ಶಶಿಕಲಾಗೆ ಕೊನೆಗೂ ಪೆರೋಲ್‌ ಮಂಜೂರು


Team Udayavani, Oct 7, 2017, 10:19 AM IST

07-20.jpg

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಕಳೆದ 9 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ಗೆ ಕೊನೆಗೂ ಜೈಲಿನ ಅಧಿಕಾರಿಗಳು ಷರತ್ತುಬದ್ಧ ಐದು ದಿನಗಳ ಕಾಲ ಪೆರೋಲ್‌ಗೆ ಅನುಮತಿ ನೀಡಿದ್ದಾರೆ.

ಈ ಮೊದಲು ದಾಖಲಾತಿ ಕೊರತೆ ಹಿನ್ನೆಲೆಯಲ್ಲಿ ಪೆರೋಲ್‌ ಅರ್ಜಿ ತಿರಸ್ಕ ರಿಸಿದ್ದ ಬಂದೀಖಾನೆ ಅಧಿಕಾರಿಗಳು
ಸಮರ್ಪಕ ದಾಖಲಾತಿ ಒದಗಿಸಿದ್ದರ ಹಿನ್ನೆಲೆಯಲ್ಲಿ ಪೆರೋಲ್‌ ಬಿಡುಗಡೆಗೆ ಸಹಮತ ವ್ಯಕ್ತಪಡಿಸಿದರು. ಚೆನ್ನೈನ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ತಮ್ಮ ಪತಿಯ ಭೇಟಿಗೆ 15 ದಿನಗಳ ಪೆರೋಲ್‌ ನೀಡಬೇಕು ಎಂದು ಶಶಿಕಲಾ ನಟರಾಜನ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಜೈಲಿನ ಅಧಿಕಾರಿಗಳು 15 ದಿನಗಳ ಬದಲಿಗೆ 5 ದಿನಗಳ ಕಾಲ ಪೆರೋಲ್‌ಗೆ ಅವಕಾಶ ನೀಡಿದ್ದಾರೆ. ಅಲ್ಲದೇ ಕೆಲವು ಷರತ್ತು ಗಳನ್ನು ವಿಧಿಸಿದ್ದು, ಇದನ್ನು ಮೀರಿ ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಪರಾಹ್ನ 3 ಗಂಟೆ ಸುಮಾರಿಗೆ ತಮ್ಮ ಸಂಬಂಧಿ ಟಿಟಿಡಿ ದಿನಕರನ್‌ ಮತ್ತು ಬೆಂಬಲಿಗರೊಂದಿಗೆ ರಸ್ತೆ 
ಮಾರ್ಗವಾಗಿ ಚೆನ್ನೈ ತಲುಪಿದ್ದಾರೆ. 

ಪೆರೋಲ್‌ ದೊರೆತ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಶಶಿಕಲಾ ಸಂಬಂಧಿ ಟಿಟಿಡಿ ದಿನಕರನ್‌ ಮತ್ತು ಪತ್ನಿ ಅನುರಾಧಾ, ಕರ್ನಾಟಕ ಎಐಎ ಡಿಎಂಕೆ ನಾಯಕರಾದ ಪುಗಳೆಂದಿ, ರಾಜಶೇಖರನ್‌, ವೆಲ್ಲೂರಿನ ಬಾಲ ಸುಬ್ರಹ್ಮಣ್ಯಂ “ಚಿನ್ನಮ್ಮ’ನ ಆಗ ಮನಕ್ಕಾಗಿ ಜೈಲಿನ ಆವರಣದಲ್ಲಿ ಕಾಯುತ್ತಿದ್ದರು. 

