ಕೂಡಲೇ ಕ್ಷಮೆ ಕೇಳದಿದ್ದರೆ ಬಹಿಷ್ಕಾರ: ಸುಲಫಲ ಶ್ರೀ
Team Udayavani, Oct 20, 2018, 6:50 AM IST
ಕಲಬುರಗಿ: ಡಿ.ಕೆ.ಶಿವಕುಮಾರ ಅವರಿಗೆ ಅವನತಿ ಕಾಲ ಬಂದಿದೆ. ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟದಿಂದ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ ಎನ್ನುವವರು ಒಕ್ಕಲಿಗ ಸಮಾಜದಿಂದ ಎಷ್ಟು ಓಟು ತಂದಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದು ಸುಲಫಲ ಮಠಾಧೀಶ ಹಾಗೂ ಶ್ರೀಶೈಲ ಸಾರಂಗಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ 60 ಲಿಂಗಾಯಿತ ಶಾಸಕರು ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದಾರೆ. ವೈದಿಕ ಶ್ರೀಗಳ ಒತ್ತಡಕ್ಕೆ ಒಳಗಾಗಿ ಅವರು ಹೀಗೆ ಮಾತನಾಡಿದ್ದಾರೆ. ಡಿಕೆಶಿ ಕೂಡಲೇ ಕ್ಷಮೆ ಕೇಳಬೇಕು. ಲಿಂಗಾಯಿತ ವಿಚಾರದಲ್ಲಿ ಕೈ ಹಾಕುವುದು ಬಿಡಬೇಕು. ಇಲ್ಲದಿದ್ದರೆ ಉತ್ತರ ಕರ್ನಾಟಕಕ್ಕೆ ಬರದಂತೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದರು.