ಏನಯ್ಯಾ ನಿನಗೆ ಮದ್ವೆ ಆಗಿಲ್ವಾ? ಪ್ರಚಾರದ ವೇಳೆ ಸಿಎಂ ಹಾಸ್ಯ
Team Udayavani, Mar 31, 2017, 2:10 PM IST
ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ನಂಜನಗೂಡು ಕ್ಷೇತ್ರದಲ್ಲಿ ಬಿರುಸಿನ ಉಪಚುನಾವಣಾ ಪ್ರಚಾರ ನಡೆಸಿದರು.
ರೋಡ್ಶೋ ನಡೆಸುತ್ತಿದ್ದ ವೇಳೆ ಗೋಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಅವರನ್ನು ಹಾಡಿ ಹೊಗಳಿದರು. ನಮ್ಮ ಅಭ್ಯರ್ಥಿ ಸ್ಥಳೀಯ, ಕ್ಷೇತ್ರದ ಸಂಪೂರ್ಣ ಪರಿಚಯ ಉಳ್ಳ ವ್ಯಕ್ತಿ.. ಹೀಗೆ ಹೊಗಳುವಾಗ ಎದುರಿಗಿದ್ದ ಕಾರ್ಯಕರ್ತ ಅವರಿಗೆ ಮದ್ವೆ ಆಗಿಲ್ಲಾ ಸಾರ್ ಎಂದ.
ಕೂಡಲೇ ಮುಗುಳ್ನಕ್ಕ ಸಿಎಂ ಹೌದೇನಯ್ಯಾ..ನಿನಗೆ ಮದ್ವೆ ಆಗಿಲ್ವಾ .. ಎಂದು ಪ್ರಶ್ನಿಸಿದರು. ಇದಕ್ಕೆ ಕೇಶವಮೂರ್ತಿ ತಲೆ ಅಲ್ಲಾಡಿಸಿದರು. ಒಮ್ಮೆಲೆ ಎಲ್ಲರೂ ನಕ್ಕರು.
ನೋಡಿ ನಮ್ಮ ಅಭ್ಯರ್ಥಿಗೆ ಹೆಂಡತಿ ಮಕ್ಕಳಿಗೆ ಹಣ ಮಾಡುವ ಉದ್ದೇಶ ವಿಲ್ಲ. ಇದಕಿಂತ ಒಳ್ಳೆಯ ಅಭ್ಯರ್ಥಿ ನಿಮಗೆ ಸಿಗುವುದಿಲ್ಲ ಎಂದರು.
ಸಿಎಂ ನಂಜನೂಡು ಕೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.