ಬಿಎಸ್ವೈ-ನಾನು ರಾಮ ಲಕ್ಷ್ಮಣರಿದ್ದಂತೆ: ಈಶ್ವರಪ್ಪ
Team Udayavani, Aug 17, 2017, 6:20 AM IST
ಕಾರವಾರ: ಯಡಿಯೂರಪ್ಪ ಮತ್ತು ನಾನು ರಾಮ-ಲಕ್ಷ್ಮಣ ಇದ್ದ ಹಾಗೆ’ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಈಶ್ವರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮಿಬ್ಬರ ಸಂಬಂಧ ಗಟ್ಟಿಯಾಗಿದೆ’ ಎಂದರು. ರಾಜ್ಯ ಉಸ್ತುವಾರಿ ಮುರುಳೀಧರ ರಾವ್ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. 150 ಮಿಷನ್ ಚಾಲ್ತಿಯಲ್ಲಿದೆ. ಅಮಿತ್ ಶಾ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸ ನಡೆದಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜನರ ಸಂಪರ್ಕ ಇಟ್ಟುಕೊಂಡು ನಾಯಕರಿಗಾಗಿ ಪಕ್ಷ ಹುಡುಕಾಡುತ್ತಿದೆ ಎಂದರು