ನಾನು, ಮಗ ಕೈ ಬಿಡಲ್ಲ: ಶಾಸಕ ಶಾಮನೂರು
Team Udayavani, Mar 22, 2018, 6:40 AM IST
ದಾವಣಗೆರೆ: “ಯಾವುದೇ ಕಾರಣಕ್ಕೂ ನಾನಾಗಲಿ ಅಥವಾ ನನ್ನ ಮಗ ಎಸ್.ಎಸ್. ಮಲ್ಲಿಕಾರ್ಜುನ್ ಆಗಲಿ ಕಾಂಗ್ರೆಸ್ ಬಿಡೋ ಪ್ರಶ್ನೆಯೇ ಇಲ್ಲ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಹಾಗೂ ನನ್ನ ಮಗ ಮಲ್ಲಿಕಾರ್ಜುನ್ ಬಿಜೆಪಿ ಸೇರಲಿದ್ದಾರೆ ಎಂಬುದೆಲ್ಲ ಕೇವಲ ವದಂತಿ. ನಾನೂ ಬಿಜೆಪಿಗೆ ಹೋಗೋದಿಲ್ಲ. ನನ್ನ ಮಗ ಮಲ್ಲಿಕಾರ್ಜುನ್ ಸಹ ಹೋಗಲ್ಲ. ಕಾಂಗ್ರೆಸ್ನಲ್ಲೇ ಇರುತ್ತೇವೆ. ಇಂತಹ ವದಂತಿಯಲ್ಲಾ ಸುಳ್ಳು. ಬಿಜೆಪಿಯಲ್ಲಿ ಜೈಲಿಗೆ ಹೋಗದ ಯಾರಾದರೂ ಇದ್ದರೆ ಬರಲಿ, ಕಾಂಗ್ರೆಸ್ಗೆ ಸೇರಿಸಿಕೊಳ್ಳುತ್ತೇವೆ’ ಎಂದರು.