ಶಿರಾಡಿ ಕಾಂಕ್ರೀಟ್ ರಸ್ತೆ ಇಂದು ಉದ್ಘಾಟನೆ
Team Udayavani, Jul 15, 2018, 6:00 AM IST
ಪುತ್ತೂರು/ ಉಪ್ಪಿನಂಗಡಿ: ಕರಾವಳಿಯನ್ನು ರಾಜ್ಯ ರಾಜಧಾನಿಯ ಜತೆಗೆ ಬೆಸೆಯುವ ಸಂಪರ್ಕ ಸೇತು ಶಿರಾಡಿ ಘಾಟಿಯ ಹೊಸ ಕಾಂಕ್ರೀಟ್ ರಸ್ತೆ ರವಿವಾರ ಉದ್ಘಾಟನೆಗೊಳ್ಳಲಿದೆ.
ಕಾಮಗಾರಿ ಸಂಬಂಧ 6 ತಿಂಗಳಿಂದ ಈ ರಸ್ತೆ ಮುಚ್ಚಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದ್ದು, ತಡೆಗೋಡೆ ಹಾಗೂ ರಸ್ತೆ ಅಂಚಿಗೆ ಮಣ್ಣು ಹಾಕುವ ಒಂದಷ್ಟು ಕೆಲಸ ಬಾಕಿ ಇದೆ. ಉದ್ಘಾಟನೆ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಗೋಪಾಲ ನಾಯ್ಕ, ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುಂಡ್ಯ ಪೇಟೆಗೆ ಜೀವಕಳೆ
ಘಾಟಿ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳುತ್ತಿರುವುದರಿಂದ ಗುಂಡ್ಯ ಪೇಟೆಯಲ್ಲಿ ಮತ್ತೆ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳಲಿವೆ. ಈ ಮೂಲಕ ಗುಂಡ್ಯ ಪೇಟೆ ಮತ್ತೆ ಜೀವಕಳೆ ಪಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು