ಕನಕಪುರ : ಮರಳು ದಂಧೆಕೋರರಿಂದ ತಹಶೀಲ್ದಾರ್ ಹತ್ಯೆಗೆ ಯತ್ನ
Team Udayavani, Mar 1, 2017, 11:03 AM IST
ಕನಕಪುರ : ಇಲ್ಲಿನ ತಟ್ಟೆಕೆರೆ ಗ್ರಾಮದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ತಹಶೀಲ್ದಾರ್ ಒಬ್ಬರನ್ನು ಹತ್ಯೆಗೈಯಲು ಯತ್ನಿಸಿ ಅಟ್ಟಹಾಸ ಮೆರೆದಿರುವ ಬಗ್ಗೆ ವರದಿಯಾಗಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕನಕಪುರ ತಹಶೀಲ್ದಾರ್ ಯೋಗಾನಂದ ಅವರು ಇನ್ನೋರ್ವ ಸಿಬಂದಿಯ ಜೊತೆ ಖಚಿತ ಮಾಹಿತಿಯ ಮೇಲೆ ಬುಧವಾರ ಬೆಳಗಿನ ಜಾವ 4.30 ರ ವೇಳೆಗೆ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದಾಗ ಹತ್ಯೆಗೈಯಲು ಯತ್ನಿಸಲಾಗಿದೆ.
ಯೋಗಾನಂದ್ ಅವರಿದ್ದ ಕಾರಿನ ಮೇಲೆ ಮರಳು ಅಡ್ಡೆಯ ಜೆಸಿಬಿ ಯಂತ್ರವನ್ನು ಗುದ್ದಲಾಗಿದ್ದು, ಈ ವೇಳೆ ಕಾರಿನಿಂದ ಇಬ್ಬರೂ ಜಿಗಿದ ಪರಿಣಾಮ ಬಚಾವ್ ಆಗಿದ್ದಾರೆ. ಕಾರಿನಿಂದ ಕೆಳ ಬಿದ್ದ ಕೂಡಲೆ ಪ್ರಾಣ ರಕ್ಷಣೆಗೆ ಯೋಗಾನಂದ್ ಅವರೊಂದಿಗಿದ್ದ ಸಿಬಂದಿ ಜೆಸಿಬಿ ಚಾಲಕನ ಮೇಲೆ ಕಲ್ಲು ತೂರಿದ್ದು, ಈ ವೇಳೆ ಆತ ಜೆಸಿಬಿಯಿಂದ ಇಳಿದು ಪರಾರಿಯಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.
ಹಾರೋಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