“ಚಿನ್ನಮ್ಮ’ನಿಗೆ ಷರತ್ತು
ಅ. 7ರಿಂದ ಅ. 11ರ ಸಂಜೆ 5 ಗಂಟೆವರೆಗೆ 5 ದಿನ ಪೆರೋಲ್‌ ನೀಡಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ.ತಾವು ಸಲ್ಲಿಸಿರುವ ಅರ್ಜಿಯಲ್ಲಿ ಪತಿಯ ಅನಾರೋಗ್ಯದ ಬಗ್ಗೆ ಉಲ್ಲೇಖೀಸಿದ್ದೀರಿ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಪತಿ ನಟರಾಜನ್‌ ಅವರನ್ನು ಮಾತ್ರ ಭೇಟಿಯಾಗಬೇಕು. ಯಾವುದೇ ರಾಜಕೀಯ ಚರ್ಚೆ ನಡೆಸಬಾರದು. ಆಸ್ಪತ್ರೆಯಲ್ಲೇ ತಂಗಬೇಕು, ಇಲ್ಲವಾದರೆ ತಮ್ಮ ಅರ್ಜಿಯಲ್ಲಿ ಉಲ್ಲೇಖೀಸಿರುವ ಮನೆ ಯಲ್ಲೇ ವಾಸಿಸಬೇಕು. ಇದೇ ಸಂದರ್ಭವನ್ನು ಬಳಸಿಕೊಂಡು ಆಸ್ಪತ್ರೆ ಅಥವಾ ಮನೆಯಲ್ಲಿ ತಮ್ಮನ್ನು ಭೇಟಿಯಾಗಲು ಬರುವ ರಾಜಕಾರಣಿ ಗಳು, ಬೆಂಬಲಿಗರು ಹಾಗೂ ಸಂದರ್ಶಕರನ್ನು ಭೇಟಿಯಾಗುವಂತಿಲ್ಲ. ಹಾಗೆಯೇ ಚರ್ಚೆ ನಡೆಸುವಂತಿಲ್ಲ. ರಾಜಕೀಯ ಹಾಗೂ ಸಾರ್ವಜನಿಕ ಸಂಬಂಧಿತ ಚಟುವಟಿಕೆಗಳಾಗಲೀ ಪಕ್ಷದ ಚಟುವಟಿಕೆಗಳಾಗಲೀ ನಡೆಸುವಂತಿಲ್ಲ. ಪ್ರಮುಖವಾಗಿ ಯಾವುದೇ ಸಂದರ್ಭದಲ್ಲಿಯೂ ಮಾಧ್ಯಮ (ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ)ಕ್ಕೆ ಪ್ರತಿಕ್ರಿಯೆ ನೀಡಬಾರದು. ಒಂದು ವೇಳೆ ನಿಯಮ ಉಲ್ಲಂ ಸಿದರೆ ಶಿಸ್ತು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಚೆನ್ನೈ ಪೊಲೀಸರಿಂದ ಎನ್‌ಓಸಿ
ಬೆಳಗ್ಗೆ 11 ಗಂಟೆ ಸುಮಾರಿಗೆ ತಮಿಳುನಾಡಿನ ಇಬ್ಬರು ವಕೀಲರ ಜತೆ ಟಿಟಿಡಿ ದಿನಕರನ್‌, ಪತ್ನಿ ಅನುರಾಧ, ಇಳವರಸಿ ಪುತ್ರ ಕಾರ್ತಿಕ್‌, ಪತ್ನಿ ಅರ್ಚನಾ ಹಾಗೂ ರಾಜ್ಯ ಎಐಎಡಿಎಂಕೆ ನಾಯಕ ಪುಗಳೆಂದಿ ಜೈಲಿನ ಒಳಗೆ
ಪ್ರವೇಶಿದರು. ಬಳಿಕ ಜೈಲಿನ ಅಧಿಕಾರಿಗಳ ಜತೆ ಪೆರೋಲ್‌ ಕುರಿತು ಚರ್ಚಿಸಿದರು. ನಂತರ ಜೈಲು ಅಧಿಕಾರಿಗಳು ಚೆನ್ನೈನ ಪೊಲೀಸ್‌ ಆಯುಕ್ತರಿಗೆ ಈ-ಮೇಲ್‌ ಮೂಲಕ ಪತ್ರ ಬರೆದಿದ್ದು, ಪೆರೋಲ್‌ ಮೇಲೆ ಬರುತ್ತಿರುವ ಶಶಿಕಲಾ ಷರತ್ತುಗಳನ್ನು ಮೀರದಂತೆ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡರು. ಇದಕ್ಕೆ ಚೆನ್ನೈನ ಕಮಿಷನರ್‌, ಶಶಿಕಲಾ ಪೆರೋಲ್‌ ಮೇಲೆ ಬಂದರೆ ಯಾವುದೇ ತೊಂದರೆ ಇಲ್ಲ. ಇಲ್ಲಿ ಎಲ್ಲ ರೀತಿಯ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು
ಈ-ಮೇಲ್‌ ಮೂಲಕವೇ ಪ್ರತಿಕ್ರಿಯೆ ನೀಡಿದರು. ಅಲ್ಲದೇ ಹೊಸೂರು ಮಾರ್ಗದಿಂದ ಚೆನ್ನೈನ ಆಸ್ಪತ್ರೆವರೆಗೆ ಸೂಕ್ತ ಭದ್ರತೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಶಿಕಲಾ ನಟರಾಜನ್‌ ಹೊರಟರು.

