಷ್ಟ é. ಸಾಮಾನ್ಯವಾಗಿ ಬಸ್‌ ತಂಗುದಾಣ ಎಂದರೆ ಕಸದ ರಾಶಿ, ಕೊಳೆತ ವಾಸನೆ, ಗಲೀಜು, ಅಲ್ಲಲ್ಲಿ ಅಂಟಿಸಿ ಹರಿದ ಭಿತ್ತಿಪತ್ರಗಳು, ಭಗ್ನ ವಿರಹಿಗಳ ಪ್ರೇಮವಾಕ್ಯದ ಸಾಲುಗಳು ಎಂದು ಅಂದುಕೊಂಡವರನ್ನು ನಾಚಿಸುವಂತಹ ತಂಗುದಾಣ ಇದು.

ಏನೆಲ್ಲ  ಇವೆ ಇಲ್ಲಿ ?
ಕುಡಿಯಲು ಶುದ್ಧ ತಂಪು ಹಾಗೂ ಬಿಸಿ ನೀರು, ಸಿಸಿಟಿವಿ ವ್ಯವಸ್ಥೆ, ಸೋಲಾರ್‌ ಬೆಳಕು, ರಾಜ್ಯದ ಮ್ಯಾಪ್‌, ಈ ದಾರಿಯಲ್ಲಿ ಹಾದು ಹೋಗುವ ಬಸ್‌ಗಳ ವೇಳಾಪಟ್ಟಿ, ದಣಿವಾರಿಸಿಕೊಳ್ಳಲು ಫ್ಯಾನ್‌, ಸುದ್ದಿ ಮಾಹಿತಿ ಹಾಗೂ ಪದ್ಯಗಳನ್ನು ಆಲಿಸಲು ಎಫ್‌ಎಂ ರೇಡಿಯೋ, ನೋಟಿಸ್‌ ಬೋರ್ಡ್‌, ಸಮಯ ತಿಳಿದುಕೊಳ್ಳಲು ಗಡಿಯಾರ, ಎಲ್‌ಇಡಿ ಬೋರ್ಡ್‌, ಕಸದ ಬುಟ್ಟಿ ಇಲ್ಲಿವೆ.

ವಿಶಿಷ್ಟ  ವಿನ್ಯಾಸ
ದೂರದಿಂದ ನೋಡುವಾಗ ಬಡಗು ತಿಟ್ಟು ಯಕ್ಷಗಾನದ ಕೇದಗೆ ಮುಂದಲೆಯನ್ನು ಹೋಲುವ ನಿಲ್ದಾಣ ಅಶ್ವತ್ಥ ಎಲೆ ಆಕಾರದ ಛಾವಣಿಯನ್ನು ಹೊಂದಿದೆ. ಛಾವಣಿಗೆ ವಿದೇಶದಿಂದ ತರಿಸಲಾದ ದೀರ್ಘ‌ ಬಾಳಿಕೆಯ ಶೀಟ್‌ ಅಳವಡಿಸಲಾಗಿದೆ. ಅದರ ಕೆಳಗೆ ಸಿಮೆಂಟ್‌ ಶೀಟ್‌, ಅದಕ್ಕೂ ಕೆಳಗೆ ಫೈಬರ್‌ ಶೀಟ್‌ ಅಳವಡಿಸಲಾಗಿದೆ. 5,000 ಚದರ ಅಡಿಗೆ ಇಂಟರ್‌ಲಾಕ್‌ ಹಾಕಲಾಗಿದೆ. 15×15 ಅಳತೆಯ ಈ ತಂಗುದಾಣದ ಪಕ್ಕದಲ್ಲಿ ಮನ ಹಸಿರಾಗಿಸಲು ಪುಟ್ಟ ಉದ್ಯಾನವನವೂ ಇದೆ. ಇಡೀ ತಂಗುದಾಣ ಎರಡೇ ಕಂಬ ಗಳ ಆಧಾರದಲ್ಲಿ ರಚನೆಯಾಗಿದೆ.

