ಮನಸ್ಸಿಂದಲೂ ಸಿದ್ದರಾಮಯ್ಯ ಹಿಂದೂವಾಗಲಿ: ಸಿ.ಟಿ.ರವಿ
Team Udayavani, Jul 17, 2017, 3:50 AM IST
ಚಿಕ್ಕಮಗಳೂರು: ಕೇವಲ ಹೆಸರಿನಿಂದ ಹಿಂದೂ ಆಗಿದ್ದರೆ ಉಪಯೋಗವಿಲ್ಲ. ಮನಸ್ಸಿನಿಂದಲೇ ಹಿಂದೂ ಆಗಬೇಕು
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಂಡಿತವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮತಃ ಹಿಂದೂ ಆಗಿದ್ದಾರೆ. ಅವರ ತಂದೆ, ತಾಯಿಗೆ ದೇವರ ಮೇಲೆ ನಂಬಿಕೆ ಇದ್ದುದರಿಂದಲೇ ಅವರ ಹೆಸರನ್ನು ಸಿದ್ದರಾಮ ಎಂದು ಇಟ್ಟಿದ್ದಾರೆ. ಅವರ ದೇಹ ಹಿಂದೂವೇ ಆದರೂ ಮನಸ್ಸು ಹಿಂದೂ ವಿಚಾರವನ್ನು ಅಳವಡಿಸಿಕೊಂಡಿಲ್ಲ ಎಂದರು. ಹಿಂದೂ ಎಂದರೆ ಸರ್ವಧರ್ಮವನ್ನು ಒಪ್ಪುವವರು. ಆದರೆ ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ತಾರತಮ್ಯ ಮಾಡಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದ್ದಾರೆ. ಮನಸ್ಸು ಮಲೀನವಾದರೆ ಅರ್ಥವಿಲ್ಲ ಎಂದು ಹೇಳಿದರು.
ಚುನಾವಣೆ ಸಮೀಪಿಸಿದಾಗ ಜ್ಞಾನೋದಯ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಸಮೀಪ ಬಂದಾಗ ಜ್ಞಾನೋದಯವಾಗಿ “ನಾನು ಹಿಂದೂ’ ಎನ್ನುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಲೇವಡಿ ಮಾಡಿದರು. ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಅವರು ನಾನು ಅಹಿಂದ ಪರ ಎನ್ನುತ್ತಿದ್ದರು. ಆದರೂ ಅವರಿಗೆ ಏನನ್ನೂ ಮಾಡಲಿಲ್ಲ. ಒಂದು ಜಾತಿ ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಮೂಲಕ ಮತ ಬ್ಯಾಂಕ್ ಮಾಡುತ್ತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಬಸವಣ್ಣ, ಅಕ್ಕಮಹಾದೇವಿ ನೆನಪಾಗುತ್ತಿದ್ದಾರೆ.
ಹಿಂದೂಗಳ ಮತಗಳು ಕೈತಪ್ಪುತ್ತವೆ ಎಂಬ ಆತಂಕದಲ್ಲಿ ಈಗ ಅವರಿಗೆ ಮೊದಲ ಬಾರಿಗೆ ನಾನು ಹಿಂದೂ ಎಂದು
ಅನಿಸುತ್ತಿದೆ ಎಂದು ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