ಯುದ್ಧ ವಿಮಾನ ಪೈಲೆಟ್ ಆಗಿ ಶಿವಕುಮಾರ ಆಯ್ಕೆ
Team Udayavani, Jun 29, 2018, 7:10 AM IST
ಕುಮಟಾ: ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡದ ನಿವಾಸಿ, ನಿವೃತ್ತ ಸೈನಿಕ ಶಾಂತಾರಾಮ ಹಾಗೂ
ಜ್ಯೋತಿ ಭಟ್ಟ ಕೆರೆಯವರ ಪುತ್ರ ಶಿವಕುಮಾರ ಭಟ್ಟ ಕೆರೆ ಭಾರತೀಯ ವಾಯುದಳ ಯುದ್ಧ ವಿಮಾನದ ಪೈಲೆಟ್ ಆಗಿ
ಆಯ್ಕೆಯಾಗಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ 2014ರ ಯುಪಿಎಸ್ಸಿ ಪರೀಕ್ಷೆ ಮೂಲಕ ಆಯ್ಕೆಯಾಗಿದ್ದ ಅವರು,ವಾಯುಯಾನ ವಿಭಾಗದಲ್ಲಿ ಮೂರು ವರ್ಷ ಕಠಿಣ ತಾಂತ್ರಿಕ ತರಬೇತಿ ಪೂರೈಸಿದ್ದರು.
ಬಳಿಕ ಹೈದರಾಬಾದ್ನ ವಾಯುದಳದ ಅಕಾಡೆಮಿಯಲ್ಲಿ ಒಂದು ವರ್ಷ ವಿಮಾನ ಚಾಲನೆ ತರಬೇತಿ ಪೂರ್ಣಗೊಳಿಸಿ
ವಾಯಸೇನೆಯಲ್ಲಿ ಯುದ್ಧ ವಿಮಾನವೊಂದರ ಪೈಲೆಟ್ ಆಗಿ ನೇಮಕಗೊಂಡಿದ್ದಾರೆ. ರಾಜ್ಯದ ಬೀದರ್ನಲ್ಲಿರುವ
ವಾಯುಸೇನೆ ನೆಲೆಯಲ್ಲಿ ಜು.1ರಿಂದ ಯುದ್ಧ ವಿಮಾನಗಳ ಕುರಿತ ವಿಶೇಷ ತರಬೇತಿ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