ಕಲಬುರಗಿಯಲ್ಲಿ 27, 28ರಂದು ಪಿಎಸಿ ಸಭೆ
Team Udayavani, Nov 17, 2018, 6:50 AM IST
ಕಲಬುರಗಿ: ಕೇಂದ್ರ ಸಂಸತ್ತಿನ ಮಹತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆ ಮೊದಲ ಬಾರಿಗೆ ರಾಜ್ಯದಲ್ಲಿ ನಡೆಯುತ್ತಿದ್ದು, ಸಮಿತಿ ಅಧ್ಯಕ್ಷರಾಗಿರುವ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನ.27, 28ರಂದು ಕಲಬುರಗಿಯಲ್ಲಿ ಸಭೆ ನಿಗದಿಯಾಗಿದೆ.
ಸಮಿತಿ ಸಭೆ ಹೆಚ್ಚಾಗಿ ದೆಹಲಿಯಲ್ಲಿ ನಡೆಯುತ್ತದೆ. ಇದರ ಜತೆಗೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಉದಾಹರಣೆಗಳೂ ಇವೆ. ಖರ್ಗೆ ಅಧ್ಯಕ್ಷತೆಯಲ್ಲಿಯೇ ಮುಂಬೈ, ಭುವನೇಶ್ವರ, ವಿಶಾಖಪಟ್ಟಣದಲ್ಲೂ ಸಮಿತಿ ಸಭೆ ನಡೆದಿದೆ.
ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ನಡೆಯಲಿದ್ದು, ಈ ಕುರಿತು ಎರಡೂ¾ರು ದಿನದೊಳಗೆ ಕೇಂದ್ರದಿಂದ ಅಧಿಕೃತ ಆದೇಶ ಹೊರಬೀಳಲಿದೆ. ನ.3 ಹಾಗೂ 4ರಂದೇ ಪಿಎಸಿ ಸಭೆ ನಡೆಸಲು ಮುಹೂರ್ತ ನಿಗದಿಯಾಗಿತ್ತು. ಆದರೆ ಆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭೆ ಸೇರಿ ಇತರ ಕ್ಷೇತ್ರಗಳ ಉಪಚುನಾವಣೆ ನಡೆದಿದ್ದರಿಂದ ಕೊನೇ ಘಳಿಗೆಯಲ್ಲಿ ಮುಂದೂಡಲಾಗಿತು.