ಬಜೆಟ್ನಲ್ಲಿ ರೈತರ ಸಾಲ ಮನ್ನಾ ಖಚಿತ
Team Udayavani, Jun 26, 2018, 6:20 AM IST
ಪಾಂಡವಪುರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ನಲ್ಲಿ ರೈತರ ಸಾಲ ಮನ್ನಾ
ಆಗುವುದು ಖಚಿತ. ಈ ವಿಚಾರದಲ್ಲಿ ರೈತರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ
ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲಮನ್ನಾ ಮಾಡಲು ಸಿಎಂ ಕುಮಾರಸ್ವಾಮಿ ಸಿದಟಛಿರಿ
ದ್ದಾರೆ. ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ ಸಾಲ ಮನ್ನಾ ಮಾಡಲು ರೂಪರೇಷೆ ಸಿದಟಛಿಪಡಿಸಿದ್ದಾರೆ. ಬಜೆಟ್
ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದು, ಸಾಲಮನ್ನಾ ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದರು.
ದೇವೇಗೌಡರು ಮಂಡ್ಯ ಅಭ್ಯರ್ಥಿಯಾಗಲು ಒತ್ತಡ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರ
ಉತ್ಸುಕರಾಗಿದ್ದಾರೆ.ಅವರನ್ನೇ ಕಣಕ್ಕಿಳಿಸಲು ಒತ್ತಾಯ ಮಾಡುತ್ತಿದ್ದೇವೆ. ಆದರೆ, ಇನ್ನೂ ಯಾವುದೂ
ಅಂತಿಮಗೊಂಡಿಲ್ಲ. ದೇವೇಗೌಡರು ತಮ್ಮ ನಿರ್ಧಾರವನ್ನು ಇನ್ನೂ ತಿಳಿಸದ ಕಾರಣ ಕಾದು ನೋಡುವುದಕ್ಕೆ ನಾವು
ನಿರ್ಧರಿಸಿದ್ದೇವೆ ಎಂದರು.