ಮೊದಲು ವಿಮಾನ ಆಮೇಲೆ ಕಾರು
ಆರಂಭದಲ್ಲಿ ಜೈಲಿನ ಅಧಿಕಾರಿಗಳಿಗೆ ಟಿಟಿಡಿ ದಿನಕರನ್‌ ಚಿನ್ನಮ್ಮನನ್ನು ವಿಮಾನದಲ್ಲಿ ಕರೆದೊಯ್ಯುವುದಾಗಿ ತಿಳಿಸಿದ್ದರು. ಸಂಜೆ 4.10, 5.10 ಹಾಗೂ 7.10ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನಗಳ ಪೈಕಿ ಒಂದರಲ್ಲಿ
ಕರೆದೊಯ್ಯುವುದಾಗಿ ಮಾಹಿತಿ ನೀಡಿದರು.  ನಂತರ ಏಕಾಏಕಿ ರಸ್ತೆ ಮಾರ್ಗವಾಗಿಯೇ ಕರೆದೊಯ್ಯುವುದಾಗಿ ತಿಳಿಸಿದರು. ಆ ಮೂಲಕ ಜೈಲಿನ ಅಧಿಕಾರಿಗಳಿಗೆ ಗೊಂದಲ ಉಂಟು ಮಾಡಿದರು.

ಪ್ರಮುಖ ಷರತ್ತುಗಳು
1. ಆಸ್ಪತ್ರೆ ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಪತಿ ನಟರಾಜನ್‌ ಅವರನ್ನು ಮಾತ್ರ ಭೇಟಿಯಾಗಬೇಕು.

2. ಆಸ್ಪತ್ರೆಯಲ್ಲೇ ತಂಗಬೇಕು ಇಲ್ಲವಾದರೆ ತಾವು ಅರ್ಜಿಯಲ್ಲಿ ಉಲ್ಲೇಖೀಸಿರುವ ಮನೆಯಲ್ಲೇ ವಾಸಿಸಬೇಕು.

3. ಯಾವುದೇ ರಾಜಕೀಯ ಮುಖಂಡರ ಜತೆ ಚರ್ಚೆ ನಡೆಸಬಾರದು.

4. ಆಸ್ಪತ್ರೆ ಅಥವಾ ಮನೆಯಲ್ಲಿ ತಮ್ಮನ್ನು ಭೇಟಿಯಾಗಲು ಬರುವ ರಾಜಕಾರಣಿ, ಬೆಂಬಲಿಗರು ಹಾಗೂ ಸಂದರ್ಶಕರನ್ನು ಭೇಟಿಯಾಗುವಂತಿಲ್ಲ.

5. ರಾಜಕೀಯ ಹಾಗೂ ಸಾರ್ವಜನಿಕ ಸಂಬಂಧಿತ ಚಟುವಟಿಕೆಗಳ ಲ್ಲಾಗಲಿ, ಪಕ್ಷದ ಚಟುವಟಿಕೆಗಳಲ್ಲಾಗಲಿ ಪಾಲ್ಗೊಳ್ಳುವಂತಿಲ್ಲ.

6. ಪ್ರಮುಖವಾಗಿ ಯಾವುದೇ ಸಂದರ್ಭದಲ್ಲಿಯೂ ಮಾಧ್ಯಮ
(ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ)ಕ್ಕೆ ಪ್ರತಿಕ್ರಿಯೆ ನೀಡಬಾರದು. 

 

ಟಾಪ್ ನ್ಯೂಸ್

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.