ವಾರದಿಂದ ಹನಿ ನೀರಿಗಾಗಿ ಹಾಹಾಕಾರ


Team Udayavani, Mar 4, 2019, 11:02 AM IST

water.jpg

ಹುಳಿಯಾರು: ಶೆಟ್ಟಿಕೆರೆ ಹೋಬಳಿಯ ಜೆ.ಸಿ.ಗ್ರಾಪಂ ವ್ಯಾಪ್ತಿಯ ಸಾಸಲು, ಸಾಸಲು ಗೊಲ್ಲರಹಟ್ಟಿ, ಮಾಸ್ತಯ್ಯನಪಾಳ್ಯದಲ್ಲಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಾರದಿಂದ ಹನಿ ನೀರಿಗಾಗಿ ಹಾಹಾಕಾರ ನಿರ್ಮಾಣವಾಗಿದ್ದರೂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮೌನ ವಹಿಸಿದ್ದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಾಸಲು ಗ್ರಾಮವು ಸರಿಸುಮಾರು ಐನೂರಕ್ಕೂ ಹೆಚ್ಚು ಮನೆಗಳಿದ್ದು, ಈ   ಗ್ರಾಮದ ನೀರಿನ ವ್ಯವಸ್ಥೆಗೆ 4 ಕೊಳವೆ ಬಾವಿ ಕೊರೆಸಿ ಎರಡು ಓವರ್‌ ಹೆಡ್‌ ಟ್ಯಾಂಕ್‌ 38 ಸಿಸ್ಟನ್‌ಗಳನ್ನು ಇಟ್ಟು ನೀರು ಪೂರೈಸಲಾಗುತ್ತಿತ್ತು. ಆದರೆ, ಕಳೆದ ಹತ್ತದಿನೈದು ದಿನಗಳ ಹಿಂದೆ 3 ಬೋರ್‌ ವೆಲ್‌ಗ‌ಳಲ್ಲಿ ಅಂತರ್ಜಲ ಬರಿದಾಗಿದ್ದು, ಇರುವ ಒಂದೇ ಬೋರ್‌ನಲ್ಲಿ 500 ಮನೆಗೆ ನೀರು ಸರಬರಾಜು ಮಾಡುವಂತಾಗಿದೆ. ಹಾಗಾಗಿ ಒಂದು ಬೀದಿಗೆ ನೀರು ಕೊಟ್ಟರೆ ಇನ್ನೊಂದು ಬೀದಿಗೆ ನೀರಿಲ್ಲದಾಗಿ ಅಕ್ಕಪಕ್ಕದ ತೋಟದ ಬೋರ್‌ಗಳಿಂದ ಜನ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ.

ತೋಟದ ಮಾಲೀಕರಿಗೆ ದುಂಬಾಲು: ಇನ್ನು ಸಾಸಲು ಗೊಲ್ಲರಹಟ್ಟಿ 80 ಮನೆಗಳ ಗ್ರಾಮವಾಗಿದ್ದು , 2 ಕೊಳವೆ ಬಾವಿಯಿಂ 9 ಸಿಸ್ಟನ್‌ ತುಂಬಿಸಿ ಗ್ರಾಮದ ಜನರಿಗೆ ನೀರು ಕೊಡಲಾಗುತ್ತಿತ್ತು. ಈ ಎರಡೂ ಬೋರ್‌ಗಳಲ್ಲೂ ಹತ್ತದಿನೈದು ದಿನಗಳ ಹಿಂದೆ ಅಂತರ್ಜಲ ಬರಿದಾಗಿ ಹನಿ ನೀರು ಬಾರದಂತ್ತಾಗಿದೆ. ಪರಿಣಾಮ ಒಂದೆರಡು ಕಿ.ಮೀ ದೂರದಿಂದ ತೋಟದ ಮಾಲೀಕರನ್ನು ಕಾಡಿಬೇಡಿ ನೀರು ತರುವ ವಿಷಮ ಪರಿಸ್ಥಿತೆ ಇಲ್ಲಿನ ನಿವಾಸಿಗಳದ್ದಾಗಿದೆ. ಮೊದಲೇ ಕೂಲಿನಾಲಿ ಮಾಡುವ ಇಲ್ಲಿನ ಜನ ನೀರಿಗೊದರೆ ಕೂಲಿ ಇಲ್ಲ; ಕೂಲಿಗೋದರೆ ನೀರಿಲ್ಲ ಎನ್ನುವ ಸಂಕಷ್ಟ ಎದುರಿಸುತ್ತಿದ್ದಾರೆ.

ಗಂಭೀರ ಪರಿಸ್ಥಿತಿ: ಅಲ್ಲದೇ ಈ ಭಾಗದಲ್ಲಿ ದನಕರುಗಳು ಹಾಗೂ ಕುರಿಮೇಕೆಗಳು ಸಾಕಷ್ಟಿದ್ದು, ಈ ಜಾನುವಾರುಗಳ ದಾಹ ತಣಿಸುವ ರೈತರ ಗೋಳು ಹೇಳತೀರದಾಗಿದೆ. ಜೊತೆಗೆ ಇಲ್ಲಿನ ಶಾಲೆಯ ಬಿಸಿಯೂಟಕ್ಕೂ ನೀರಿಲ್ಲದೆ ಬಿಸಿಯೂಟದ ಸಿಬ್ಬಂದಿ ದೂರದ ತೋಟಗಳಿಂದ ಹೊತ್ತು ತಂದು ಅಡುಗೆ ಮಾಡಬೇಕಿದೆ. ಶಾಲೆಗೆ ಬರುವ ಮಕ್ಕಳಂತೂ ತುಪ್ಪದ ರೀತಿ ನೀರನ್ನು ಬಳಸುವಂತ್ತಾಗಿದೆ. ಮೊದಲೇ ಬಿಸಿಲ ಧಗೆ ಹೆಚ್ಚಾಗಿದ್ದು,ಬಾಯಾರಿಕೆ ಹೋಗಲಾಡಿಸಲಿಕ್ಕಾದರೂ ಹೊಟ್ಟೆ ತುಂಬ ನೀರು ಕುಡಿಯದಂತ ಹಾಹಾಕಾರ ಇಲ್ಲಿದೆ. ಮಾಸ್ತಯನಪಾಳ್ಯದ ಪರಿಸ್ಥಿತಿ ಇದನ್ನು ಹೊರತಾಗಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ: ಈ ಬಗ್ಗೆ ತಾಪಂ ಇಒ, ಗ್ರಾಪಂ ಪಿಡಿಒ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಸಮಸ್ಯೆ ಪರಿಹರಿಸದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹಾಗಾಗಿಮೇಲಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ಟ್ಯಾಂಕರ್‌ ಮೂಲಕ ನೀರನ್ನುಪೂರೈಸಿ ಹಾಹಾಕಾರ ನೀಗಿಸಬೇಕಿದೆ.ಅಲ್ಲದೇ ಹೊಸ ಕೊಳವೆ ಬಾವಿ ಕೊರೆಸಿ  ಗ್ರಾಮದ ನೀರಿನ ಸಮಸ್ಯೆಯನ್ನುಶಾಶ್ವತವಾಗಿ ಪರಿಹರಿಸುವಂತೆ ಮನವಿ ಮಾಡಿದ್ದಾರೆ. 

ಟಾಪ್ ನ್ಯೂಸ್

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.