ಕುಣಿಗಲ್ನಲ್ಲಿ ತಂದೆ, ಮಗಳು ನೀರು ಪಾಲು
Team Udayavani, Jan 16, 2018, 6:15 AM IST
ಕುಣಿಗಲ್: ಸಂಕ್ರಾಂತಿಯಂದು ಸಂಜೆ ಕಿಚ್ಚು ಹಾಯಿಸುವ ಸಲುವಾಗಿ ಸೋಮವಾರ ಬೆಳಗ್ಗೆ ಕೆರೆಯಲ್ಲಿ ಎತ್ತುಗಳ ಮೈ
ತೊಳೆಯಲು ಹೋಗಿದ್ದ ತಂದೆ ಮತ್ತು ಮಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಚಿಕ್ಕಮಾವತ್ತೂರು ಬಳಿಯ ಸಿದ್ದಯ್ಯನಕೆರೆ ಪಾಳ್ಯದಲ್ಲಿ ನಡೆದಿದೆ.
ಗ್ರಾಮದ ನಂಜುಂಡಯ್ಯ(50) ಮತ್ತು ಆತನ ಮಗಳು ಅರ್ಪಿತಾ(14) ಮೃತರು . 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅರ್ಪಿತಾ ತಂದೆ ಜತೆ ಸೋಮವಾರ ಬೆಳಗ್ಗೆ ದನಗಳನ್ನು ಸಿದ್ದಯ್ಯನಕೆರೆ ದಂಡೆಯಲ್ಲಿ ಇಳಿಸಿ ಮೈ ತೊಳೆಯುತ್ತಿದ್ದರು. ಸುಮಾರು 10 ಅಡಿ ಆಳವಿದ್ದ ಕೆರೆಯಲ್ಲಿ ದನಗಳು ಮುಂದೆ-ಮುಂದೆ ಎಳೆದುಕೊಂಡು ಹೋಗಿವೆ. ಅವುಗಳನ್ನು ರಕ್ಷಿಸಲು ಮುಂದಾದಾಗ ತಂದೆ,ಮಗಳು ಇಬ್ಬರೂ ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.