ಮಾತುಕತೆಗೆ ಗೌಡರ ಹಿಂದೇಟು
Team Udayavani, Feb 23, 2019, 12:30 AM IST
ಬೆಂಗಳೂರು: ಲೋಕಸಭೆ ಚುನಾವಣೆ ಸೀಟು ಹೊಂದಾಣಿಕೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಮಾತುಕತೆ ನಡೆಸುವು ದಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಹೇಳಿರುವುದು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮೂಡಿಸಿದೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಂಗಳೂರಿಗೆ ಬಂದಿದ್ದರೂ, ದೇವೇಗೌಡರನ್ನು ಭೇಟಿಯಾಗದೇ ತೆರಳಿರು ವುದು ಸೀಟು ಹಂಚಿಕೆ ವಿಚಾರ ಕಗ್ಗಂಟಾಗಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.
ಗುರುವಾರ ರಾತ್ರಿ ರಾಜ್ಯಕ್ಕೆ ಆಗಮಿಸಿದ್ದ ಕೆ.ಸಿ. ವೇಣುಗೋಪಾಲ್, ಅಂದೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದ ರಾಮಯ್ಯ ಸಹಿತ ಪಕ್ಷದ ನಾಯಕರ ತುರ್ತು ಸಭೆ ನಡೆಸಿದರು. ದಿನೇಶ್ ಗುಂಡೂ ರಾವ್ ಅವರು ದೇವೇ ಗೌಡ ರೊಂದಿಗೆ ನಡೆ ಸಿರುವ ಮಾತುಕತೆ ಬಗ್ಗೆಯೂ ಚರ್ಚಿಸಿ ದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ದೇವೇ ಗೌಡರು ಗರಂ ಆಗಿರುವ ವಿಷಯದ ಬಗ್ಗೆಯೂ ಪ್ರಸ್ತಾವವಾಯಿತು. ಮೈತ್ರಿ ವಿಚಾರವಾಗಿ ದೇವೇಗೌಡರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುವುದಾಗಿ ದಿನೇಶ್ ಗುಂಡೂರಾವ್ ಬಳಿ ಹೇಳಿರುವುದರಿಂದ ವೇಣುಗೋಪಾಲ್ ಅವರು ಶುಕ್ರವಾರ ದೇವೇಗೌಡರನ್ನು ಭೇಟಿ ಮಾಡುವ ಚಿಂತನೆಯಿತ್ತಾದರೂ ಭೇಟಿ ಮಾಡದೆ ಕೊಚ್ಚಿಗೆ ತೆರಳಿದರು.ಇದರಿಂದಾಗಿ ಸದ್ಯಕ್ಕೆ ಕಾಂಗ್ರೆಸ್ ಜತೆ ಮಾತುಕತೆ ಅನುಮಾನ ಎನ್ನಲಾಗಿದೆ.