ನಾನೇಕೆ ಹಸ್ತಕ್ಷೇಪ ಮಾಡಲಿ: ರೇವಣ್ಣ
Team Udayavani, Jun 15, 2018, 6:45 AM IST
ಹಾಸನ: ತಾವು ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಅಂತಹ ಪರಿಸ್ಥಿತಿಯೂ ಬಂದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.
ಇಂಧನ ಇಲಾಖೆಯ ಎಂಜಿನಿಯರ್ಗಳ ವರ್ಗಾವಣೆಯ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಂಜಿನಿಯಯರ್ ವರ್ಗಾವಣೆಯ ವಿಚಾರ ತಮಗೆ ಗೊತ್ತಿಲ್ಲ. ಅದು ಮುಖ್ಯಮಂತ್ರಿಯವರಿಗೆ ಸೇರಿದ್ದು. ಅವರು ಏನು ಮಾಡಿದ್ದಾರೋ ತಮಗೆ ಗೊತ್ತಿಲ್ಲ. ಬೇರೆ ಇಲಾಖೆಯಲ್ಲಿ ತಾವೇಕೆ ಹಸ್ತಕ್ಷೇಪ ಮಾಡಲಿ. ಲೋಕೋಪಯೋಗಿ ಇಲಾಖೆ ಹಾಗೂ ಹಾಸನ ಜಿಲ್ಲೆಗೆ ಸಂಬಂಧಪಟ್ಟ ಕೆಲಸವನ್ನು ಮಾತ್ರ ನಾನು ಮಾಡ್ತೇನೆ ಎಂದು ಹೇಳಿದರು.