ಸಾಲಬಾಧೆ ರೈತ ಆತ್ಮಹತ್ಯೆ
Team Udayavani, Dec 15, 2018, 7:24 AM IST
ಸವದತ್ತಿ: ಸಾಲದ ಬಾಧೆ ತಾಳದೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ಶಂಕರಪ್ಪ ಬಸಪ್ಪ ದಳವಾಯಿ (50) ಆತ್ಮಹತ್ಯೆ ಮಾಡಿ ಕೊಂಡ ರೈತ. ಕಡಬಿಯ ಕಾರ್ಪೊ
ರೇಷನ್ ಬ್ಯಾಂಕ್ನಲ್ಲಿ 3.95 ಲಕ್ಷ ರೂ. ಮತ್ತು ಗ್ರಾಮದಲ್ಲಿ 2 ಲಕ್ಷ ರೂ. ಕೈಗಡ ಸಾಲ ಸೇರಿ ಒಟ್ಟು 5.95 ಲಕ್ಷ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. 4 ಎಕರೆ 27 ಗುಂಟೆ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದ. ಮಳೆಯಾಗದೇ ಸರಿಯಾಗಿ ಬೆಳೆ ಬಂದಿರಲಿಲ್ಲ. ಇದರಿಂದ ಸಾಲ ಮರಳಿ ತೀರಿಸಲು ಸಾಧ್ಯವಾಗದೇ ಮಾನಸಿಕವಾಗಿ ಕುಗ್ಗಿ ಬುಧವಾರ ವಿಷ ಸೇವಿಸಿದ್ದ ಎನ್ನಲಾಗಿದೆ. ಮೃತ ರೈತನಿಗೆ ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.