ಕಪ್ಪು ಕನ್ನಡಕ ಧರಿಸಿ ಆನಂದ್ ಸಿಂಗ್ ಅಧಿವೇಶನಕ್ಕೆ ಹಾಜರ್
Team Udayavani, Feb 6, 2019, 5:39 AM IST
ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಬಳ್ಳಾರಿ ಶಾಸಕ ಆನಂದ್ ಸಿಂಗ್ ಹಾಜರಾಗಿದ್ದಾರೆ. ಇತ್ತೀಚೆಗೆ ನಡೆದ ರೆಸಾರ್ಟ್ ಕಲಹದಲ್ಲಿ ಗಾಯಗೊಂಡಿದ್ದ ಆನಂದ್ ಸಿಂಗ್ ಕಪ್ಪು ಕನ್ನಡಕ ಧರಿಸಿಕೊಂಡೇ ವಿಧಾನಮಂಡಲ ಅಧಿವೇಶನಕ್ಕೆ ಬಂದಿದ್ದಾರೆ.
ಶಾಸಕ ಆನಂದ್ ಸಿಂಗ್ ಇಂದು ಅಧಿವೇಶನಕ್ಕೆ ಹಾಜರಾಗುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಕಣ್ಣಿನ ಭಾಗದಲ್ಲಿ ಗಾಯಗೊಂಡಿದ್ದ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸಚಿವ ಜಮೀರ್ ಅಹಮದ್ ಖಾನ್ ಜೊತೆ ಆಗಮಿಸಿದ ಅವರು ಕಪ್ಪು ಕನ್ನಡಕ ತೊಟ್ಟಿದ್ದರು.
ಅತೃಪ್ತ ಶಾಸಕರ ಗೈರು ಹಾಜರಿಯ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆದ್ದರಿಂದ ಇಂದಿನ ವಿಧಾನ ಮಂಡಲ ಅಧಿವೇಶನ ಹಲವು ಕುತೂಹಲಗಳಿಗೆ ಕಾರಣವಾಗಿದೆ.