ಮೈಸೂರಿನಲ್ಲಿ ಭೀಕರ ಅಪಘಾತ; ಒಂದೇ ಬೈಕ್ನಲ್ಲಿದ್ದ ಮೂವರ ದುರ್ಮರಣ
Team Udayavani, Dec 2, 2018, 12:27 PM IST
ಮೈಸೂರು:ನಂಜನಗೂಡಿನ ಕಲ್ಕುಂದ ಗೇಟ್ ಬಳಿ ಭಾನುವಾರ ಬೆಳಗ್ಗೆ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಸಂಭವಿಸಿದೆ.
ಟಿ ನರಸೀಪುರ ರಸ್ತೆಯಲ್ಲಿ ಅವಘಡ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಒಂದೇ ಬೈಕ್ನಲ್ಲಿದ್ದ ಚಂದ್ರ , ಬಸವಸ್ವಾಮಿ ಮತ್ತು ಪ್ರಭು ಎನ್ನುವ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಅಪಘಾತ ತೀವ್ರತೆಗೆ ಲಾರಿಯ ಮುಂಭಾಗವೇ ಜಖಂಗೊಂಡಿದೆ. ಮೂವರ ದೇಹಗಳು ಮತ್ತು ಬೈಕ್ ಛಿದ್ರಗೊಂಡಿದೆ.
ಬಿಳಿಗೆರೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.