ಸ್ವಿಗ್ಗಿ ಹುಡುಗನೊಂದಿಗೆ ಮ್ಯಾನೇಜರ್ ಜಗಳ: ಹೊಟೇಲ್ನಲ್ಲಿ ದಾಂಧಲೆ
Team Udayavani, Jan 13, 2019, 4:08 AM IST
ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್ನೊಂದಿಗೆ ಎಂಪೈರ್ ಹೊಟೇಲ್ನ ಮ್ಯಾನೇಜರ್ ಜಗಳವಾಡಿದ ಬಳಿಕ ಗಲಾಟೆ ನಡೆದು ಹೊಟೇಲ್ನ ಗಾಜುಗಳನ್ನು ಧ್ವಂಸಗೈದ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ನೊಂದಿಗೆ ಘರ್ಷಣೆ ಸಂಭವಿಸಿದ್ದು, ಸ್ವಿಗ್ಗಿ ಡೆಲಿವರಿ ಬಾಯ್ನ ಮೇಲೆ ಹಲ್ಲೆ ನಡೆದಿದೆ. ಆ ಬಳಿಕ ಗಲಾಟೆ ನಡೆದಿದೆ. ಸ್ಥಳಕ್ಕೆ ಬಂದ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಇಬ್ಬರನ್ನೂ ಕರೆಸಿ ವಿಚಾರಣೆ ನಡೆಸಿ ಬಿಡಲಾಗಿದೆ.
ಆ ಬಳಿಕ ಸ್ವಿಗ್ಗಿ ಹುಡುಗರು ಕನ್ನಡ ಪರ ಸಂಘಟನೆಯೊಂದರ ಕಾರ್ಯಕರ್ತರೊಂದಿಗೆ ಆಗಮಿಸಿ ಹೊಟೇಲ್ ಮೇಲೆ ಕಲ್ಲು ಹೊಡೆದು ಪರಾರಿಯಾಗಿದ್ದಾರೆ.
ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ 20 ಜನರನ್ನು ವಶಕ್ಕೆ ಪಡೆದಿದ್ದಾರೆ.