ಪ್ರೇರಣೆ
ಇಷ್ಟೊಂದು ವೆಚ್ಚದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಈ ಪುಟ್ಟ ಊರಿನಲ್ಲಿ ದೊಡ್ಡ ಮಾದರಿಯ ಬಸ್‌ ನಿಲ್ದಾಣ ರಚನೆಗೆ ಕಾರಣವೇನೆಂದು ನಿರಂಜನ ಅಜ್ರಿ ಅವರನ್ನು “ಉದಯವಾಣಿ’ ಕೇಳಿದಾಗ, ತಮ್ಮ ಪುತ್ರಿ ಪ್ರತೀಕ್ಷಾ, ಅಳಿಯ  ಸಮ್ಮೇದ್‌ ಜರ್ಮನಿ ಯಲ್ಲಿ ದ್ದಾರೆ. ಅವರ ಮನೆಗೆ ಹಾಗೂ ಇನ್ನೂ ಐದಾರು ದೇಶಗಳನ್ನು ಸುತ್ತಾಡಲು ಹೋದಾಗ ಅಲ್ಲಿನ ಸಕಲ ಸೌಲಭ್ಯಗಳಿರುವ ಬಸ್‌ತಂಗುದಾಣ ಕಂಡು ಆಕರ್ಷಿತನಾದೆ. ನಮ್ಮ ಊರಿನಲ್ಲೂ ನನ್ನ ತಂದೆ ತಾಯಿಯ ಹೆಸರಿನಲ್ಲಿ ಇಂತಹ ಶಾಶ್ವತ ನಿರ್ಮಾಣ ಆಗಬೇಕು ಎಂದು ನಿಶ್ಚಯಿಸಿ ಪಂಚಾಯತ್‌ ಅನುಮತಿ ಕೇಳಿದೆ. ನಾರಾವಿ ಚರ್ಚ್‌ಗೆ ಹೋಗುವ ದಾರಿಯಲ್ಲಿ ಒಂದು ಬದಿ ಮಾತ್ರ ತಂಗುದಾಣ ಇದ್ದು, ಮತ್ತೂಂದು ಬದಿ ಶಾಲೆಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿತ್ತು. ಆದ್ದರಿಂದ ಇದೇ ಜಾಗ ಸೂಕ್ತವೆಂದು ತೀರ್ಮಾ ನಿಸಿದೆವು. ಪಕ್ಕದಲ್ಲಿಯೇ ನನ್ನ ಸಹೋ ದರನ ಅಂಗಡಿ ಇರುವ ಕಾರಣ ನಿರ್ವಹಣೆ ಸುಲಭವಾಗಲಿದೆ. ನಮ್ಮ ಮನೆಯ ಬಾವಿಯಿಂದ ನೀರು ಒದ ಗಿಸು ತ್ತಿದ್ದೇವೆ. ಈಗಲೇ ದಿನಕ್ಕೆ 1,000 ಲೀ. ನೀರು ಖರ್ಚಾಗುತ್ತಿದೆ. ಎಸ್‌ಕೆಎಫ್‌ನವರ ಕುಡಿಯುವ ನೀರಿನ ಫಿಲ್ಟರ್‌ ಅಳವಡಿಸಿದ ಕಾರಣ ಮಕ್ಕಳು, ಪ್ರಯಾಣಿಕರು ಬಾಟಲಿಯಲ್ಲಿ ತುಂಬಿಸಿ ಕೊಂಡೊಯ್ಯುತ್ತಿದ್ದಾರೆ. ತಂದೆ ತಾಯಿಯ ಫೋಟೋವನ್ನು ಗ್ರಾನೈಟ್‌ನಲ್ಲಿ ಹಾಕಿದ್ದು, ಇತರ ಮಾಹಿತಿ ಫಲಕ, ನಕಾಶೆಯನ್ನು ಹಾಳು ಮಾಡದಂತೆ ಗಾಜಿನ ಫ್ರೇಮ್‌ ಅಳವಡಿಸಲಾಗಿದೆ ಎಂದರು.

ನಗರಗಳ ಬೃಹತ್‌ ಬಸ್‌ ನಿಲ್ದಾಣಗಳಲ್ಲಿ ಇಂತಹ ಸರ್ವ ಸೌಲಭ್ಯಗಳು ಇರುತ್ತವಾದರೂ ಸಣ್ಣ ಊರಿನಲ್ಲಿ ಇಂತಹ ಸೌಲಭ್ಯಗಳಿರುವ ಅತ್ಯಾಧುನಿಕ ಬಸ್‌ ತಂಗುದಾಣ ಬಹುಶಃ ರಾಜ್ಯದಲ್ಲಿ ಬೇರೆಡೆ ಇಲ್ಲ. ರವಿವಾರ ನಡೆದ ಉದ್ಘಾಟನ ಕಾರ್ಯ ಕ್ರಮದಲ್ಲಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್‌, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಮೊದ ಲಾದವ ರಿದ್ದರು. 25 ವರ್ಷಗಳಿಂದ ಈ ಮಾರ್ಗ ದಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಚಾಲಕರನ್ನು ಸಮ್ಮಾನಿಸಲಾಯಿತು.

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.